ಜಾರ್ಖಂಡ್ನಲ್ಲಿ ಮಿಡಿದ ಕುಣಿಗಲ್ ಹೃದಯ!
ಬೆಂಗಳೂರು, ಮೇ 22: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬನಿಂದ ಜೀವಂತ ಹೃದಯವನ್ನು ತೆಗೆದು, ಅದನ್ನು ಬೆಂಗಳೂರಿನಿಂದ ಕೋಲ್ಕತ್ತಾಕ್ಕೆ ಸಾಗಿಸಿ ಜಾರ್ಖಂಡ್ ವ್ಯಕ್ತಿಯೊಬ್ಬನಿಗೆ ಅಳವಡಿಸುವ ಪ್ರಕ್ರಿಯೆ ಯಶಸ್ವಿಯಾಗಿದೆ.
ಬೆಂಗಳೂರಿನಿಂದ ಚೆನ್ನೈಗೆ ಹೃದಯ ಇನ್ನಿತರೆ ಮಾನವ ಅಂಗಾಂಗಗಳನ್ನು ಕಳುಹಿಸುವಲ್ಲಿ ನಮ್ಮ ವೈದ್ಯ ಯಶಸ್ವಿಯಾಗಿದ್ದರು. ಈಗ ಬಹು ದೂರದ ಕೋಲ್ಕತ್ತಾಗೂ ಯುವಕನ ಹೃದಯ ರವಾನಿಸಿ ಯಶ್ವಿಯಾಗಿ ಕಸಿ ಮಾಡಲಾಗಿದೆ.
ಕೋಲ್ಕತ್ತಾದಲ್ಲಿ ನಡೆಸಲಾದ ಯಶಸ್ವಿ ಹೃದಯಕಸಿ ಚಿಕಿತ್ಸೆ ಇದಾಗಿದೆ. 2018ರ ಮೇ 16ರಂದು ರಸ್ತೆ ಅಪಘಾತಕ್ಕೀಡಾಗಿದ್ದ ವ್ಯಕ್ತಿಯನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಮೇ 19ರಂದು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು. ಚೆನ್ನೈನ ಪೋರ್ಟಿಸ್ ಮತ್ತು ಕೋಲ್ಕತ್ತಾದ ಪೋರ್ಟಿಸ್ ಆಸ್ಪತ್ರೆಯನ್ನು ಸ್ಪರ್ಶ ಆಸ್ಪತ್ರೆ ವೈದ್ಯರು ಸಂಪರ್ಕಿಸಿದ್ದರು.

ಕೋಲ್ಕತ್ತಾದ ಆಸ್ಪತ್ರೆಯಲ್ಲಿದ್ದ ದಿಲ್ಚಾಂದ್ ಸಿಂಗ್ ಎಂಬಾತನಿಗೆ ಹೃದಯದ ಅವಶ್ಯಕತೆ ಇದ್ದಿದ್ದರಿಂದ ತಕ್ಷಣವೇ ಏರ್ ಅಂಬ್ಯುಲೆನ್ಸ್ ಮೂಲಕ ಹೃದಯವನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. 3 ಗಂಟೆ 13 ನಿಮಿಷದಲ್ಲಿ ಬೆಂಗಳೂರಿನಿಂದ ಹೃದಯ ಕೋಲ್ಕತ್ತಾ ತಲುಪಿದ್ದು ಅಲ್ಲಿ ವೈದ್ಯ ತಂಡ ಯಶಸ್ವಿಯಾಗಿ ಚಿಕಿತ್ಸೆ ಮಾಡಿದೆ.












Click it and Unblock the Notifications