'ಒಂದು ದಿನ ನಿಮ್ಮ ಅಣ್ಣ (ನೇತಾಜಿ) ವಾಪಸ್ ಬರುತ್ತಾರೆ'
ಕೋಲ್ಕತ್ತಾ, ಸೆಪ್ಟೆಂಬರ್ 19 : 'ನನಗೆ ನಂಬಿಕೆ ಇದೆ, ಒಂದು ದಿನ ನಿಮ್ಮ ಅಣ್ಣ ವಾಪಸ್ ಬರುತ್ತಾರೆ' ಎಂದು ಸುಭಾಷ್ ಚಂದ್ರ ಬೋಸ್ ಪತ್ನಿ ಎಮಿಲಿ ಬೋಸ್ ನೇತಾಜಿ ಸಹೋದರ ಶರತ್ ಚಂದ್ರ ಬೋಸ್ ಅವರಿಗೆ ಬರೆದ ಪತ್ರ ಈಗ ಬಹಿರಂಗಗೊಂಡಿದೆ.
ಸುಭಾಷ್ ಚಂದ್ರ ಬೋಸ್ ಪತ್ನಿ ಎಮಿಲಿ ಬೋಸ್ ಅವರು ನೇತಾಜಿ ಕುಟುಂಬದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದರು ಎಂಬುದು ಇದರಿಂದ ಬಹಿರಂಗಗೊಂಡಿದೆ. 1945ರಲ್ಲಿ ನೇತಾಜಿ ಸಾವಿನ ಸುದ್ದಿ ಕೇಳಿದ ಬಳಿಕ ಈ ಪತ್ರ ವ್ಯವಹಾರ ಹೆಚ್ಚಾಗಿತ್ತು. [ನೇತಾಜಿ ರಹಸ್ಯ ಬಯಲು : ಮಮತಾ ಸೂಪರ್ ಟೈಮಿಂಗ್]

ಪತ್ರದಲ್ಲಿ ತಮ್ಮ ಪುತ್ರಿ ಅನಿತಾ ಫಫ್ ಅವರ ಬೆಳವಣಿಗೆ ಬಗ್ಗೆ ಎಮಿಲಿ ಬೋಸ್ ಮಾಹಿತಿ ನೀಡುತ್ತಿದ್ದರು. ಆದರೆ, ಅವರು ಎಂದೂ ನೇತಾಜಿ ಕುಟುಂಬದಿಂದ ಆರ್ಥಿಕ ನೆರವನ್ನು ಕೇಳಿರಲಿಲ್ಲ ಎಂಬುದು ಪಶ್ಚಿಮ ಬಂಗಾಳ ಸರ್ಕಾರ ಬಹಿರಂಗಗೊಳಿಸಿದ 64 ಕಡತಗಗಳಿಂದ ತಿಳಿದುಬಂದಿದೆ. [ಕಡತದೊಳಗಿನ ಸತ್ಯ: ನೇತಾಜಿ 1945ರ ನಂತರವೂ ಬದುಕಿದ್ದರು]
ಎಮಿಲಿ ಬೋಸ್ ಬರೆಯುತ್ತಿದ್ದ ಎಲ್ಲಾ ಪತ್ರಗಳ ಬಗ್ಗೆ ಸರ್ಕಾರ ಮಾಹಿತಿ ಸಂಗ್ರಹಣೆ ಮಾಡುತ್ತಿತ್ತು. ನೇತಾಜಿ ಬದುಕಿದ್ದಾರೋ? ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ಈ ಕ್ರಮಗಳನ್ನು ಅನುಸರಿಸುತ್ತಿತ್ತು. [ನೇತಾಜಿಗೆ ಸಂಬಂಧಿಸಿದ ರಹಸ್ಯ ಕಡತ ಬಹಿರಂಗ]
ಪತ್ನಿ ಬಗ್ಗೆ ಕಡತದಲ್ಲಿ ಮಾಹಿತಿ : 1946ರ ಮೇ 4ರ ಕಡತದಲ್ಲಿ ನೇತಾಜಿ ಪತ್ನಿಯ ಬಗ್ಗೆ ಮಾಹಿತಿ ಇದೆ. 1941ರಲ್ಲಿ ಎಮಿಲಿ ಅವರು ಬರ್ಲಿನ್ನಲ್ಲಿ ಬೋಸ್ ಅವರನ್ನು ಭೇಟಿ ಮಾಡುತ್ತಾರೆ ಮತ್ತು 1942ರಲ್ಲಿ ಇಬ್ಬರ ವಿವಾಹವಾಗುತ್ತದೆ.
1945ರಲ್ಲಿ ನೇತಾಜಿ ಬದುಕಿರುವ ಕುರಿತು ತಿಳಿಯಲು ಎಮಿಲಿ ನೇತಾಜಿ ಕುಟುಂಬಕ್ಕೆ ಪತ್ರ ಬರೆಯುತ್ತಾರೆ. ನಿಮ್ಮ ಕುಟುಂಬದಿಂದ ಆರ್ಥಿಕ ಸಹಾಯ ಬೇಡ ಎಂದು ಪತ್ರದಲ್ಲಿ ತಿಳಿಸುವ ಎಮಿಲಿ ಅವರು ಪುತ್ರಿಯ ಬಗ್ಗೆ ಅದರಲ್ಲಿ ಮಾಹಿತಿ ನೀಡುತ್ತಾರೆ.
ಹಿಂದೂ ಸಂಪ್ರದಾಯದಂತೆ ನೇತಾಜಿ ಅವರ ಜೊತೆ ವಿವಾಹವಾಗಿದ್ದೇವೆ. ಜರ್ಮನಿಯಲ್ಲಿ ಕಾನೂನು ತೊಡಕುಗಳಿಂದಾಗಿ ವಿವಾಹ ನೋಂದಣಿ ಮಾಡಿಸಲಾಗಲಿಲ್ಲ ಎಂದು ತಿಳಿಸುತ್ತಾರೆ.
ಪಶ್ಚಿಮ ಬಂಗಾಳ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳಲ್ಲಿ ಇಂತಹ ಹಲವಾರು ಪತ್ರಗಳಿವೆ. ಒಂದು ಒತ್ರದಲ್ಲಿ ಎಮಿಲಿ ಅವರು 'ನಿಮ್ಮ ಅಣ್ಣ ಒಂದು ದಿನ ಬಂದೇ ಬರುತ್ತಾರೆ. ಈ ಕನಸು ನನಸಾಗುತ್ತದೆ' ಎಂದು ಬರೆದಿದ್ದಾರೆ. [ಪಿಟಿಐ ಚಿತ್ರ]
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications