ಮೇಘಾಲಯ: ಮತದಾರರ ಮೋಡಿ ಮಾಡಲು ಮೋದಿ 'ಮ್ಯೂಸಿಕ್'
ಶಿಲ್ಲಾಂಗ್, ಫೆಬ್ರವರಿ 09: ಮೋಡಗಳಿಂದ ಆವರಿಸಿರುವ ಸುಂದರ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಈಗ ಚುನಾವಣೆ ಗಾಳಿ ಬೀಸಿದೆ. ಭಾರತದ ಸಂಗೀತದ ಕೇಂದ್ರ ಎನಿಸಿಕೊಂಡಿರುವ ಮೇಘಾಲಯದಲ್ಲಿ ಮತದಾರರನ್ನು ಸೆಳೆಯಲು ಬೇಕು ಮ್ಯೂಸಿಕ್ ಮಂತ್ರ.
ಚುನಾವಣೆ ವೇಳೆಯಲ್ಲಿ ಪಾಶ್ಚಾತ್ಯದಿಂದ ಜಾನಪದ ಗೀತೆ ತನಕ ಎಲ್ಲಾ ಬಗೆಯ ಸಂಗೀತದ ಹೊನಲು ಇಲ್ಲಿ ಹರಿಯುತ್ತದೆ. ಚುನಾವಣಾ ಪ್ರಚಾರದ ವೇಳೆ 'ಮ್ಯೂಸಿಕ್' ಪ್ರಧಾನ ಅಂಶವಾಗಿ ಕಾಣುತ್ತದೆ.
ಹೀಗಾಗಿ, ಸ್ಥಳೀಯ ಜಾನಪದ ಗಾಯಕ, ಗಾಯಕಿಯರು ನೃತ್ಯಗಾರರಿಗೆ ಭರಪೂರ ಅವಕಾಶಗಳು ತೆರೆದುಕೊಂಡಿವೆ.ಅಭ್ಯರ್ಥಿಗಳನ್ನು ಹಾಡಿ ಹೊಗಳು ಬಗೆ ಬಗೆಯ ಮ್ಯೂಸಿಕ್ ಆಲ್ಬಂಗಳು ಬರುತ್ತಿವೆ.

ಮೋದಿ ಮ್ಯೂಸಿಕ್ ಮೋಡಿ: 2016ರಲ್ಲಿ ಇಲ್ಲಿನ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಸ್ಥಳೀಯ ಜಾನಪದ ವಾದ್ಯವೃಂದದ ಜತೆ ಬೆರೆತು ಖಾಸಿ ಸಾಂಪ್ರದಾಯ ಡ್ರಮ್ ಬಾರಿಸಿದ್ದರು. ಮೋದಿ ಅವರಿಗೂ ಸಂಗೀತವೆಂದರೆ ತುಂಬಾ ಇಷ್ಟ. ಮೇಘಾಲಯಕ್ಕೂ ಸಂಗೀತವೆಂದರೆ ಪ್ರಾಣ. ಹೀಗಾಗಿ, ಮೋದಿ ಅವರು ಈ ಬಾರಿ ಮತ್ತೊಮ್ಮೆ ಸಂಗೀತದ ಮೂಲಕವೇ ನಮ್ಮನ್ನು ತಲುಪಬಹುದಾಗಿದೆ ಎಂದು ಕಾಲೇಜ್ ವಿದ್ಯಾರ್ಥಿ ಡೇವಿಡ್ ಡಾಖರ್.
ಇತ್ತೀಚೆಗೆ ಇಲ್ಲಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ತಮ್ಮ ಭಾಷಣದಲ್ಲಿ ಇಲ್ಲಿನ ಜನರ ಸಂಗೀತ ಪ್ರೇಮದ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರು.
ಸ್ಥಳೀಯ ರಾಜಕಾರಣಿಗಳ ಪೈಕಿ ಆರ್ ಜಿ ಲಿಂಗ್ಡೋ ಹಾಗೂ ಯುಡಿಪಿಯ ಪಾಲ್ ಲಿಂಗ್ಡೋ ಅವರು ಸಂಗೀತಗಾರರಾಗಿದ್ದಾರೆ, ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಸ್ವತಃ ಹಾಡುಗಾರರಾಗಿದ್ದಾರೆ.

ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಮೂಲಕ ಕೂಡಾ ಸಂಗೀತ ಹರಿಯುತ್ತಿದೆ. ಮತದಾರರ ಓಲೈಕೆ ನಡೆಯುತ್ತಿದೆ.
ಫೆಬ್ರವರಿ 27ರಂದು ಮೇಘಾಲಯದ ಜತೆಗೆ ನಾಗಾಲ್ಯಾಂಡ್ ನಲ್ಲೂ ವಿಧಾನಸಭಾ ಚುನಾವಣೆ ನಡೆಯಲಿದೆ. ತ್ರಿಪುರಾದಲ್ಲಿ ಫೆ.18ರಂದು ಮತದಾನ ನಿಗದಿಯಾಗಿದೆ. ಎಲ್ಲಾ ಮೂರು ರಾಜ್ಯಗಳಲ್ಲೂ 60 ವಿಧಾನಸಭಾ ಸ್ಥಾನಗಳಿವೆ. ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 03ರಂದು ಪ್ರಕಟವಾಗಲಿದೆ. (ಒನ್ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications