ಕೃಷಿ ಕಾನೂನು ವಾಪಸ್ ಸೇರಿ ಮೋದಿ ಭಾಷಣದ ಪ್ರಮುಖಾಂಶಗಳು
ನವದೆಹಲಿ, ನವೆಂಬರ್ 19: ಭಾರತದಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರದಿಂದ ವಾಪಸ್ ಪಡೆಯುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು. ಇದೇ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಇದೀಗ ಸಮ್ಮತಿ ಸೂಚಿಸಿದೆ.
Breaking: 3 ಕೃಷಿ ಕಾನೂನು ಹಿಂಪಡೆದ ಕೇಂದ್ರ ಸರ್ಕಾರ
ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರೈತರ ಬಗ್ಗೆ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು ಏನಾಗಿದ್ದವು ಎಂಬುದರ ಕುರಿತು ಇಲ್ಲಿ ನೀಡಲಾಗಿದೆ.
-ರೈತರು ಸಂಕಷ್ಟ ಎದುರಿಸುತ್ತಿರುವುದನ್ನು ನನ್ನ 5 ವರ್ಷದ ಅಧಿಕಾರಾವಧಿಯಲ್ಲಿ ನಾನು ಕಂಡಿದ್ದೇನೆ, ಈ ದೇಶದ ಪ್ರಧಾನಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ ಬಳಿಕ ಕೃಷಿ ವಿಕಾಸ ಅಥವಾ ರೈತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ.
-ಸಣ್ಣ ಕೃಷಿಕರನ್ನು ಮುನ್ನಲೆಗೆ ತರುವ ನಿಟ್ಟಿನಲ್ಲಿ ಉತ್ತಮ ಬೀಜ, ವಿಮೆ, ಮಾರುಕಟ್ಟೆ ಒದಗಿಸಿದ್ದೇವೆ. ಜತೆಗೆ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಿಸಿದ್ದೇವೆ. ಜತೆಗೆ ಕಹಿಬೇವು ಮಿಶ್ರಿತ ಯೂರಿಯಾ, ಸಾಯಿಲ್ ಹೆಲ್ತ್ ಕಾರ್ಡ್, ಮೈಕ್ರೋ ಇರಿಗೇಷನ್ಗೆ ಹೆಚ್ಚು ಒತ್ತು ನೀಡಿದ್ದೇವೆ.
-ಫಸಲ್
ಭೀಮಾ
ಯೋಜನೆಯು
ಹಲವು
ರೈತರಿಗೆ
ಸಹಾಯ
ಮಾಡಿದೆ,
ಪರಿಹಾರಾರ್ಥವಾಗಿ
ರೈತರಿಗೆಂದು
ಒಂದು
ಲಕ್ಷ
ಕೋಟಿಯನ್ನು
ನೀಡಲಾಗಿದೆ.
-ಎಂಎಸ್ಪಿ
ಹೆಚ್ಚಳ
ಸಾವಿರ
ಮಂಡಿಯನ್ನು
ಇ-ಮಂಡಿಗಳೊಂದಿಗೆ
ಸಂಪರ್ಕ
ಕಲ್ಪಿಸುವ
ಕೆಲಸ
ಮಾಡಿದ್ದೇವೆ
ಹಾಗೆಯೇ
ತಮ್ಮ
ಬೆಳೆಯನ್ನು
ದೇಶಾದ್ಯಂತ
ಎಲ್ಲಿ
ಬೇಕಾದರೂ
ಮಾರಾಟ
ಮಾಡಿಕೊಳ್ಳುವ
ವ್ಯವಸ್ಥೆಯನ್ನು
ಮಾಡಿಕೊಟ್ಟಿದ್ದೇವೆ.
-ಕೃಷಿ
ಕಾನೂನನ್ನು
ಒಳ್ಳೆಯ
ದೃಷ್ಟಿಯಿಂದಲೇ
ಜಾರಿಗೆ
ತಂದಿದ್ದೆವು,
ಬೆಳೆ
ಸಾಲವನ್ನು
ಕೂಡ
ದ್ವಿಗುಣಗೊಳಿಸಿದ್ದೆವು,
ವಾರ್ಷಿಕ
ಬಜೆಟ್
ಪ್ರಮಾಣವನ್ನು
ಕೂಡ
ಏರಿಕೆ
ಮಾಡಿದ್ದೆವು.
-ನಾವು
ಸಣ್ಣ
ಕೃಷಿಕರಿಗೆ
ಹೆಚ್ಚು
ಒತ್ತು
ನೀಡಿದ್ದೇವೆ
ಇವುಗಳನ್ನು
ರೈತರಿಗೆ
ಅರ್ಥಮಾಡಿಸಲು
ನಮ್ಮಿಂದ
ಸಾಧ್ಯವಾಗಿಲ್ಲ,
ಈ
ವಿಷಯ
ಸುಪ್ರೀಂಕೋರ್ಟ್ವರೆಗೂ
ಹೋಗಿದೆ.
ಇದೆಲ್ಲಾ
ಕಾರಣಗಳಿಂದ
ಈ
ಮೂರು
ಕೃಷಿ
ಕಾನೂನುನಗಳನ್ನು
ಸರ್ಕಾರ
ಹಿಂಪಡೆಯಲು
ನಿರ್ಧರಿಸಿದೆ.
-ರೈತರ
ಸಮಸ್ಯೆ
ಬಗೆಹರಿಸುವುದು
ಸರ್ಕಾರದ
ಪ್ರಮುಖಾದ್ಯತೆಯಾಗಿದೆ.
ದೇಶದಲ್ಲಿ
100ರಲ್ಲಿ
ಶೇ.80ರಷ್ಟು
ಸಣ್ಣ
ಹಿಡುವಳಿ
ರೈತರಾಗಿದ್ದು,
10
ಕೋಟಿಗಿಂತ
ಹೆಚ್ಚು
ಸಣ್ಣ
ರೈತರಿದ್ದಾರೆ.
-ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟ ಹಿನ್ನೆಲೆ ಕಾಯ್ದೆಗಳು ವಾಪಸ್ ತೆಗೆದುಕೊಳ್ಳಲಾಗುವುದು. 3 ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುತ್ತಿದ್ದೇವೆ. ಅದಕ್ಕಾಗಿ ಸಮಿತಿ ರಚಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರು ಇರಲಿದ್ದಾರೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
Recommended Video
-ರೈತರ
ಆರ್ಥಿಕ,
ಸಾಮಾಜಿಕ
ಸ್ಥಿತಿ
ಸುಧಾರಿಸಲು
ಪ್ರಯತ್ನ
ಮಾಡಲಾಗುವುದು.
ರೈತರ
ಸ್ಥಿತಿ
ಸುಧಾರಿಸಲು
3
ಕಾಯ್ದೆ
ಜಾರಿಗೆ
ತಂದಿದ್ದೆವು.
ಸಣ್ಣ
ರೈತರಿಗೆ
ಅನುಕೂಲವಾಗುವ
ನಿಟ್ಟಿನಲ್ಲಿ
ಕಾಯ್ದೆ
ಜಾರಿ
ಮಾಡಲಾಗಿತ್ತು.
ಸಣ್ಣ
ರೈತರ
ಒಳಿತಿಗಾಗಿಯೇ
ಕಾಯ್ದೆ
ಜಾರಿಗೆ
ತಂದಿದ್ದೆವು.
ಈ
3
ಕಾನೂನುಗಳು
ಸಂಪೂರ್ಣವಾಗಿ
ರೈತರ
ಪರವಾಗಿವೆ.
ರೈತರ
ಹಿತ
ದೃಷ್ಟಿಯಲ್ಲಿಟ್ಟುಕೊಂಡೇ
ಕಾಯ್ದೆ
ಜಾರಿಯಾಗಿತ್ತು.
ಯೋಜನೆ
ಬಗ್ಗೆ
ರೈತರಿಗೆ
ತಿಳಿಸುವಲ್ಲಿ
ಸಾಕಷ್ಟು
ಯತ್ನಿಸಿದ್ದೇವೆ.
ಆದ್ರೆ
ಕೆಲವು
ರೈತರು
ಕಾಯ್ದೆಯನ್ನು
ವಿರೋಧಿಸುತ್ತಿದ್ದಾರೆ.
ಅವರು
ಸಲಹೆ
ಒಪ್ಪಿಕೊಂಡರೂ
ಕಾಯ್ದೆ
ವಿರೋಧಿಸುತ್ತಿದ್ದಾರೆ
ಎಂದು
ಪ್ರಧಾನಿ
ಮೋದಿ
ಇದೇ
ವೇಳೆ
ವಿಷಾದಿಸಿದರು.