ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬೆನ್ನಲ್ಲೆ ವಿದೇಶದಲ್ಲಿ ರೆಡಿಯಾಯ್ತು ಭವ್ಯವಾದ ಹಿಂದೂ ದೇವಾಲಯ
ನವದೆಹಲಿ, ಫೆಬ್ರವರಿ 06: ವಿಶ್ವದ ಹಲವು ದೇಶಗಳಲ್ಲಿ ಹಿಂದೂಗಳಿದ್ದಾರೆ. ಹಾಗೆಯೇ ಹಿಂದೂ ದೇವಾಲಯಗಳು ಕೂಡ ಇವೆ. ಹೊಸ ಹೊಸ ದೇವಾಲಯಗಳ ನಿರ್ಮಾಣ ಕೂಡ ನಡೆಯುತ್ತಲೆ ಇದೆ. ಇದಕ್ಕೆ ದೇಶದ ಗಣ್ಯರು ಸಾಕ್ಷಿಯಾಗುತ್ತಿದ್ದಾರೆ. ಈಗ ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದ ಭವ್ಯ ಉದ್ಘಾಟನೆಯ ಕೆಲವೇ ದಿನಗಳ ಅಂತರದಲ್ಲಿ ಅಬುಧಾಬಿಯಲ್ಲಿ ಮತ್ತೊಂದು ಭವ್ಯ ದೇವಾಲಯ ತಲೆ ಎತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ BAPS ಹಿಂದೂ ಮಂದಿರವನ್ನು ಉದ್ಘಾಟಿಸಲು ಸಿದ್ಧತೆ ನಡೆಸಿದ್ದಾರೆ. ಫೆಬ್ರವರಿ 13 ರಂದು ಯುಎಇಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಭಾರತೀಯ ಸಮುದಾಯ ಕಾರ್ಯಕ್ರಮವಾದ 'ಅಹ್ಲಾನ್ ಮೋದಿ'ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS) ಧಾರ್ಮಿಕ ಕಾರ್ಯಕ್ರಮ ಪೂರ್ಣಗೊಳಿಸುವಿಕೆ ಮತ್ತು 14 ಫೆಬ್ರವರಿ 2024 ರಂದು ಮಹಂತ್ ಸ್ವಾಮಿ ಮಹಾರಾಜ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ದೇವಾಲಯವನ್ನು ಉದ್ಘಾಟನೆ ಮಾಡುವುದನ್ನು ದೃಢಪಡಿಸಿದೆ.
ಯುಎಇಯ ಮೊದಲ ಹಿಂದೂ ದೇವಾಲಯದ ವಿಶೇಷತೆ
ಯುಎಇಯ ಮೊದಲ ಹಿಂದೂ ದೇವಾಲಯದ ನಿರ್ಮಾಣ ಕಾರ್ಯವು ಡಿಸೆಂಬರ್ 2019 ರಲ್ಲಿ ಪ್ರಾರಂಭವಾಯಿತು. ಇದು ಫೆಬ್ರವರಿ 14 ರಂದು ಉದ್ಘಾಟನೆಗೊಳ್ಳಲಿದೆ. ಕೆಲವು ದಿನಗಳ ನಂತರ, ಅಮದರೆ ದೇವಾಲಯವು ಫೆಬ್ರವರಿ 18 ರಂದು ಸಾರ್ವಜನಿಕರಿಗೆ ತೆರೆಯುತ್ತದೆ. ಮಧ್ಯಪ್ರಾಚ್ಯದ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವು 27 ಎಕರೆಗಳಷ್ಟು ವಿಸ್ತಾರವಾಗಿದೆ. ಗುಲಾಬಿ ಸುಣ್ಣದ ಕಲ್ಲು ಮತ್ತು ಬಿಳಿ ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾಗಿದೆ.
ಈ ದೇವಾಲಯದ ನಿರ್ಮಾಣದಲ್ಲಿ ಉಕ್ಕು ಅಥವಾ ಕಾಂಕ್ರೀಟ್ ಬಳಸಲಾಗಿಲ್ಲ. ಯುಎಇಯ ಏಳು ಎಮಿರೇಟ್ಗಳನ್ನು ಸಂಕೇತಿಸುವ ಏಳು ಪಿನಾಕಲ್ಗಳನ್ನು ಸಹ BAPS ಹಿಂದೂ ಮಂದಿರದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಆವರಣವು ಸಂದರ್ಶಕರ ಕೇಂದ್ರ, ಗ್ರಂಥಾಲಯ, ತರಗತಿ, ಪ್ರಾರ್ಥನಾ ಕೊಠಡಿ, ಸಮುದಾಯ ಕೇಂದ್ರ, ಆಂಫಿಥಿಯೇಟರ್, ಆಟದ ಮೈದಾನ, ಉದ್ಯಾನ, ಪುಸ್ತಕಗಳು ಮತ್ತು ಉಡುಗೊರೆ ಅಂಗಡಿಗಳು ಮತ್ತು ಫುಡ್ ಕೋರ್ಟ್ ಹೊಂದಿದೆ.

ಬಿಎಪಿಎಸ್ ಹಿಂದೂ ದೇವಾಲಯವು ಮಧ್ಯಪ್ರಾಚ್ಯದ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವಾಗಿದೆ. ಈ ದೇವಾಲಯವು ಭಾರತ ಮತ್ತು ದುಬೈ ನಡುವಿನ ಸ್ನೇಹವನ್ನು ಸೂಚಿಸುತ್ತದೆ. ಅಬುಧಾಬಿಯ ಕ್ರೌನ್ ಪ್ರಿನ್ಸ್ 2015 ರಲ್ಲಿ ಹಿಂದೂ ಮಂದಿರದ ನಿರ್ಮಾಣಕ್ಕಾಗಿ ಭೂಮಿಯನ್ನು ದಾನ ಮಾಡಿದರು. ಮಹಾತ್ಮಾ ಗಾಂಧಿ ಮತ್ತು ಶೇಖ್ ಜಾಯೆದ್ ಅವರಿಂದ ಪ್ರೇರಿತವಾದ ಈ ದೇವಾಲಯವು ಶಾಂತಿ ಮತ್ತು ಸಹಿಷ್ಣುತೆಯ ಸಂಕೇತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಎಪಿಎಸ್ ಸ್ವಾಮಿ ಈಶ್ವರಚರಂದಾಸ್ ಅವರು ಡಿಸೆಂಬರ್ನಲ್ಲಿ ಪ್ರಧಾನ ಮಂತ್ರಿಗಳ ನಿವಾಸ ಕಚೇರಿಯಲ್ಲಿ ಈ ಹಿಂದೂ ದೇವಾಲಯದ ಕುರಿತು ಚರ್ಚಿಸಿದರು. ಈ ಕಾರ್ಯಕ್ರಮಕ್ಕಾಗಿ ನೋಂದಣಿ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಘೋಷಣೆಯಾದ 24 ಗಂಟೆಗಳಲ್ಲಿ ಸುಮಾರು 12,000 ನೋಂದಣಿಗಳು ಆಗಿವೆ.ಎಲ್ಲಾ ಎಮಿರೇಟ್ಗಳಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ
ದೇವಾಲಯ ಉದ್ಘಾಟನೆಗೆ 400 ಸ್ಥಳೀಯ ಪ್ರತಿಭೆಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ದೇವಾಲಯದ ಅಡಿಪಾಯವನ್ನು ಏಪ್ರಿಲ್ 20, 2019 ರಂದು ಹಾಕಲಾಗಿತ್ತು. ದೇವಾಲಯ ನಿರ್ಮಾಣ ಕಾರ್ಯಗಳನ್ನು ಮೇ 2023 ರಲ್ಲಿ 30 ದೇಶಗಳ ರಾಜತಾಂತ್ರಿಕರು ಭೇಟಿ ಮಾಡಿ ಗಮನಿಸಿದ್ದರು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications