ಉತ್ತರ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪೊಲೀಸರ ಸಸ್ಪೆಂಡ್ !
ಇಲಾಖೆಯಲ್ಲಿದ್ದುಕೊಂಡೇ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವ ವ್ಯಕ್ತಿಗಳಿಗೆ ನೆರವಾಗುವ ಪೊಲೀಸರಿಗೆ ಶಿಕ್ಷೆ ವಿಧಿಸಿದ ಉತ್ತರ ಪ್ರದೇಶದ ಗೃಹ ಸಚಿವರೂ ಆದ ಆದಿತ್ಯನಾಥ್.
ಲಕ್ನೋ, ಮಾರ್ಚ್ 24: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ಮೇಲೆ ಈವರೆಗೆ ನೂರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇಲಾಖೆಯಲ್ಲಿದ್ದುಕೊಂಡೇ ಭ್ರಷ್ಟಾಚಾರಿಗಳಿಗೆ, ಕಾನೂನು ಬಾಹಿರ ಕೃತ್ಯಗಳಿಗೆ ನೆರವಾಗುವ ಪೊಲೀಸರನ್ನು ಗುರುತಿಸಿ ಈ ಸಸ್ಪೆಂಡ್ ಮಾಡಲಾಗಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಡಿಐಜಿ ಜಾವೇದ್ ಅಹ್ಮದ್ ಅವರ ಆದೇಶದ ಮೇರೆಗೆ ಗೃಹ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕ್ರಮ ಕೈಗೊಂಡಿದ್ದಾರೆ.[ಉತ್ತರ ಪ್ರದೇಶ ಸಂಸದರಿಗೆ ಪಾಠ ಹೇಳಿದ ಮೋದಿ, ಶಾ]

ಗಾಜಿಯಾಬಾದ್, ಮೀರತ್ ಹಾಗೂ ನೋಯ್ಡಾಗಳಲ್ಲಿ ಅತಿ ಹೆಚ್ಚು ಪೊಲೀಸರು ಅಮಾನತುಗೊಂಡಿದ್ದು, ಅಮಾನತುಗೊಂಡಿರುವವರಲ್ಲಿ ಅತಿ ಹೆಚ್ಚಿನ ಜನ ಪೊಲೀಸ್ ಪೇದೆಗಳೇ ಎಂದು ಹೇಳಲಾಗಿದೆ.[ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ: ಏನ್ ದೇವೇಗೌಡ್ರೇ ಹೀಗೆ ಹೇಳ್ಬಿಟ್ರೀ!]












Click it and Unblock the Notifications