ಮಿಷನ್ ಶಕ್ತಿ 4.0: 18 ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡ ಯೋಗಿ ಆದಿತ್ಯನಾಥ್
ಲಕ್ನೋ, ಅಕ್ಟೋಬರ್ 14: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಶಾರದೀಯ ನವರಾತ್ರಿಯ ಮೊದಲು ಮಿಷನ್ ಶಕ್ತಿಯ ನಾಲ್ಕನೇ ಹಂತಕ್ಕೆ ಚಾಲನೆ ನೀಡಿದರು.
ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸಬಲೀಕರಣಕ್ಕೆ ಯೋಗಿ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಅಕ್ಟೋಬರ್ 15 ರಿಂದ 23 ರವರೆಗೆ 18 ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಮಹಿಳಾ ಸಬಲೀಕರಣ ರ್ಯಾಲಿಗಳು ಇರುತ್ತವೆ. ಉದಾಹರಣೆಗೆ, ಗೋರಖ್ಪುರ ವಲಯ ಮತ್ತು ಗಾಜಿಯಾಬಾದ್ ಕಮಿಷನರೇಟ್ನಲ್ಲಿ ಮಿಷನ್ ಶಕ್ತಿ ಓಟವಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಅಯೋಧ್ಯೆ-ಮೊರಾದಾಬಾದ್ನಲ್ಲಿ ಸನ್ಮಾನಿಸಲಾಗುವುದು. ಪ್ರತಿನಿಧಿಗಳು ಸಹ ಜಿಲ್ಲಾ ಅಭಿಯಾನದ ಭಾಗವಾಗಿರುತ್ತಾರೆ.

ಅಕ್ಟೋಬರ್ 15 ರಿಂದ 23 ರವರೆಗೆ ಜಿಲ್ಲಾ ಮತ್ತು ಕಮಿಷನರೇಟ್ ಮಟ್ಟದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 15 ರಂದು ಗೋರಖ್ಪುರ ವಲಯ ಮತ್ತು ಗಾಜಿಯಾಬಾದ್ ಕಮಿಷನರೇಟ್ನಲ್ಲಿ ಮಿಷನ್ ಶಕ್ತಿ ಓಟವನ್ನು ಆಯೋಜಿಸಲಾಗುವುದು, ಅದೇ ರೀತಿ, ವಾರಣಾಸಿ ಕಮಿಷನರೇಟ್ನ ವಾರಣಾಸಿ ಮತ್ತು ಆಗ್ರಾ ವಲಯದ ಮಥುರಾದಲ್ಲಿನ ಶಾಲಾ, ಕಾಲೇಜುಗಳು ಮತ್ತು ಉದ್ಯೋಗಿಗಳ ಮಹಿಳಾ ಹಾಸ್ಟೆಲ್ಗಳಲ್ಲಿ ಮಿಷನ್ ಶಕ್ತಿ ಅಡಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಅಕ್ಟೋಬರ್ 16ರಂದು ನಡೆಸಲಾಗುವುದು.
ಇದಲ್ಲದೆ ಅಕ್ಟೋಬರ್ 17 ರಂದು ವಾರಣಾಸಿ ವಲಯದ ಮೀರತ್ ಮತ್ತು ಮಿರ್ಜಾಪುರದಲ್ಲಿ ಲಿಂಗ ಸಮಾನತೆ, ಹಿಂಸಾಚಾರ ತಡೆಗಟ್ಟುವಿಕೆ ಮತ್ತು ಸಂತ್ರಸ್ತರಿಗೆ ಸಾಮಾಜಿಕ ಘನತೆಯನ್ನು ಒದಗಿಸುವ ಕಾರ್ಯಕ್ರಮವನ್ನು ಆಯೋಜಿಸಲು ಪ್ರಸ್ತಾಪಿಸಲಾಗಿದೆ. ಅಕ್ಟೋಬರ್ 18 ರಂದು ಪ್ರಯಾಗರಾಜ್ ಮತ್ತು ಗೌತಮ್ ಬುದ್ಧ ನಗರದ ಕೊಳೆಗೇರಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಮಿಷನ್ ಶಕ್ತಿ ಬಗ್ಗೆ ಸಾರ್ವಜನಿಕ ಜಾಗೃತಿ ನಡೆಸಲಾಗುವುದು.
ಅಕ್ಟೋಬರ್ 19 ರಂದು ಕಾನ್ಪುರ್ ನಗರ ಮತ್ತು ಬರೇಲಿಯಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣೆ ಮತ್ತು ಸೈಬರ್ ಕ್ರೈಮ್ ಬಗ್ಗೆ ಅರಿವು ಮೂಡಿಸುವ ಅಭಿಯಾನಗಳು ನಡೆಯಲಿವೆ. ಅಕ್ಟೋಬರ್ 20 ರಂದು ಆಗ್ರಾದ ಪ್ರಧಾನ ಕಛೇರಿ ಮತ್ತು ಪ್ರಯಾಗರಾಜ್ ವಲಯದ ಚಿತ್ರಕೂಟದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯವಿವಾಹ ತಡೆಗಟ್ಟುವಿಕೆ ಇತ್ಯಾದಿಗಳ ಕುರಿತು ಸಾರ್ವಜನಿಕ ಜಾಗೃತಿಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಿಷನ್ ಶಕ್ತಿಯ ಭಾಗವಾಗಿ, ಮುಖ್ಯಮಂತ್ರಿಗಳು ಶನಿವಾರ ಲಕ್ನೋದಲ್ಲಿ ಹಲವಾರು ಮಹಿಳೆಯರನ್ನು ಅವರ ಅತ್ಯುತ್ತಮ ಕೆಲಸಕ್ಕಾಗಿ ಗೌರವಿಸಿದರು. ಅದೇ ರೀತಿ ಅಕ್ಟೋಬರ್ 21 ರಂದು ಲಖನೌ ವಲಯದ ಅಯೋಧ್ಯೆ ಮತ್ತು ಬರೇಲಿ ವಲಯದ ಮೊರಾದಾಬಾದ್ನಲ್ಲಿ ಏಕಗವಾಕ್ಷಿ ಕೇಂದ್ರಗಳು, ಸ್ವ-ಸಹಾಯ ಗುಂಪುಗಳು ಮತ್ತು ಸ್ವ-ಉದ್ಯೋಗದಲ್ಲಿ ತೊಡಗಿರುವ ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ.
ಅಕ್ಟೋಬರ್ 22 ರಂದು ಕಾನ್ಪುರ ವಲಯದ ಝಾನ್ಸಿ ಮತ್ತು ಮೀರತ್ ವಲಯದ ಸಹರಾನ್ಪುರದ ಶಾಲೆಗಳು, ಕಾಲೇಜುಗಳು ಮತ್ತು ಉದ್ಯೋಗಿಗಳ ಮಹಿಳಾ ಹಾಸ್ಟೆಲ್ಗಳಲ್ಲಿ ಮಿಷನ್ ಶಕ್ತಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುವುದು. ನವರಾತ್ರಿಯ ಒಂಬತ್ತನೇ ದಿನದಂದು (ಅಕ್ಟೋಬರ್ 23), ಲಕ್ನೋ ಆಯುಕ್ತರು ಗೋರಖ್ಪುರ ವಲಯದ ಲಕ್ನೋ ಮತ್ತು ದೇವಿಪಟನ್-ಬಲ್ರಾಮ್ಪುರ ಜಿಲ್ಲೆಗಳಲ್ಲಿ ಲಿಂಗ ಸಮಾನತೆ, ಹಿಂಸಾಚಾರ ತಡೆಗಟ್ಟುವಿಕೆ ಮತ್ತು ಸಂತ್ರಸ್ತರಿಗೆ ಸಾಮಾಜಿಕ ಘನತೆಯನ್ನು ಒದಗಿಸುವ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications