Lok Sabha Election 2024 Results: ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು; ಸಟ್ಟಾ ಬಜಾರ್ ಅಂಕಿ-ಅಂಶಗಳು
ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇಂದು (ಶನಿವಾರ) ನಡೆಯುತ್ತಿದ್ದು, ಸಂಜೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ. ಲೋಕಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಕೋಟಿಗಟ್ಟಲೆ ಹಣವನ್ನು ಬಾಜಿ ಕಟ್ಟಲಾಗುತ್ತಿದೆ.
ರಾಜಸ್ಥಾನದ ಜನಪ್ರಿಯ ಪಲೋಡಿ ಸತ್ತಾ ಬಜಾರ್ ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಮಾರು 300 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.

ಬೆಟ್ಟಿಂಗ್ ಮಾರುಕಟ್ಟೆ ಕೂಡ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ. ಬಿಜೆಪಿ ಸುಮಾರು 290-300 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ಹೇಲಿದೆ. ಕಾಂಗ್ರೆಸ್ 40-42 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಉಳಿದ ಸ್ಥಾನಗಳನ್ನು ಇತರೆ ಪಕ್ಷಗಳು ಪಡೆಯಲಿವೆ ಎಂದು ಹೇಳಿದೆ.
ಬಿಜೆಪಿಗೆ ಸ್ಪಷ್ಟ ಬಹುಮತ?
ಫಲೋಡಿ ಸತ್ತಾ ಬಜಾರ್ ಚುನಾವಣೆಗಳಲ್ಲಿ, ಕ್ರಿಕೆಟ್ ಪಂದ್ಯಗಳಲ್ಲಿ ಅಥವಾ ಹವಾಮಾನ ಮುನ್ಸೂಚನೆಗಳಲ್ಲಿ ನಿಖರವಾದ ಭವಿಷ್ಯ ಹೇಳಿದ ಇತಿಹಾಸವನ್ನು ಹೊಂದಿದೆ. ಉತ್ತರ ಪ್ರದೇಶದಲ್ಲಿ ಕಡಿಮೆ ಮತದಾನದ ಹೊರತಾಗಿಯೂ, ಬಿಜೆಪಿ 80 ರಲ್ಲಿ 62 ರಿಂದ 65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಫಲೋಡಿ ಸತ್ತಾ ಬಜಾರ್ನ ಹಲವಾರು ವರದಿಗಳು ಮತ್ತು ಭವಿಷ್ಯವಾಣಿಗಳು ಬಿಜೆಪಿಯು ಯುಪಿಯಲ್ಲಿ ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿವೆ. ಒಟ್ಟಾರೆಯಾಗಿ 335 ರಿಂದ 340 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಅಭ್ಯರ್ಥಿ ಜನಪ್ರಿಯತೆ, ಜಾತಿ ಆಧಾರಿತ ಬೆಂಬಲ, ಚುನಾವಣಾ ಪ್ರಚಾರ ಸಭೆಗಳಲ್ಲಿ ಮತದಾರರ ಬೆಂಬಲ, ಪಕ್ಷದ ಬಲ ಮತ್ತು ಸ್ಥಾನಮಾನ ಸೇರಿದಂತೆ ಬಹು ಅಂಶಗಳ ಆಧಾರದ ಮೇಲೆ ಸಟ್ಟಾ ಬಜಾರ್ನಲ್ಲಿ ಬೆಟ್ಟಿಂಗ್ ದರಗಳು ಏರಿಳಿತಗೊಳ್ಳುತ್ತವೆ.
ಸಟ್ಟಾ ಬಜಾರ್ ಅಂಕಿಅಂಶಗಳು
ಪಾಲನ್ಪುರ್ ಸತ್ತಾ ಬಜಾರ್
ಕಾಂಗ್ರೆಸ್ - 112
ಇಂಡಿಯಾ - 225
ಬಿಜೆಪಿ - 216
ಎನ್ಡಿಎ - 247
ಕರ್ನಾಲ್ ಸತ್ತಾ ಬಜಾರ್
ಕಾಂಗ್ರೆಸ್ - 108
ಇಂಡಿಯಾ - 231
ಬಿಜೆಪಿ - 235
ಎನ್ಡಿಎ -263
ಬೋಹ್ರಿ ಸತ್ತಾ ಬಜಾರ್
ಕಾಂಗ್ರೆಸ್ - 115
ಇಂಡಿಯಾ- 212
ಬಿಜೆಪಿ - 227
ಎನ್ಡಿಎ - 255
ಬೆಳಗಾವಿ ಸತ್ತಾ ಬಜಾರ್
ಕಾಂಗ್ರೆಸ್ - 120
ಇಂಡಿಯಾ- 230
ಬಿಜೆಪಿ - 223
ಎನ್ಡಿಎ-265
ಕೋಲ್ಕತ್ತಾ ಸತ್ತಾ ಬಜಾರ್
ಕಾಂಗ್ರೆಸ್ - 128
ಇಂಡಿಯಾ- 228
ಬಿಜೆಪಿ - 218
ಎನ್ಡಿಎ- 261
ವಿಜಯವಾಡ ಸತ್ತಾ ಬಜಾರ್
ಕಾಂಗ್ರೆಸ್ - 121
ಇಂಡಿಯಾ- 237
ಬಿಜೆಪಿ - 224
ಎನ್ಡಿಎ- 251
ಇಂದೋರ್ ಸರಾಫಾ
ಕಾಂಗ್ರೆಸ್ - 94
ಇಂಡಿಯಾ- 180
ಬಿಜೆಪಿ - 260
ಎನ್ಡಿಎ - 283
ಅಹಮದಾಬಾದ್ ಚೋಖಾ ಬಾರ್
ಕಾಂಗ್ರೆಸ್ - 104
ಇಂಡಿಯಾ- 193
ಬಿಜೆಪಿ - 241
ಎನ್ಡಿಎ-270
ಸೂರತ್ ಮಾಘೋಬಿ
ಕಾಂಗ್ರೆಸ್ - 96
ಇಂಡಿಯಾ- 186
ಬಿಜೆಪಿ - 247
ಎನ್ಡಿಎ - 282
ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4 ಮಂಗಳವಾರದಂದು ಅಂತಿಮ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
-
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications