ಕುದಿಯುವ ಹಾಲಿನಲ್ಲಿ ಅಂಬೆಗಾಲಿಡುವ ಮಗುವಿಗೆ ಸ್ನಾನ ಮಾಡಿಸಿದ ಅರ್ಚಕ!
ಬಲ್ಲಿಯಾ ಜೂನ್ 29: ಧಾರ್ಮಿಕ ಆಚರಣೆಯ ಭಾಗವಾಗಿ ಪಾದ್ರಿಯೊಬ್ಬರು ಅಂಬೆಗಾಲಿಡುವ ಮಗುವಿಗೆ ಕುದಿಯುವ ಹಾಲಿನಲ್ಲಿ ಸ್ನಾನ ಮಾಡಿಸಿದ ಘಟನೆ ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಈ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವರದಿಗಳ ಪ್ರಕಾರ, ಜಿಲ್ಲೆಯ ಶ್ರವಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪವಿತ್ರ ನಗರವಾದ ವಾರಣಾಸಿಯ ಪಾದ್ರಿಯೊಬ್ಬರು ಮಗುವಿಗೆ ಧಾರ್ಮಿಕ ಆಚರಣೆಯ ಭಾಗವಾಗಿ ಕುದಿಯುವ ಹಾಲಿನಲ್ಲಿ ಸ್ನಾನ ಮಾಡಿಸಿದ್ದಾರೆ. ವಿಡಿಯೋದಲ್ಲಿ ಕಂಡು ಬಂದ ಅರ್ಚಕನ ಹೆಸರು ವಾರಣಾಸಿಯ ಪಂಡಿತ್ ಅನಿಲ್ ಭಗತ್ ಎಂದು ಗುರುತಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಅರ್ಚಕ ಮಗುವನ್ನು ತನ್ನ ಮೊಣಕಾಲಿನ ಮೇಲೆ ಕೂರಿಸಿಕೊಂಡು, ಕುದಿಯುವ ಹಾಲಿನ ಪಾತ್ರೆಯಿಂದ ನೊರೆಯನ್ನು ಹಿಡಿದು ಮಗುವಿನ ಮುಖಕ್ಕೆ ಹಚ್ಚುತ್ತಾನೆ. ಮಗು ನಿರಂತರವಾಗಿ ಅಳುವುದನ್ನು ಕಾಣಬಹುದು.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
ಮಗು ನೋವಿನಿಂದ ಅಳುವುದನ್ನು ಹೆಚ್ಚಿಸಿದರೂ ಅರ್ಚಕ ಆಚರಣೆಯನ್ನು ಮುಂದುವರೆಸುತ್ತಾರೆ. ಈ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಜನ ನೆರೆದಿರುವುದು ಕಾಣಿಸುತ್ತದೆ. ಜೊತೆಗೆ ಇವರ ಮುಂದೆ ಮಗು ಕಿರುಚಿ ಅಳುತ್ತಿದ್ದರೂ ಅರ್ಚಕ ಬಿಡದೆ ಆಚರಣೆ ಮುಂದುವರೆಸುತ್ತಾನೆ.
ವರದಿಗಳ ಪ್ರಕಾರ, ಈ ವಿಚಿತ್ರ ಆಚರಣೆಯು ಶ್ರವಣಪುರ ಗ್ರಾಮದಲ್ಲಿ ಕಾಶಿ ದಾಸ್ ಬಾಬಾ ಪೂಜೆಯ ಭಾಗವಾಗಿತ್ತು ಎಂದು ತಿಳಿದು ಬಂದಿದೆ. ಇದು ಯಾದವ ಸಮುದಾಯದಲ್ಲಿ ಸಾಮಾನ್ಯವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮೂಢನಂಬಿಕೆಗಳಿಗೆ ಬಲಿಯಾದ ಮಕ್ಕಳು
ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ನೋವಿನ ಮತ್ತು ಕೆಲವೊಮ್ಮೆ ಮಾರಣಾಂತಿಕ ಮೂಢನಂಬಿಕೆಯ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚಾಗಿ ಕಂಡು ಬರುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ 3 ತಿಂಗಳ ಹೆಣ್ಣು ಮಗುವು ಅನಾರೋಗ್ಯವನ್ನು ಗುಣಪಡಿಸಲು ಸಾಂಪ್ರದಾಯಿಕ ವಿಧಾನಗಳ ಭಾಗವಾಗಿ ವೈದ್ಯನೊಬ್ಬ 20 ಬಾರಿ ಬಿಸಿ ಕಬ್ಬಿಣದ ರಾಡ್ನಿಂದ ಸುಡಲಾಗಿತ್ತು. ಇದರಿಂದ ಮಗು ಸಾವನ್ನಪ್ಪಿತ್ತು.
ಎರಡೂವರೆ ತಿಂಗಳ ಹೆಣ್ಣು ಮಗು ಇದೇ ರೀತಿಯ ಅಭ್ಯಾಸಕ್ಕೆ ಒಳಗಾಗಿ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಶಹದೋಲ್ ಜಿಲ್ಲೆಯಲ್ಲಿ ಭೀಕರವಾದ ಎರಡನೆ ಘಟನೆ ನಡೆದಿದೆ. ಆನಾರೋಗ್ಯಕ್ಕೆ ಒಳಗಾದ ಮಗುವನ್ನು ತಾಯಿ ತನ್ನ ನಂಬಿಕೆಯ ವೈದ್ಯನ ಬಳಿಗೆ ಕರೆದೊಯ್ದಿದ್ದಾಳೆ. ಆದರೆ ವೈದ್ಯ ಶಿಶುವನ್ನು ಗುಣಪಡಿಸುವ ನೆಪದಲ್ಲಿ ಬಿಸಿ ಕಬ್ಬಿಣದ ರಾಡ್ನಿಂದ 50 ಬಾರಿ ಸುಟ್ಟಿದ್ದನು.
ಬಳಿಕ ಮಗುವನ್ನು ಶಹದೋಲ್ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಅಲ್ಲಿ ಆ ಮಗು ಸಾವನ್ನಪ್ಪಿದೆ ಎಂದು ಘೋಷಿಸಲಾಯಿತು. ಭಾರತೀಯ ದಂಡ ಸಂಹಿತೆ (IPC) ಮತ್ತು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಆಕ್ಟ್ನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ "ವೈದ್ಯ" ಎಂದು ಕರೆಯಲ್ಪಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಶಹದೋಲ್ ಘಟನೆಯ ಕೆಲವು ದಿನಗಳ ನಂತರ, ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಸ್ಥಳೀಯ ತಂತ್ರಿಯೊಬ್ಬರು ಅನಾರೋಗ್ಯಗೊಂಡ ಮಗುವನ್ನು ಗುಣಪಡಿಸುವ ಪ್ರಯತ್ನದಲ್ಲಿ ಹಲವಾರು ಬಾರಿ ನೆಲಕ್ಕೆ ಎಸೆದ ನಂತರ ಒಂದು ವರ್ಷದ ಪುಟ್ಟ ಮಗು ಸಾವನ್ನಪ್ಪಿತ್ತು.
ವರದಿಗಳ ಪ್ರಕಾರ, ಮೃತ ಮಗುವನ್ನು 1 ವರ್ಷದ ಅನುಜ್ ಎನ್ನಲಾಗಿದೆ. ಅನಾರೋಗ್ಯಕ್ಕೆ ಒಳಗಾದ ನಂತರ ಅವರ ಕುಟುಂಬವು ತಂತ್ರಿಯ ಬಳಿಗೆ ಕರೆದೊಯ್ದಿದ್ದರು. "ವೈದ್ಯ" ಎಂದು ಕರೆಯಲ್ಪಡುವ ತಂತ್ರಿ ಮಗುವನ್ನು ನೆಲಕ್ಕೆ ಎಸೆದಿದ್ದಾನೆ ಮತ್ತು ಗುಣಪಡಿಸುವ ನೆಪದಲ್ಲಿ ಅವನ ಕೆಲವು ಹಲ್ಲುಗಳನ್ನು ಮುರಿದಿದ್ದಾನೆ ಎಂದು ಕುಟುಂಬ ಹೇಳಿಕೊಂಡಿದೆ.
ಬಳಿಕ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಸ್ಪಂದಿಸುತ್ತಿಲ್ಲ ಎಂದು ತಿಳಿದ ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಮಗು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಬಳಿಕ ಕುಟುಂಬ ಪೊಲೀಸ್ ಠಾಣೆಗೆ ಮಗುವಿನ ದೇಹವನ್ನು ಕೊಂಡೊಯ್ಯಿತು ಮತ್ತು ದುಃಖಿತ ಕುಟುಂಬದ ದೂರಿನ ಆಧಾರದ ಮೇಲೆ ತಂತ್ರಿಯ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications