ಮಳೆ, ಮೋಡ, ರೆಡಾರ್ ಹಾಗೂ ಮೋದಿ ಹೇಳಿಕೆ, ರಮ್ಯಾ ಗೇಲಿ
ನವದೆಹಲಿ, ಮೇ 12: ಪ್ರಧಾನಿ ನರೇಂದ್ರ ಮೋದಿ ಅವರು ಕೊನೆ ಎರಡು ಹಂತದ ಚುನಾವಣಾ ಭಾಷಣಗಳಲ್ಲಿ ವೈಯಕ್ತಿಕ ಟೀಕೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ, ಆಧಾರವಿಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವುದನ್ನು ನೋಡಿರಬಹುದು, ಕೇಳಿರಬಹುದು, ಈಗ ಆಡಿಕೊಂಡು ನಗುವವರ ಮುಂದೆ ಎಡವಿಬಿದ್ದಂಥ ಪರಿಸ್ಥಿತಿಯಲ್ಲಿ ಮೋದಿ ಸಿಲುಕಿದ್ದಾರೆ.
ಮಾಧ್ಯಮ ಸಂಸ್ಥೆಯ ಜೊತೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಕುರಿತಂತೆ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಸೇರಿದಂತೆ ವಿಪಕ್ಷ ನಾಯಕರು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್ಸ್ ಮುಂದುವರೆದಿವೆ.
ಸಂದರ್ಶನದಲ್ಲಿ ಮಾತನಾಡುತ್ತಾ, ಬಾಲಕೋಟ್ ವೈಮಾನಿಕ ದಾಳಿ ವೇಳೆಯಲ್ಲಿ ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನಿ ರೆಡಾರ್ ಗಳಿಗೆ ಕಾಣಿಸದಂತಾಗಲು ಮೋಡ ಹಾಗೂ ಮಳೆ ಕಾರಣವಾಗಲಿದೆ ಎಂಬ ಸಲಹೆ ನೀಡಿದ್ದೆ ಎಂದು ಮೋದಿ ಹೇಳಿದ್ದರು.
ಅಂದು ರಾತ್ರಿ 9-9.30 ವೇಳೆಗೆ ಮೊದಲಿಗೆ ಕಾರ್ಯಾಚರಣೆ ಪರಿಶೀಲಿಸಲಾಯಿತು, ಪ್ರತಿಕೂಲ ಹವಾಮಾನ ತೊಂದರೆ ಎದುರಾಗಿತ್ತು. ಆ ದಿನ ಭಾರಿ ಮಳೆಯಾಗಿತ್ತು. ರಾತ್ರಿ 12ರ ವೇಳೆಗೆ ಈ ಬಗ್ಗೆ ಪುನರ್ ಪರಿಶೀಲಿಸಿದೆವು, ಈ ಬಗ್ಗೆ ಚರ್ಚಿಸುವಾಗ, ಮೋಡ ಕವಿದ ವಾತಾವರಣ ಇರುವುದು ನಮಗೆ ಅನುಕೂಲಕರವಾಗಿ ಪರಿಣಮಿಸಬಹುದು, ಮಳೆ, ಮೋಡದ ದೆಸೆಯಿಂದ ಪಾಕಿಸ್ತಾನಿಗಳ ರೆಡಾರ್ ಕಣ್ತಪ್ಪಿಸಿ ನಮ್ಮ ಯುದ್ಧ ವಿಮಾನ ಮುನ್ನುಗಬಹುದು ಎಂದು ನಾನು ಸಲಹೆ ನೀಡಿದೆ' ಎಂದು ಮೋದಿ ವಿವರಿಸಿದರು.
|
ಐದು ವರ್ಷಗಳಿಂದ ಇದೇ ಆಯ್ತು ಮೋದಿ
ಐದು ವರ್ಷಗಳಿಂದ ಸುಳ್ಳುಗಳ ಸರಮಾಲೆ ಹಾಕುತ್ತಿರುವ ನರೇಂದ್ರ ಮೋದಿ ಸರ್ಕಾರ, ಮೋಡ ಕವಿದಿರುವುದರಿಂದ ರೆಡಾರ್ ಕಣ್ತಪ್ಪಿಸಬಹುದು -ಕಾಂಗ್ರೆಸ್ಸಿನಿಂದ ಟೀಕೆ
|
ಭಾರತೀಯ ವಾಯುಸೇನೆ ಮೋದಿಯಿಂದ ಅವಮಾನ
ಮೋದಿ ಅವರ ಬಾಲಿಶ, ಅವೈಜ್ಞಾನಿಕ ಹೇಳಿಕೆಯಿಂದ ಭಾರತೀಯ ವಾಯುಸೇನೆಗೆ ಅವಮಾನ ಮಾಡಿದ್ದಂತಾಗಿದೆ. ವಾಯುಸೇನೆಯ ವೃತ್ತಿಪರತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಇದು ನಿಜಕ್ಕೂ ಶೋಚನೀಯ ಎಂದು ಸಿಪಿಐಎಂನ ಮುಖಂಡ ಸೀತಾರಾಮ್ ಯೆಚೂರಿ ಪ್ರತಿಕ್ರಿಯಿಸಿದ್ದಾರೆ.
|
ಒಮರ್ ಅಬ್ದುಲ್ಲಾರಿಂದ ಪ್ರತಿಕ್ರಿಯೆ
ಪಾಕಿಸ್ತಾನಿ ರೆಡಾರ್ ಗಳ ಕಣ್ತಪ್ಪಿಸಿ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿದ್ದರ ಬಗ್ಗೆ ಈಗ ಸರಿಯಾದ ತಾಂತ್ರಿಕ ವಿಷಯ ತಿಳಿಯಿತು. ಮುಂದೆ ವೈಮಾನಿಕ ದಾಳಿ ನಡೆಸುವಾಗ ಇದನ್ನು ಬಳಸಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಮುಖಂಡ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
|
ಮೋದಿ ಅಂಕಲ್ ಗೆ ರಮ್ಯಾ ಪಾಠ
ಸರಿಯಾದ ಮಾಹಿತಿ ಇಲ್ಲದಿದ್ದರೆ ಹೀಗೆ ಆಗುತ್ತೆ, ಗತಕಾಲದಲ್ಲೆ ಜೀವಿಸಬೇಡಿ, ರೆಡಾರ್ ಬಳಕೆ ಬಗ್ಗೆ ತಿಳಿದುಕೊಳ್ಳಿ ಎಂದು ಮೋದಿ ಅಂಕಲ್ ಜೀಗೆ ದಿವ್ಯಸ್ಪಂದನ ಟ್ವೀಟ್ ಮಾಡಿದ್ದಾರೆ.
|
ಇ ಮೇಲ್ ಬಳಕೆ ಬಗ್ಗೆ ಕೂಡಾ ಟ್ವೀಟ್
1988ರಲ್ಲೇ ಇಮೇ ಬಗ್ಗೆ ತಿಳಿದಿತ್ತಾ, ಯಾರಿಗೆ ಇಮೇಲ್ ಕಳಿಸುತ್ತಿದ್ದರಂತೆ, ಇಡೀ ವಿಶ್ವಕ್ಕೆ ತಿಳಿಯದ ವಿಷಯ ಮುಂಚಿತವಾಗಿ ಅರಿವಾಗಿತ್ತಾ ಎಂದು ಗೇಲಿ ಮಾಡಿದ್ದಾರೆ.
-
Ramya: 'ಧುರಂಧರ್-2' ನೋಡಿ ಹಣ, ಸಮಯ ವ್ಯರ್ಥ ಮಾಡಬೇಡಿ: ನಟಿ ರಮ್ಯಾ ಪೋಸ್ಟ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications