Get Updates
Get notified of breaking news, exclusive insights, and must-see stories!

ಸಿಗ್ನಲಿಂಗ್-ಸರ್ಕ್ಯೂಟ್-ಬದಲಾವಣೆಯಲ್ಲಿನ ಲೋಪಗಳು ಒಡಿಶಾ ರೈಲು ಅಪಘಾತಕ್ಕೆ ಕಾರಣ: ಕೇಂದ್ರ ರೈಲ್ವೆ ಸಚಿವ

ನವದೆಹಲಿ, ಜುಲೈ. 21: ತಪ್ಪು ಸಿಗ್ನಲ್‌ಗಳಿಗೆ ಕಾರಣವಾಗುವ 'ಸಿಗ್ನಲಿಂಗ್-ಸರ್ಕ್ಯೂಟ್-ಅಲ್ಟರೇಶನ್' ದೋಷವು ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಟ್ರಿಪಲ್ ರೈಲು ಅಪಘಾತಕ್ಕೆ ಕಾರಣವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.

295 ಜನರನ್ನು ಬಲಿತೆಗೆದುಕೊಂಡ ಬಾಲಸೋರ್ ರೈಲು ಅಪಘಾತದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ವಿಚಾರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

odisha-train-accident

"ಈ ಹಿಂದೆ ನಾರ್ತ್ ಸಿಗ್ನಲ್ ನಿಲ್ದಾಣದ ಸಿಗ್ನಲಿಂಗ್-ಸರ್ಕ್ಯೂಟ್-ಮಾರ್ಪಡಿಸುವಿಕೆಯಲ್ಲಿನ ಲೋಪಗಳು ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ನಂ.94ರಲ್ಲಿ ಎಲೆಕ್ಟ್ರಿಕ್ ಲಿಫ್ಟಿಂಗ್ ಬ್ಯಾರಿಯರ್ ಅನ್ನು ಬದಲಾಯಿಸುವ ಸಂಬಂಧ ಸಿಗ್ನಲಿಂಗ್ ಕಾರ್ಯವನ್ನು ನಿರ್ವಹಿಸುವಾಗ ಹಿಂಬದಿ ಡಿಕ್ಕಿ ಸಂಭವಿಸಿದೆ. ಈ ಲೋಪಗಳು ರೈಲು ಸಂಖ್ಯೆ 12841 ಗೆ ತಪ್ಪು ಸಿಗ್ನಲಿಂಗ್‌ಗೆ ಕಾರಣವಾಯಿತು. ಇದರಲ್ಲಿ ಯುಪಿ ಹೋಮ್ ಸಿಗ್ನಲ್ ನಿಲ್ದಾಣದ ಮುಖ್ಯ ಮಾರ್ಗದಲ್ಲಿ ರನ್-ಥ್ರೂ ಚಲನೆಗೆ ಗ್ರೀನ್ ಸಿಗ್ನಲ್ ಸೂಚಿಸಲು ಕಾರಣವಾಗಿದೆ. ಆದರೆ ಯುಪಿ ಮುಖ್ಯ ಮಾರ್ಗವನ್ನು ಲೂಪ್ ಲೈನ್‌ಗೆ (ಕ್ರಾಸ್‌ಒವರ್ 17A/B) ಸಂಪರ್ಕಿಸುವ ಕ್ರಾಸ್‌ಒವರ್ ಅನ್ನು ಲೂಪ್ ಲೈನ್‌ಗೆ ಹೊಂದಿಸಲಾಗಿದೆ. ತಪ್ಪು ಸಿಗ್ನಲಿಂಗ್‌ನಿಂದ ರೈಲು ನಂ.12841 ಯುಪಿ ಲೂಪ್ ಲೈನ್‌ನಲ್ಲಿ ಸಂಚರಿಸಿದೆ. ಹೀಗಾಗಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ (ಸಂಖ್ಯೆ ಎನ್/ಡಿಡಿಐಪಿ) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ" ಎಂದು ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.

ದುರಂತದ ಕುರಿತು ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಜಾನ್ ಬ್ರಿಟಾಸ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಅವರು ಕೇಳಿದ್ದ ಪ್ರಶ್ನೆಗಳಿಗೆ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿದ್ದರು. ಜೂನ್ 2 ರಂದು ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್, ಹೌರಾಕ್ಕೆ ಹೋಗುವ ಶಾಲಿಮಾರ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಗಳ ಅಪಘಾತ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.

odisha-train-accident

ಈ ತ್ರಿವಳಿ ರೈಲು ದುರಂತದಲ್ಲಿ 295 ಪ್ರಯಾಣಿಕರು ಪ್ರಾಣ ಕಳೆದುಕೊಂಡರೆ, 176 ಮಂದಿಗೆ ಗಂಭೀರ ಗಾಯಗಳಾಗಿವೆ, 451 ಮಂದಿಗೆ ಸಾಮಾನ್ಯ ಗಾಯಗಳಾಗಿವೆ ಮತ್ತು 180 ಮಂದಿ ಪ್ರಥಮ ಚಿಕಿತ್ಸೆ ಪಡೆದು ತೆರಳಿದ್ದಾರೆ. ಈ ಅಪಘಾತದಲ್ಲಿ 41 ಮೃತ ವ್ಯಕ್ತಿಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಶ್ವಿನಿ ವೈಷ್ಣವ್ ಮೇಲ್ಮನೆಗೆ ಮಾಹಿತಿ ನೀಡಿದ್ದಾರೆ.

ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಇಲಾಖಾ ವಿಚಾರಣೆ ಸಮಿತಿ ಮತ್ತು ರೈಲ್ವೆ ಸುರಕ್ಷತಾ ಆಯುಕ್ತರು ವಿವಿಧ ಅಪಘಾತಗಳ ಕಾರಣಗಳನ್ನು ತನಿಖೆ ಮಾಡುವ ಪ್ರಮುಖ ಸಂಸ್ಥೆಗಳಾಗಿವೆ ಎಂದು ಹೇಳಿದ್ದಾರೆ. "ಕಳೆದ 5 ವರ್ಷಗಳಲ್ಲಿ (2018-2023), 201 ಅಪಘಾತ ಪ್ರಕರಣಗಳನ್ನು ಇಲಾಖಾ ವಿಚಾರಣಾ ಸಮಿತಿಯಿಂದ ತನಿಖೆ ಮಾಡಲಾಗಿದೆ ಮತ್ತು 18 ಪ್ರಕರಣಗಳನ್ನು ರೈಲ್ವೆ ಸುರಕ್ಷತಾ ಆಯೋಗದಿಂದ ತನಿಖೆ ಮಾಡಲಾಗಿದೆ" ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

odisha-train-accident

ಅಪಘಾತದ ಮೂಲ ಕಾರಣವನ್ನು ಕಂಡುಹಿಡಿಯುವುದು ಮತ್ತು ಅಪಘಾತ ಮರುಕಳಿಸುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡುವುದು ವಿಚಾರಣೆಯ ಕೇಂದ್ರಬಿಂದುವಾಗಿದೆ. "ವಿವಿಧ ಅಪಘಾತ ತನಿಖಾ ಸಮಿತಿಗಳು ತಮ್ಮ ವರದಿಯಲ್ಲಿ ಸೂಚಿಸಿದ ಶಿಫಾರಸುಗಳ ಪ್ರಕಾರ, ರೈಲ್ವೇ ಆಡಳಿತದಿಂದ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗಿದೆ" ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+