ಉ.ಪ್ರ: ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಮಾಂಸದಂಗಡಿಗಳಿಗೆ ಬೆಂಕಿ
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲು ಮುಂದಾಗಿದೆ. ಇದರ ಬೆನ್ನಲ್ಲೇ ಗುಂಪೊಂದು ಹಥ್ರಾಸ್ ನಲ್ಲಿ ಮಾಂಸದಂಗಡಿಗಳಿಗೆ ಬೆಂಕಿ ಇಟ್ಟಿದೆ.
ಲಕ್ನೊ, ಮಾರ್ಚ್ 22: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲು ಮುಂದಾಗಿದೆ. ಇದರ ಬೆನ್ನಲ್ಲೇ ಗುಂಪೊಂದು ಹಥ್ರಾಸ್ ನಲ್ಲಿ ಮಾಂಸದಂಗಡಿಗಳಿಗೆ ಬೆಂಕಿ ಇಟ್ಟಿದೆ.
ಗೋ ರಕ್ಷಕರು ಈ ಅಂಗಡಿಗಳಿಗೆ ಬೆಂಕಿ ಇಟ್ಟಿರಬಹುದು ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೂರೇ ದಿನಗಳಲ್ಲಿ ಈ ಎಲ್ಲಾ ಘಟನೆಗಳು ನಡೆಯುತ್ತಿವೆ.[ರಾಮಮಂದಿರ ನಿರ್ಮಾಣ: ಸಿಎಂ ಯೋಗಿ ಕೈಲಿದೆ 'ಪವರ್' ಅಸ್ತ್ರ]
ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುವುದಾಗಿ ಹೇಳಿದ್ದರು. ಸರಕಾರ ಸ್ಪಷ್ಟವಾಗಿ ಅಕ್ರಮ ಕಸಾಯಿಖಾನೆಗಳನ್ನು ಮಾತ್ರ ಮುಚ್ಚುವುದಾಗಿ ಹೇಳಿತ್ತು. ಆದರೆ ಶಂಕಿತ ಗೋ ರಕ್ಷಕರು ಇದೀಗ ಮಾಂಸದಂಗಡಿಗಳಿಗೆ ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದೆ.
Uttar Pradesh: Three meat shops torched by unknown persons in Hathras, police registers case. pic.twitter.com/Ro0B2jhoJ6
— ANI UP (@ANINewsUP) March 22, 2017
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು ಯಾರಾದರೂ ಮುಂದೆ ಬಂದು ದೂರು ದಾಖಲಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.[ಉ.ಪ್ರ: ಗೋಮಾಂಸ ಮಾರಾಟ ಅಂಗಡಿಗಳ ಮೇಲೆ ಪೊಲೀಸರ ದಾಳಿ]
ಇದೇ ವೇಳೆ ಸ್ಥಳೀಯ ಸಂಸ್ಥೆಗಳು ಅಕ್ರಮ ಕಸಾಯಿಖಾನೆಗಳಿಗೆ ನೊಟೀಸ್ ನೀಡುವ ಕೆಲಸದಲ್ಲಿ ನಿರತವಾಗಿದ್ದು, ಮುಚ್ಚಲು ಅಣಿಯಾಗಿವೆ. ಈಗಾಗಲೇ ಗಾಝಿಯಾಬಾದ್ ನಲ್ಲಿ 20 ಮಾಂಸದಂಗಡಿಗಳನ್ನು ಮಂಗಳವಾರ ಮುಚ್ಚಲಾಗಿದೆ.
ಅಕ್ರಮ ಕಸಾಯಿಖಾನೆಗಳನ್ನು ಮತ್ತು ಅಂಗಡಿಗಳನ್ನು ಮುಚ್ಚುವುದರ ಜತೆಗೆ ಜಾನುವಾರುಗಳ ಕಳ್ಳ ಸಾಗಣೆಯ ಮೇಲೆಯೂ ಕಣ್ಣಿಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. (ಒನ್ ಇಂಡಿಯಾ ಸುದ್ದಿ)