ಇತರ ಕಂದಮ್ಮಗಳಿಗಾಗಿ ಅಮೃತ ಧಾರೆಯೆರೆದ ಮಮತಾಮಯಿಗಳು
ಸೂರತ್, ಆಗಸ್ಟ್ 06 : ತಾಯಿ ತನ್ನ ಮಗುವಿನ ಸ್ತನ್ಯಪಾನ ಮಾಡಿಸಿ ಅಮೃತ ಸಮಾನವಾದ ಹಾಲನ್ನು ಊಡಿಸುವುದರಲ್ಲಿ ವಿಶಿಷ್ಟ ಸುಖವನ್ನು ಅನುಭವಿಸುತ್ತಾಳೆ. ಇದು ಮಗುವಿಗೂ ಮತ್ತು ತಾಯಿಯ ಆರೋಗ್ಯಕ್ಕೂ ಒಳ್ಳೆಯದು.
ಆದರೆ, ತಾಯಿಯ ಹಾಲಿಗೆ ಗತಿಯಿಲ್ಲದೆ ಪೌಷ್ಟಿಕಾಂಶಗಳಿಂದ ವಂಚಿತರಾಗುತ್ತಿರುವ ಮಕ್ಕಳಿಗೆಂದೇ ತಾಯಂದಿರು ಬಂದು ತಮ್ಮ ಎದೆಹಾಲನ್ನು ದಾನವಾಗಿ ನೀಡಿದ್ದು ಭಾರೀ ಪ್ರಶಂಸೆಗೊಳಗಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದಕ್ಕಿಂತ ಇನ್ನೇನು ಬೇಕು?
ಸೂರತ್ ನಲ್ಲಿ ಭಾನುವಾರ 21ನೇ ತಾಯಂದಿರ ಹಾಲು ದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಒಟ್ಟು 130ಕ್ಕೂ ಹೆಚ್ಚು ತಾಯಂದಿರು ಬಂದು 7 ಲೀಟರ್ ಗೂ ಹೆಚ್ಚು ಹಾಲನ್ನು ದಾನ ಮಾಡಿ ತಾಯಿಯ ಮಮತೆಯನ್ನು ಇತರ ಮಕ್ಕಳಿಗಾಗಿ ಮೆರೆದಿದ್ದಾರೆ. ಈ ತಾಯಂದಿರು ಎಂದಿಗೂ ಸುಖವಾಗಿರಲಿ.

ಸೂರತ್ ಪೀಡಿಯಾಟ್ರಿಕ್ ಅಸೋಸಿಯೇಷನ್, ಯಶೋಧಾ ಮಿಲ್ಕ್ ಬ್ಯಾಂಕ್ ಮತ್ತು ಕಛ್ ಯಾದವ ಪಟೀದಾರ್ ಸಮಾಜ ಮಹಿಳಾ ಮಂಡಳದ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದ ವಿಶೇಷವೇನೆಂದರೆ, 25 ವರ್ಷಗಳ ನಂತರ ತಾಯಿಯಾಗಿರುವ ಸುಖ ಅನುಭವಿಸುತ್ತಿರುವ ಮಹಿಳೆಯೊಬ್ಬರು ಬಂದು ಹಾಲನ್ನು ದಾನ ಮಾಡಿದ್ದು. ತಮ್ಮ ಮಕ್ಕಳಿಗೆ ಹಾಲೂಡಿಸಿದರೆ ಎಲ್ಲಿ ತಮ್ಮ ಸೌಂದರ್ಯ ಹಾಳಾಗುತ್ತದೋ ಎಂದು ಚಿಂತಿಸುವ ಅಮ್ಮಂದಿರ ನಡುವೆ ಈ ಮಹಿಳೆ ಆದರ್ಶಪ್ರಾಯವಾಗಿದ್ದಾರೆ.
ಹಲವರು ದೂರದೂರಿಂದ ಬಂದಿದ್ದರೆ, ಕೇವಲ 9 ದಿನಗಳ ಹಿಂದೆ ಮಗುವಿಗೆ ಜನುಮ ನೀಡಿರುವ ತಾಯಿಯೊಬ್ಬರು ಕೂಡ ಹಾಲು ದಾನ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮ ಮನೆಯಲ್ಲಿರುವ ಕೆಲಸ ಕಾರ್ಯಗಳನ್ನೆಲ್ಲ ಬದಿಗೊತ್ತಿ, ಇತರರ ಮಕ್ಕಳು ಸುಖವಾಗಿರಲೆಂದು ಬಂದಿದ್ದು ನೋಡುಗರ ಹೃದಯ ತುಂಬುವಂತಿತ್ತು.
Surat: A milk donation camp was held in the city yesterday for the infants who do not get mothers' milk. More than 130 lactating women participated in the camp and donated milk. #Gujarat pic.twitter.com/wzHB2D5nOE
— ANI (@ANI) August 5, 2018
ಇತ್ತೀಚೆಗೆ ಅನಾಥ ಶಿಶುವೊಂದಕ್ಕೆ ಕರ್ನಾಟಕ ಕಾನ್ಸ್ಟೇಬಲ್ ಒಬ್ಬರು ಸ್ತನ್ಯಪಾನ ಮಾಡಿಸಿ ಮಾನವೀಯತೆ ಮೆರೆದಿದ್ದರು. ಇಂಥ ಎಷ್ಟೋ ಮಕ್ಕಳು ತಾಯಿಯ ಹಾಲು ಸಿಗದೆ ಅನಾರೋಗ್ಯಕ್ಕೆ ಈಡಾಗುತ್ತಿವೆ, ಪೌಷ್ಟಿಕತೆಯಿಂದ ವಂಚಿತವಾಗುತ್ತಿವೆ. ಈ ನಿಟ್ಟಿನಲ್ಲಿ ಹಾಲು ದಾನ ಮಾಡುವ ಶಿಬಿರ ಮಹತ್ವದ್ದು ಮತ್ತು ದೇಶದ ಎಲ್ಲೆಡೆ ಜರುಗಬೇಕು.
ಇಂಥದು ಭಾರತದಲ್ಲಿ ಮಾತ್ರ ಸಾಧ್ಯ. ಇಂಥ ಸುದ್ದಿ ಓದಲು ನಿಜಕ್ಕೂ ಖುಷಿಯಾಗುತ್ತದೆ ಎಂದು ಒಬ್ಬರು ಕೊಂಡಾಡಿದ್ದರೆ, ಹೀಗೆ ಹಾಲನ್ನು ಅನ್ಯ ಮಕ್ಕಳಿಗೆ ದಾನ ಮಾಡಿ ಆ ತಾಯಿ ಎಷ್ಟು ಖುಷಿ ಅನುಭವಿಸಿದ್ದಾರೋ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇಂಥ ಕಾರ್ಯಕ್ರಮಗಳಿಂದಾಗಿಯೇ ಗುಜರಾತ್ ಪ್ರಗತಿಯ ಹಾದಿಯಲ್ಲಿದೆ. ಹಾಲು ದಾನ ಮಾಡಿದ ತಾಯಂದಿರಿಗೆ ನನ್ನ ಹ್ಯಾಟ್ಸ್ ಆಫ್ ಎಂದು ನಬೀನ್ ಪಾತ್ರೋ ಎಂಬುವವರು ಟ್ವೀಟ್ ಮಾಡಿದ್ದಾರೆ. ಮಾನವೀಯತೆ ತೋರಿದ್ದಕ್ಕೆ, ತಾಯ್ತನ ಮೆರೆದಿದ್ದಕ್ಕೆ ಎಲ್ಲ ಅಮ್ಮಂದಿರಿಗೂ ನನ್ನ ಸೆಲ್ಯೂಟ್ ಎಂದು ರುವಾಲಿ ಎಂಬುವವರು ಪ್ರಶಂಸಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications