ಈ ರಾಜ್ಯದಲ್ಲಿ 'ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ' ಬಗ್ಗೆ ಪ್ರಧಾನಿ ಘೋಷಣೆ

ತೆಲಂಗಾಣ, ಅಕ್ಟೋಬರ್ 01: ಭವಿಷ್ಯದಲ್ಲಿ ತೆಲಂಗಾಣ ರಾಜ್ಯವು ವಿವಿಧ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಲಿದೆ. ಈ ಸಂಬಂಧ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರಸ್ತೆ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉನ್ನತ ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಲ್ಲಿ 13,500 ಕೋಟಿ ರೂ.ಗಿಂತ ಹೆಚ್ಚಿನ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು.

ತೆಲಂಗಾಣ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರು ಕಾರ್ಯಕ್ರಮ ಗೈರಾದ ಕಾರಣ ಬಿಆರ್‌ಎಸ್ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮದಲ್ಲಿ ಬರಮಾಡಿಕೊಂಡರು ಎಂದು ಎಎನ್‌ಐ ವರದಿ ಮಾಡಿದೆ.

PM Modi Laid Foundation Stone Rs 13,500 Cr Development Projects in Various Sectors in Telangana.

ಸಮಾರಂಭದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈಲು ಮತ್ತು ರಸ್ತೆ ಸಂಪರ್ಕದ ಮಹತ್ವ ತಿಳಿಸಿದರು. ವಿಶೇಷವಾಗಿ ತೆಲಂಗಾಣದಂತಹ ಭೂ-ಲಾಕ್ ಸ್ಥಳೀಯವಾಗಿ ತಯಾರಿಸಿದ ಸರಕುಗಳನ್ನು ಬಂದರುಗಳಿಗೆ ಸಾಗಿಸಲು ಅನುವು ಮಾಡಿಕೊಡುತ್ತದೆ.

ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ: ಘೋಷಣೆ
ತೆಲಂಗಾಣದಲ್ಲಿ ಅರಿಶಿನ ಬೆಳೆಗಾರರಿಗೆ (ರೈತರಿಗೆ) ಪೂರಕವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಮಂತ್ರಿಗಳು ಇದೇ ವೇಳೆ ಘೋಷಣೆ ಮಾಡಿದರು. ರಾಷ್ಟ್ರೀಯ ಅರಿಶಿನ ಮಂಡಳಿಯ ಪ್ರಾಥಮಿಕ ಉದ್ದೇಶಗಳು ಪೂರೈಕೆ ಸರಪಳಿಯಲ್ಲಿ ಮೌಲ್ಯವನ್ನು ಹೆಚ್ಚಿಸಲಾಗುವದು ಎಂದು ಅವರು ಭರವಸೆ ನೀಡಿದರು.

ರಾಜ್ಯದ ವಿವಿಧ ಭಾಗಕ್ಕೆ ಸಂಪರ್ಕ ಕೊಂಡಿ ಆಗಲಿದೆ
ರೈಲ್ವಿ ವಲಯದ ಅಭಿವೃದ್ಧಿಯು ದೇಶದ ಹಲವು ಪ್ರಮುಖ ಆರ್ಥಿಕ ಯೋಜನೆಗಳು ತೆಲಂಗಾಣದಲ್ಲಿ ಅನುಷ್ಠಾನಗೊಳ್ಳಲಿವೆ. ರಾಜ್ಯವನ್ನು ಪೂರ್ವ ಮತ್ತು ಪಶ್ಚಿಮ ಕರಾವಳಿಯೊಂದಿಗೆ ಸಂಪರ್ಕಿಸಲು ಪ್ರಮುಖ ಕೊಂಡಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದರು.

ಹೈದರಾಬಾದ್-ವಿಶಾಖಪಟ್ಟಣಂ ಕಾರಿಡಾರ್‌ನ ಸೂರ್ಯಪೇಟ್-ಖಮ್ಮಂ ವಿಭಾಗವು ಪೂರ್ವ ಕರಾವಳಿಗೆ ಸಂಪರ್ಕ ಸೇವೆ ಸುಲಭಗೊಳಿಸುತ್ತದೆ. ಕೈಗಾರಿಕೆಗಳು ಮತ್ತು ವ್ಯವಹಾರಗಳಿಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. ಇದಕ್ಕೆ ಹೆಚ್ಚುವರಿಯಾಗಿ ಜಕ್ಲೇರ್ ಮತ್ತು ಕೃಷ್ಣಾ ವಿಭಾಗದ ಮಧ್ಯೆ ನಡೆಯುತ್ತಿರುವ ರೈಲು ಮಾರ್ಗದ ನಿರ್ಮಾಣವು ಸ್ಥಳೀಯ ಜನಸಂಖ್ಯೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

PM Modi Laid Foundation Stone Rs 13,500 Cr Development Projects in Various Sectors in Telangana.

ಇಂಧನ ಪೂರೈಕೆಯಲ್ಲಿ ಏರಿಕೆ
ಇಂಧನ ಮತ್ತು ಇಂಧನ ಭದ್ರತಾ ವಲಯದಲ್ಲಿನ ಇತ್ತೀಚಿನ ಜಾಗತಿಕ ಪ್ರಗತಿ ಬಗ್ಗೆ ವಿವರಿಸಿದ ಪ್ರಧಾನಿ ಕೈಗಾರಿಕೆಗಳು ಮತ್ತು ಕುಟುಂಬಗಳಿಗೆ ಇಂಧನ ಲಭ್ಯತೆ ಖಾತ್ರಿಪಡಿಸುವಲ್ಲಿ ಸರ್ಕಾರ ನಿರಂತರವಾಗಿ ಪ್ರಯತ್ನ ನಡೆಸಿದೆ. LPG ಪೂರೈಕೆಯಲ್ಲಿ ಗಮನಾರ್ಹ ಸಾಧನೆ ಆಗಿದೆ. 2014 ರಲ್ಲಿ 14 ಕೋಟಿಯಿಂದ 2023 ರಲ್ಲಿ 32 ಕೋಟಿಗೆ ಏರಿದೆ ಎಂದರು.

ಎಲ್‌ಪಿಜಿ ವಿತರಣಾ ಜಾಲವನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ಸರ್ಕಾರ ಬದ್ಧವಾಗಿದೆ. ಇಂಧನ ಭದ್ರತೆ ಹೆಚ್ಚಳಕ್ಕಾಗಿ ಎಲ್‌ಪಿಜಿ ಪೈಪ್‌ಲೈನ್ ಯೋಜನೆ ಮಹತ್ವ ಕುರಿತು ತಿಳಿಸಿದರು. ಇದಕ್ಕೂ ಮುನ್ನ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಲವು ಕಟ್ಟಡಗಳನ್ನು ಪ್ರಧಾನಿ ಉದ್ಘಾಟಿಸಿದರು.

ಕೇಂದ್ರವು ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ವಿಶೇಷ ಧನಸಹಾಯದೊಂದಿಗೆ 'ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್' ಸ್ಥಾನಮಾನ ದೊರಕಿದೆ. ಮುಳುಗು ಜಿಲ್ಲೆಯಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ನಮ್ಮ ಸರ್ಕಾರ ಮುಂದಾಗಿದೆ ಎಂದು ಪ್ರಧಾನಿ ಘೋಷಿಸಿದರು.

ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್, ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, ಸಂಸದ ಬಂಡಿ ಸಂಜಯ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+