ಆಯುಷ್ಯಕ್ಕೆ ಪ್ಲಸ್ ಆಗಬಹುದಾದ ಯೋಗದಿನ ಮಿಸ್ ಯಾಕೆ ಮಾಡ್ತೀರಿ?
ಜೂನ್ 21ರಂದು ವಿಶ್ವ ಯೋಗ ದಿನದ ಆಚರಣೆಗೆ ಎಲ್ಲ ಕಡೆಯೂ ಸಿದ್ಧತೆ ನಡೆಯುತ್ತಿದೆ. ವಿಶ್ವದಾದ್ಯಂತ ನೂರೈವತ್ತಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆಗೆ ಆರ್ಟ್ ಆಫ್ ಲಿವಿಂಗ್ ಯೋಜನೆ ಮಾಡಿಟ್ಟುಕೊಂಡಿದೆ. ಈ ದಿನಕ್ಕೆ ಇಷ್ಟು ಮಹತ್ವ ನೀಡಿ, ಆಚರಣೆಗೊಂದು ಗಾಂಭೀರ್ಯ ತಂದುಕೊಟ್ಟಿರುವ ಸಂಗತಿ ಮೆಚ್ಚುಗೆ ಹಾಗೂ ಅಚ್ಚರಿಗೆ ಅರ್ಹವಾಗಿದೆ.
ಏಕೆಂದರೆ, ಬಹಳ ದಿನಾಚರಣೆಗಳು ನಿರ್ದಿಷ್ಠ ಸಮುದಾಯ- ವರ್ಗವನ್ನು ಮಾತ್ರ ಪ್ರತಿನಿಧಿಸುವುದರಿಂದ ಆಚರಣೆಯಲ್ಲಿ ನಿರುತ್ಸಾಹ ಇಣುಕುತ್ತದೆ. ಅಥವಾ ಒಂದು ನಿರ್ದಿಷ್ಟ ಸಿದ್ಧಾಂತವುಳ್ಳ ರಾಜಕೀಯ ಪಕ್ಷ ಅಧಿಕಾರ ಸ್ಥಾನದಿಂದ ಕದಲಿದ ನಂತರ ಆಚರಣೆ ಬಗೆಗಿನ ಆಸಕ್ತಿಯೂ ಅಷ್ಟೇ ವೇಗವಾಗಿ ಕರಗಿಹೋಗುತ್ತದೆ.
ಈ ವರ್ಷದ ಯೋಗ ದಿನಾಚರಣೆ ನಾಲ್ಕನೆಯದು. ಬೆಂಗಳೂರು, ಮುಂಬೈ, ಅಹ್ಮದಾಬಾದ್, ಮಧ್ಯಪ್ರದೇಶ್ ಹೀಗೆ ನಾನಾ ಕಡೆ ಯೋಗ ದಿನಾಚರಣೆ ಸಿದ್ಧತೆಗಳ ಫೋಟೋಗಳನ್ನು ಪಿಟಿಐ ಸುದ್ದಿ ಸಂಸ್ಥೆ ಸೊಗಸಾಗಿ ಸೆರೆ ಹಿಡಿದಿದೆ. ಅವುಗಳನ್ನು ನಿಮ್ಮೆದುರು ಕಟ್ಟಿಕೊಡುವ ಆಲೋಚನೆಯೇ ಈ ಚಿತ್ರ- ಸುದ್ದಿಯ ಮಾಲೆ. ಯೋಗ ದಿನಕ್ಕೂ ಮುನ್ನ ಅಭ್ಯಾಸ. ಆರೋಗ್ಯ- ಆಯುಷ್ಯಕ್ಕೆ ಪ್ಲಸ್ ಅನ್ನುವುದಾದರೆ ಯಾಕೆ ಮಿಸ್ ಮಾಡಬೇಕು?

ಯೋಗ ದಿನಕ್ಕೆ ಆಸಕ್ತರ ಯೋಗಾ'ಭ್ಯಾಸ'
ಯೋಗದಲ್ಲಿ ಆಸಕ್ತಿ ಇರುವಂಥವರು ಈ ಬಾರಿಯ ವಿಶ್ವ ಯೋಗ ದಿನದ ಮುಂಚೆ ಅಭ್ಯಾಸದಲ್ಲಿ ತೊಡಗಿದ್ದ ದೃಶ್ಯವಿದು. ಅಂದ ಹಾಗೆ ಈ ದೃಶ್ಯವನ್ನು ಬೆಂಗಳೂರಿನಲ್ಲಿ ಸೆರೆ ಹಿಡಿದವರು ಪಿಟಿಐ ಸುದ್ದಿ ಸಂಸ್ಥೆಯ ಫೋಟೋಗ್ರಾಫರ್ ಶೈಲೇಂದ್ರ ಭೋಜಕ್.

ಯೋಗ ದಿನದಲ್ಲಿ ಭಾಗವಹಿಸುವವರು ಯಾರು?
ನೀವು ಯಾರೆಲ್ಲ ಯೋಗ ದಿನದಲ್ಲಿ ಭಾಗವಹಿಸುತ್ತೀರಿ, ಕೈ ಎತ್ತಿ ಎಂದು ಕೇಳಿದಾಗ, ನಾವು- ನಾವು ಎಂದು ಎರಡೂ ಕೈ ಎತ್ತಿ ಹೇಳುತ್ತಿರುವಂತಿದೆ ಈ ಬೆಂಗಳೂರಿಗರು. ಇದು ಬುಧವಾರದಂದು ನಗರದಲ್ಲಿ ಕಂಡ ದೃಶ್ಯ.

'ಗರ್ಬಾ ನೃತ್ಯ'ದ ಅಭ್ಯಾಸ
ವಿಶ್ವ ಯೋಗ ದಿನಾಚರಣೆ ಮುಂಚಿತವಾಗಿ ಅಹ್ಮದಾಬಾದ್ ನಲ್ಲಿ ಮಹಿಳೆಯರು 'ಗರ್ಬಾ ನೃತ್ಯ'ದ ಅಭ್ಯಾಸದಲ್ಲಿ ತೊಡಗಿದ್ದಾಗ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಅಭ್ಯಾಸ
ಮಧ್ಯಪ್ರದೇಶದ ಭೋಪಾಲ್ ನಲ್ಲಿರುವ ಲಾಲ್ ಪರೇಡ್ ಮೈದಾನದಲ್ಲಿ ಬುಧವಾರ ಯೋಗ ದಿನಕ್ಕೆ ಪೂರ್ವಭಾವಿಯಾವಿ ಅಭ್ಯಾಸದಲ್ಲಿ ತೊಡಗಿದ್ದ ಕ್ಷಣ.

ಲೈಂಗಿಕ ಕಾರ್ಯನಿರತರಿಂದ ಯೋಗಾಭ್ಯಾಸ
ಮುಂಬೈನಲ್ಲಿ ಲೈಂಗಿಕ ವೃತ್ತಿನಿರತರು ಯೋಗ ದಿನಾಚರಣೆಗೆ ಮುನ್ನ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಗಂಗಾ ನದಿಯ ಮೇಲೆ ಯೋಗಾಸನ
ಮಿರ್ಜಾಪುರದಲ್ಲಿ ಗಂಗಾ ನದಿಯಲ್ಲಿ ದೋಣಿಗಳ ಮೇಲೆ ಯೋಗಾಸನದ ಅಭ್ಯಾಸ ಮಾಡಿದ ಆಸಕ್ತರು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಸಿಕ್ಕಿದ್ದು ಹೀಗೆ.

ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ
ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಬೆಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ ಮಾಡಿದ ಆಸನದ ಭಂಗಿ ಇದು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications