ಚಿತ್ರಗಳಲ್ಲಿ: ಇಡೀ ದಿನದ ಪ್ರಮುಖ ರಾಷ್ಟ್ರೀಯ ಸುದ್ದಿಗಳು
ನವದೆಹಲಿ, ಜುಲೈ, 27: ಸಂಸತ್ ಮುಂಗಾರು ಅಧಿವೇಶನ ಮುಂದುವರಿದಿದೆ. ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.
ಹಿಂಸಾಚಾರಕ್ಕೆ ಸಿಕ್ಕಿ ನಲುಗಿದ್ದ ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ. ಶಿಮ್ಲಾ ಮತ್ತು ಆಗ್ರಾದಲ್ಲಿ ಮಳೆ ಆರ್ಭಟ ಮುಂದುವರಿದಿದೆ.
ನೋಯ್ಡಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್. ಬಾಲಿವುಡ್ ಚಿತ್ರವೊಂದರ ಪ್ರಮೋಶನ್ ನಲ್ಲಿ ಕಾಣಿಸಿಕೊಂಡ ನಟ ಜಾನ್ ಅಬ್ರಾಹಿಂ, ನಟಿ ಜಾಕ್ವೆಲಿನ್ ಫರ್ನಾಂಡೀಸ್. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ,,(ಪಿಟಿಐ ಚಿತ್ರಗಳು)
ಅಧಿವೇಶನದಲ್ಲಿ ಮೋದಿ
ಬುಧವಾರ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.
ಖರ್ಗೆ ಮಾತು
ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
ವಿದ್ಯಾ ಝಲಕ್
ನೋಯ್ಡಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದು ಹೀಗೆ
ಬಾಲಿವುಡ್ ತಾರೆಯರು
ಬಾಲಿವುಡ್ ಚಿತ್ರವೊಂದರ ಪ್ರಮೋಶನ್ ನಲ್ಲಿ ಕಾಣಿಸಿಕೊಂಡ ನಟ ಜಾನ್ ಅಬ್ರಾಹಿಂ, ನಟಿ ಜಾಕ್ವೆಲಿನ್ ಫರ್ನಾಂಡೀಸ್.
ಮಳೆ ಆರ್ಭಟ
ಆಗ್ರಾದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಛತ್ರಿ ಆಶ್ರಯಿಸಿ ಸಾಗುತ್ತಿದ್ದವರು ಬುಧವಾರ ಕಣ್ಣಿಗೆ ಬಿದ್ದಿದ್ದು ಹೀಗೆ
ಮಳೆ ಆರ್ಭಟ
ಉತ್ತರಾಖಂಡದಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಉತ್ತರ ಕಾಶಿ ಸಮೀಪ ಕಂಡು ಬಂದ ದೃಶ್ಯ.
ಕಾಶ್ಮೀರ ಸಹಜ ಸ್ಥಿತಿಗೆ
ಹಿಂಸಾಚಾರಕ್ಕೆ ಸಿಕ್ಕಿ ನಲುಗಿದ್ದ ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ. ಬುಧವಾರ ಕಂಡು ಬಂದ ದೃಶ್ಯ ಶಾಂತಿಯ ಕತೆ ಹೇಳುತ್ತಿದೆ.
ಬಸ್ ಸಂಚಾರ
ಬಿಎಂಟಿಸಿ ಮುಷ್ಕರ ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಾಲು ಹಚ್ಚಿ ನಿಂತಿದ್ದ ಖಾಸಗಿ ಬಸ್ ಗಳು.