ಸಂಕ್ರಾಂತಿ ವಿಶೇಷ: ಇದು ಕಿಚಡಿ ಬರೆದ ಗಿನ್ನಿಸ್ ದಾಖಲೆ ಸರ್ಕಾರ!
ಶಿಮ್ಲಾ, ಜನವರಿ.14: ಸಂಕ್ರಾಂತಿ ಹಬ್ಬದ ಹಿನ್ನೆಲೆ ಕಿಚಡಿ ತಯಾರಿಸಿದ ಹಿಮಾಚಲ ಪ್ರದೇಶ ಸರ್ಕಾರ ಗಿನ್ನಿಸ್ ದಾಖಲೆ ಬರೆದಿದೆ. ಒಂದೇ ದಿನ ಒಂದೇ ಪಾತ್ರೆಯಲ್ಲಿ ಬರೋಬ್ಬರಿ 1,995 ಕೆಜಿ ಕಿಚಡಿಯನ್ನು ತಯಾರಿಸಿ ಹಂಚಿದ್ದು ಹೊಸ ಇತಿಹಾಸ ಸೃಷ್ಟಿಸಿದೆ.
ಹಿಮಾಚಲ ಪ್ರದೇಶ ಪ್ರವಾಸಿ ಅಭಿವೃದ್ಧಿ ನಿಗಮವು ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತಟ್ಟಪಾಣಿ ಎಂಬಲ್ಲಿ ಜಿಲ್ಲಾ ಮಟ್ಟದ ಪ್ರವಾಸಿ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು.
ನಾಲ್ಕು ಅಡಿ ಎತ್ತರ ಒಂದೇ ಒಂದು ಪಾತ್ರೆಯಲ್ಲಿ ಬರೋಬ್ಬರಿ 1995 ಕೆಜಿ ತೂಕದ ಕಿಚಡಿಯನ್ನು ಸಿದ್ಧುಪಡಿಸಿದ್ದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಈ ಹಿಂದೆ ಒಂದೇ ಪಾತ್ರೆಯಲ್ಲಿ 918.8 ಕೆಜಿ ಕಿಚಡಿ ತಯಾರಿಸಿದ್ದೇ ದಾಖಲೆಯಾಗಿತ್ತು.

ಮುಖ್ಯಮಂತ್ರಿ ಎದುರಿನಲ್ಲೇ ಪ್ರಮಾಣಪತ್ರ ವಿತರಣೆ
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಎದುರಿನಲ್ಲಿ ಅಧಿಕೃತವಾಗಿ ಗಿನ್ನಿಸ್ ದಾಖಲೆ ಬಗ್ಗೆ ಘೋಷಣೆ ಮಾಡಲಾಯಿತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ತಯಾರಿಸಿದ 1,995 ಕಿಚಡಿ ತಯಾರಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯ ಪ್ರತಿನಿಧಿ ರಿಶಿ ನಾಥ್ ಪ್ರಮಾಣಪತ್ರವನ್ನು ನೀಡಿದರು.

1995 ಕೆಜಿ ಕಿಚಡಿ ತಯಾರಿಕೆಗೆ ಐದೇ ಗಂಟೆ
ಹಿಮಾಚಲ ಪ್ರದೇಶದ ತಟ್ಟಪಾಣಿ ಎಂಬಲ್ಲಿ ಜಿಲ್ಲಾ ಮಟ್ಟದ ಪ್ರವಾಸಿ ಹಬ್ಬವನ್ನು ಆಯೋಜಿಸಲಾಗಿತ್ತು. ಈ ವೇಳೆ 25 ಮಂದಿ ಬಾಣಸಿಗರು ಸೇರಿಕೊಂಡು ಕೇವಲ ಐದೇ ಐದು ಗಂಟೆಗಳಲ್ಲಿ ಬರೋಬ್ಬರಿ 1,995 ಕೆಜಿ ಕಿಚಡಿಯನ್ನು ಸಿದ್ಧಪಡಿಸಲಾಯಿತು.

ಕಿಚಡಿಗೆ ಬಳಸಿದ ಸಾಮಗ್ರಿಗಳು ಯಾವುವು?
ಇನ್ನು, 405 ಕೆಜಿ ಅಕ್ಕಿ, 190 ಕೆಜಿ ಬೇಳೆ, 90 ಕೆಜಿ ತುಪ್ಪ, 55 ಕೆಜಿ ಮಸಾಲೆ ಸಾಮಗ್ರಿಗಳು ಹಾಗೂ ಬರೋಬ್ಬರಿ 1,100 ಲೀಟರ್ ನೀರನ್ನು ಬಳಸಿಕೊಂಡು ಕಿಚಡಿಯನ್ನು ತಯಾರಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಸಂಕ್ರಾಂತಿ ಪ್ರಮುಖ ಆಕರ್ಷಣೆಯೇ ತಟ್ಟಪಾಣಿ ಕಿಚಡಿ
ಹಿಮಾಚಲ ಪ್ರದೇಶದಲ್ಲಿ ತಟ್ಟಪಾಣಿಯ ಕಿಚಡಿಗೆ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿ ತಯಾರಿಸುವ ಕಿಚಡಿಯೇ ಪ್ರಮುಖ ಆಕರ್ಷಣೆ ಆಗಿದೆ ಎಂದು ಹೇಳಲಾಗುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications