ಇತರ ಕಂದಮ್ಮಗಳಿಗಾಗಿ ಅಮೃತ ಧಾರೆಯೆರೆದ ಮಮತಾಮಯಿಗಳು
ಸೂರತ್, ಆಗಸ್ಟ್ 06 : ತಾಯಿ ತನ್ನ ಮಗುವಿನ ಸ್ತನ್ಯಪಾನ ಮಾಡಿಸಿ ಅಮೃತ ಸಮಾನವಾದ ಹಾಲನ್ನು ಊಡಿಸುವುದರಲ್ಲಿ ವಿಶಿಷ್ಟ ಸುಖವನ್ನು ಅನುಭವಿಸುತ್ತಾಳೆ. ಇದು ಮಗುವಿಗೂ ಮತ್ತು ತಾಯಿಯ ಆರೋಗ್ಯಕ್ಕೂ ಒಳ್ಳೆಯದು.
ಆದರೆ, ತಾಯಿಯ ಹಾಲಿಗೆ ಗತಿಯಿಲ್ಲದೆ ಪೌಷ್ಟಿಕಾಂಶಗಳಿಂದ ವಂಚಿತರಾಗುತ್ತಿರುವ ಮಕ್ಕಳಿಗೆಂದೇ ತಾಯಂದಿರು ಬಂದು ತಮ್ಮ ಎದೆಹಾಲನ್ನು ದಾನವಾಗಿ ನೀಡಿದ್ದು ಭಾರೀ ಪ್ರಶಂಸೆಗೊಳಗಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದಕ್ಕಿಂತ ಇನ್ನೇನು ಬೇಕು?
ಸೂರತ್ ನಲ್ಲಿ ಭಾನುವಾರ 21ನೇ ತಾಯಂದಿರ ಹಾಲು ದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಒಟ್ಟು 130ಕ್ಕೂ ಹೆಚ್ಚು ತಾಯಂದಿರು ಬಂದು 7 ಲೀಟರ್ ಗೂ ಹೆಚ್ಚು ಹಾಲನ್ನು ದಾನ ಮಾಡಿ ತಾಯಿಯ ಮಮತೆಯನ್ನು ಇತರ ಮಕ್ಕಳಿಗಾಗಿ ಮೆರೆದಿದ್ದಾರೆ. ಈ ತಾಯಂದಿರು ಎಂದಿಗೂ ಸುಖವಾಗಿರಲಿ.

ಸೂರತ್ ಪೀಡಿಯಾಟ್ರಿಕ್ ಅಸೋಸಿಯೇಷನ್, ಯಶೋಧಾ ಮಿಲ್ಕ್ ಬ್ಯಾಂಕ್ ಮತ್ತು ಕಛ್ ಯಾದವ ಪಟೀದಾರ್ ಸಮಾಜ ಮಹಿಳಾ ಮಂಡಳದ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದ ವಿಶೇಷವೇನೆಂದರೆ, 25 ವರ್ಷಗಳ ನಂತರ ತಾಯಿಯಾಗಿರುವ ಸುಖ ಅನುಭವಿಸುತ್ತಿರುವ ಮಹಿಳೆಯೊಬ್ಬರು ಬಂದು ಹಾಲನ್ನು ದಾನ ಮಾಡಿದ್ದು. ತಮ್ಮ ಮಕ್ಕಳಿಗೆ ಹಾಲೂಡಿಸಿದರೆ ಎಲ್ಲಿ ತಮ್ಮ ಸೌಂದರ್ಯ ಹಾಳಾಗುತ್ತದೋ ಎಂದು ಚಿಂತಿಸುವ ಅಮ್ಮಂದಿರ ನಡುವೆ ಈ ಮಹಿಳೆ ಆದರ್ಶಪ್ರಾಯವಾಗಿದ್ದಾರೆ.
ಹಲವರು ದೂರದೂರಿಂದ ಬಂದಿದ್ದರೆ, ಕೇವಲ 9 ದಿನಗಳ ಹಿಂದೆ ಮಗುವಿಗೆ ಜನುಮ ನೀಡಿರುವ ತಾಯಿಯೊಬ್ಬರು ಕೂಡ ಹಾಲು ದಾನ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮ ಮನೆಯಲ್ಲಿರುವ ಕೆಲಸ ಕಾರ್ಯಗಳನ್ನೆಲ್ಲ ಬದಿಗೊತ್ತಿ, ಇತರರ ಮಕ್ಕಳು ಸುಖವಾಗಿರಲೆಂದು ಬಂದಿದ್ದು ನೋಡುಗರ ಹೃದಯ ತುಂಬುವಂತಿತ್ತು.
Surat: A milk donation camp was held in the city yesterday for the infants who do not get mothers' milk. More than 130 lactating women participated in the camp and donated milk. #Gujarat pic.twitter.com/wzHB2D5nOE
— ANI (@ANI) August 5, 2018
ಇತ್ತೀಚೆಗೆ ಅನಾಥ ಶಿಶುವೊಂದಕ್ಕೆ ಕರ್ನಾಟಕ ಕಾನ್ಸ್ಟೇಬಲ್ ಒಬ್ಬರು ಸ್ತನ್ಯಪಾನ ಮಾಡಿಸಿ ಮಾನವೀಯತೆ ಮೆರೆದಿದ್ದರು. ಇಂಥ ಎಷ್ಟೋ ಮಕ್ಕಳು ತಾಯಿಯ ಹಾಲು ಸಿಗದೆ ಅನಾರೋಗ್ಯಕ್ಕೆ ಈಡಾಗುತ್ತಿವೆ, ಪೌಷ್ಟಿಕತೆಯಿಂದ ವಂಚಿತವಾಗುತ್ತಿವೆ. ಈ ನಿಟ್ಟಿನಲ್ಲಿ ಹಾಲು ದಾನ ಮಾಡುವ ಶಿಬಿರ ಮಹತ್ವದ್ದು ಮತ್ತು ದೇಶದ ಎಲ್ಲೆಡೆ ಜರುಗಬೇಕು.
ಇಂಥದು ಭಾರತದಲ್ಲಿ ಮಾತ್ರ ಸಾಧ್ಯ. ಇಂಥ ಸುದ್ದಿ ಓದಲು ನಿಜಕ್ಕೂ ಖುಷಿಯಾಗುತ್ತದೆ ಎಂದು ಒಬ್ಬರು ಕೊಂಡಾಡಿದ್ದರೆ, ಹೀಗೆ ಹಾಲನ್ನು ಅನ್ಯ ಮಕ್ಕಳಿಗೆ ದಾನ ಮಾಡಿ ಆ ತಾಯಿ ಎಷ್ಟು ಖುಷಿ ಅನುಭವಿಸಿದ್ದಾರೋ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇಂಥ ಕಾರ್ಯಕ್ರಮಗಳಿಂದಾಗಿಯೇ ಗುಜರಾತ್ ಪ್ರಗತಿಯ ಹಾದಿಯಲ್ಲಿದೆ. ಹಾಲು ದಾನ ಮಾಡಿದ ತಾಯಂದಿರಿಗೆ ನನ್ನ ಹ್ಯಾಟ್ಸ್ ಆಫ್ ಎಂದು ನಬೀನ್ ಪಾತ್ರೋ ಎಂಬುವವರು ಟ್ವೀಟ್ ಮಾಡಿದ್ದಾರೆ. ಮಾನವೀಯತೆ ತೋರಿದ್ದಕ್ಕೆ, ತಾಯ್ತನ ಮೆರೆದಿದ್ದಕ್ಕೆ ಎಲ್ಲ ಅಮ್ಮಂದಿರಿಗೂ ನನ್ನ ಸೆಲ್ಯೂಟ್ ಎಂದು ರುವಾಲಿ ಎಂಬುವವರು ಪ್ರಶಂಸಿಸಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications