ಜಾಧವ್ ತಾಯಿಗೆ ಅವಮಾನ : ಪಾಕ್ ವಿರುದ್ಧ ಸುಷ್ಮಾ ಕೆಂಡ
ನವದೆಹಲಿ, ಡಿಸೆಂಬರ್ 28 : "ಒಬ್ಬ ತಾಯಿ ಮತ್ತು ಜೈಲಿನಲ್ಲಿರುವ ಮಗ, ಹೆಂಡತಿ ಮತ್ತು ಗಂಡನ ನಡುವಿನ ಭಾವನಾತ್ಮಕ ಭೇಟಿಯನ್ನು ಪಾಕಿಸ್ತಾನ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ. ಅವರಿಬ್ಬರನ್ನು ಪಾಕಿಸ್ತಾನ ಹಿಂಸಿಸಿದೆ" ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜ್ಯಸಭೆಯಲ್ಲಿ ಕೆಂಡ ಕಾರಿದ್ದಾರೆ.
ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಾಗ, ಜಾಧವ್ ಅವರ ತಾಯಿ ಅವಂತಿ ಜಾಧವ್ ಮತ್ತು ಹೆಂಡತಿಯನ್ನು ಭದ್ರತೆಯ ಹೆಸರಿನಲ್ಲಿ ಅವಮಾನ ಮಾಡಲಾಗಿದೆ, ಅಲ್ಲಿನ ಮಾಧ್ಯಮ ಬೇಕಾಬಿಟ್ಟಿ ಘೋಷಣೆಗಳನ್ನು ಕೂಗಿ ಅವರಿಬ್ಬರಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿದೆ. ಇದಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಈ ಕೃತ್ಯದ ವಿರುದ್ಧ ಮೊದಲ ಬಾರಿ ಸಂಸತ್ತಿನಲ್ಲಿ ಗುರುವಾರ ಹೇಳಿಕೆ ನೀಡಿರುವ ಸುಷ್ಮಾ ಸ್ವರಾಜ್ ಅವರು, ಅವಂತಿ ಅವರು ಯಾವಾಗಲೂ ಸೆಲ್ವಾರ್ ಕಮೀಜ್ ಧರಿಸುತ್ತಾರೆ. ಆದರೆ, ಅವರಿಗೆ ಸೀರೆ ಉಡಲು ಬಲಾತ್ಕಾರ ಮಾಡಲಾಗಿದೆ. ಹೆಂಡತಿಯ ಮಂಗಳಸೂತ್ರ, ಬಳೆ, ಸಿಂಧೂರ ತೆಗೆದಿಡಲು ಹೇಳಿ ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಅವಂತಿ ಜಾಧವ್ ಅವರಿಗೆ, ಗೂಢಚಾರಿ ಎಂಬ ಆರೋಪ ಹೊತ್ತಿರುವ ಮಗನೊಂದಿಗೆ ಮರಾಠಿಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಪಾಕಿಸ್ತಾನಿ ಅಧಿಕಾರಿಗಳು ತಡೆ ಒಡ್ಡುತ್ತಲೇ ಇದ್ದರು. ಆದರೂ ಮಾತನ್ನು ಮರಾಠಿಯಲ್ಲೇ ಮುಂದುವರಿಸಿದಾಗ ಇಂಟರ್ಕಾಂ ಅನ್ನು ಕಟ್ ಮಾಡಲಾಯಿತು ಎಂದು ಸುಷ್ಮಾ ವಿವರಣೆ ನೀಡಿದರು.
ಪಾಕಿಸ್ತಾನ ಮಾನವೀಯತೆಯನ್ನು ಗಾಳಿಗೆ ತೂರಿದೆ. ಅವರಲ್ಲಿ ಭಯವನ್ನು ತುಂಬಲಾಗಿದೆ. ಈ ಘಟನೆಯ ನಂತರ ಅವರಿಬ್ಬರೂ ಇನ್ನೂ ಚೇತರಿಸಿಕೊಂಡಿಲ್ಲ. ಇದು ಮಾತ್ರವಲ್ಲ, ಕುಲಭೂಷಣ್ ಅವರ ಹೆಂಡತಿಯ ಪಾದರಕ್ಷೆಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಸ್ಪೈ ಕ್ಯಾಮೆರಾ ಅಥವಾ ರೆಕಾರ್ಡರ್ ಇರಬಹುದು ಎಂದು ಅನಗತ್ಯವಾಗಿ ದೂರಲಾಗಿದೆ. ಇದಕ್ಕಿಂತ ಅಸಂಬದ್ಧವಾದದ್ದು ಮತ್ತೊಂದಿಲ್ಲ ಎಂದು ಸುಷ್ಮಾ ದೂರಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications