Get Updates
Get notified of breaking news, exclusive insights, and must-see stories!

ಹೆಣ ಹೂಳುವ ಸ್ಮಶಾನದಲ್ಲಿ ಮಗಳ ಮದುವೆ ಮಾಡಿದ ತಂದೆ!

ಶವಸಂಸ್ಕಾರವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅಂತಿಮ ಹಂತವಾಗಿದೆ. ಇಲ್ಲಿಗೆ ಮಾನವ ಜೀವನ ಕೊನೆಗೊಳ್ಳುತ್ತದೆ. ಆದರೆ ಒಬ್ಬ ತಂದೆ ಮಗಳ ಹೊಸ ಜೀವನಕ್ಕೆ ಕಾಲಿಡಲು ಈ ಸ್ಥಳವನ್ನು ಆಯ್ಕೆ ಮಾಡಿ ಸುದ್ದಿಯಾಗಿದ್ದಾನೆ. ಮೇಲಾಗಿ ಸ್ಮಶಾನ ಎಂದರೆ ದೆವ್ವಗಳು ಇರುತ್ತವೆ ಎಂದು ಅನೇಕರ ಕುರುಡು ನಂಬಿಕೆಯಾಗಿದೆ. ಆದರೆ ಹಲವು ವರ್ಷಗಳಿಂದ ಸ್ಮಶಾನದಲ್ಲಿಯೇ ಕೆಲಸ ಮಾಡುತ್ತಾ ವಾಸವಿದ್ದ ವ್ಯಕ್ತಿ ತನ್ನ ಮಗಳ ಮದುವೆಯನ್ನು ಅದೇ ಸ್ಥಳದಲ್ಲಿ ಮಾಡಿದ್ದಾನೆ.

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಹ್ತಾ ಪಟ್ಟಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಚಿತಾಭಸ್ಮ ದಹನ, ಸಂಬಂಧಿಕರ ರೋದನ ಮತ್ತು ನೀರವ ಮೌನ ದಹನದ ಮಾಮೂಲಿ ದೃಶ್ಯಗಳು ಸ್ಮಶಾನದಲ್ಲಿ ಇರುತ್ತವೆ. ಶವಸಂಸ್ಕಾರವು ವಾಸ್ತವಿಕವಾಗಿ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅಂತಿಮ ಯಾತ್ರೆಯಾಗಿದೆ. ಆದರೆ ಒಬ್ಬ ತಂದೆ ತನ್ನ ಮಗಳ ಹೊಸ ಜೀವನಕ್ಕೆ ಈ ಸ್ಥಳವನ್ನು ವೇದಿಕೆಯಾಗಿ ಆರಿಸಿಕೊಂಡಿದ್ದು ಆಶ್ಚರ್ಯವನ್ನುಂಟು ಮಾಡಿದೆ.

father-married-his-daughter

ಸ್ಮಶಾನದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ವೈದಿಕ ಮಂತ್ರಗಳ ನಡುವೆ ಮದುವೆ ನಡೆಯುತ್ತದೆ ಎಂದು ಯಾರಾದರೂ ಊಹಿಸಲು ಸಾಧ್ಯವೆ? ಆದರೆ ಇದು ನೆರವೇರಿದೆ. ಮೂಢನಂಬಿಕೆಗಳನ್ನು ಧಿಕ್ಕರಿಸಿ ನೇರವಾಗಿ ಸ್ಮಶಾನವನ್ನೇ ಮದುವೆ ಮಂಟಪವನ್ನಾಗಿ ಮಾಡಿಕೊಂಡಿದ್ದಾರೆ ಈ ದಂಪತಿ.

ರಹತಾ ಪಟ್ಟಣದ ನಿವಾಸಿ ಗಂಗಾಧರ ಗಾಯಕವಾಡ ಸ್ಮಶಾನದ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದು, ಹಲವು ವರ್ಷಗಳಿಂದ ಕುಟುಂಬ ಸಮೇತ ಚಿತಾಗಾರದಲ್ಲಿ ವಾಸವಾಗಿದ್ದಾರೆ. ಇತರರು ಅಶುಭವೆಂದು ಪರಿಗಣಿಸುವ ಶವಸಂಸ್ಕಾರದ ಸ್ಥಳ ಹೊಸ ಜೀವನಕ್ಕೆ ಕಾಲಿಡುವ ದಂಪತಿಗಳಿಗೆ ಮಂಟಪವಾಗಿದೆ.

ಗಂಗಾಧರ್ ಅವರ ಮಗಳು ಮಯೂರಿಯ ವಿದ್ಯಾಭ್ಯಾಸ ಮುಗಿದ ನಂತರ ಗಂಗಾಧರ್ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಶಿರಡಿಯ ಮನೋಜ್ ಎಂಬ ಯುವಕನನ್ನು ಪ್ರೀತಿಸುತ್ತಿರುವುದಾಗಿ ಮಗಳು ಹೇಳಿದಾಗ ತಂದೆ ಮಗಳ ಆಸೆಗೆ ಅಡ್ಡಿಯಾಗಲಿಲ್ಲ. ಮನೋಜ್ ಕೂಡ ಆಕೆಯನ್ನು ಮದುವೆಯಾಗಲು ಒಪ್ಪಿದ್ದ.

ಈ ಮದುವೆಗೆ ಎರಡೂ ಮನೆಯವರು ಒಪ್ಪಿದ್ದರು. ಮಯೂರಿ ದೊಡ್ಡವಳಾದ ಮೇಲೆ ಗಂಗಾಧರ್ ಮದುವೆ ಮಾಡಲು ನಿರ್ಧರಿಸಿದ್ದರು. ಮಗಳು ದೊಡ್ಡವಳಾದ ಮೇಲೆ ಗಂಗಾಧರ್ ಸ್ಮಶಾನದಲ್ಲಿ ಮದುವೆ ಮಂಟಪ ನಿರ್ಮಿಸಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ನಗರದ ಬಂಧು ಮಿತ್ರರ ಸಮ್ಮುಖದಲ್ಲಿ ಮಯೂರಿ ಮತ್ತು ಮನೋಜ್ ಮದುವೆ ಅದ್ಧೂರಿಯಾಗಿ ನೆರವೇರಿದೆ. ಸಂಗೀತ ಮತ್ತು ಬಾರಾತ್ ಆಚರಣೆಗಳು ನಡೆದವು. ಈ ಮದುವೆಗೆ ಗ್ರಾಮಸ್ಥರೂ ಸಹಕರಿಸಿದ್ದಾರೆ. ಮದುವೆ ಸಮಾರಂಭದಲ್ಲಿ ನಗರದ ಮಾಜಿ ಮೇಯರ್‌ಗಳು ಹಾಗೂ ಮುಖಂಡರು ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು.

ಮೂಢನಂಬಿಕೆಗಳನ್ನು ಹೋಗಲಾಡಿಸಲು ಈ ಮದುವೆ ಒಂದು ಉದಾಹರಣೆಯಾಗಿದೆ. ಖ್ಯಾತ ಸಾಮಾಜಿಕ ಕಾರ್ಯಕರ್ತ ದಶರತ್ ತುಪೆ ಅವರು ವಿವಾಹದಲ್ಲಿ ಪಾಲ್ಗೊಂಡು ಗಂಗಾಧರ್ ಅವರ ಪ್ರಯತ್ನವನ್ನು ಶ್ಲಾಘಿಸಿದರು. ಮನೋಜ್ ಮತ್ತು ಮಯೂರಿ ನೇರವಾಗಿ ಸ್ಮಶಾನದಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿದರು.

ಓದುತ್ತಿರುವಾಗ ಶಿರಡಿಯಲ್ಲಿ ಮಯೂರಿ ಮನೋಜ್ ಜೈಸ್ವಾಲ್ ಅವರನ್ನು ಭೇಟಿಯಾದರು. ಆ ನಂತರ ಇಬ್ಬರೂ ಶಿರಡಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಸ್ನೇಹಿತರಾದರು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮದುವೆಯಾಗಲು ಬಯಸಿದ್ದರು. ಇದಕ್ಕೆ ಹಿರಿಯರೂ ಒಪ್ಪಿಗೆ ಸೂಚಿಸಿದ್ದು, ಮದುವೆ ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+