ಮೋದಿ ಸುಮ್ಮನಿದ್ದರೂ ಮಗನ ಕೊಂದ ಉಗ್ರರನ್ನು ನಾನು ಸುಮ್ಮನೆ ಬಿಡುವುದಿಲ್ಲ
ನನ್ನ ಮಗನನ್ನು ಸಾಯಿಸಿದ ಉಗ್ರರ ವಿರುದ್ದ ನಾನು ಸೇಡು ತೀರಿಸಿಕೊಳ್ಳುತ್ತೇನೆ, ಗುರುವಾರ (ಏ28) ಹುತಾತ್ಮರಾದ ಯೋಧನ ತಾಯಿಯ ಆಕ್ರೋಶದ ಮಾತು.
ನವದೆಹಲಿ, ಏ 28: ಭಯೋತ್ಪಾದಕರ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ರಧಾನಮಂತ್ರಿ ವಿಫಲರಾದರೂ, ನನ್ನ ಮಗನನ್ನು ಸಾಯಿಸಿದ ಉಗ್ರರ ವಿರುದ್ದ ನಾನು ಸೇಡು ತೀರಿಸಿಕೊಳ್ಳುತ್ತೇನೆ, ಇದು ಗುರುವಾರ (ಏ27) ಹುತಾತ್ಮರಾದ ಯೋಧನ ತಾಯಿಯ ಆಕ್ರೋಶದ ಮಾತು.
ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ವಿರುದ್ದ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಗುರುವಾರದಂದು ಹುತಾತ್ಮರಾಗಿದ್ದರು. ಇಬ್ಬರು ಭಯೋತ್ಪಾದಕರನ್ನು ಸೇನಾ ಪಡೆ ಹೊಡೆದುರುಳಿಸಿತ್ತು. (ಕುಪ್ವಾರಾ ದಾಳಿ, ನಾಲ್ಕು ಸೈನಿಕರು ಹುತಾತ್ಮ)

ಕ್ಯಾ. ವಿನಾಯಕ್ ಯಾದವ್, ಆಯುಶ್ ಯಾದವ್, ಭೂಪ್ ಸಿಂಗ್ ಗುಜ್ಜಾರ್ ದುಸ್ಸಾ, ನಾಯಕ್ ವೆಂಕಟ್ ರಮಣ್ ಈ ನಾಲ್ವರು ಸೈನಿಕರು ಉಗ್ರರ ನಡುವಿನ ಕಾದಾಟದಲ್ಲಿ ಹುತಾತ್ಮರಾಗಿದ್ದರು.
ಹುತಾತ್ಮ ಆಯುಶ್ ಯಾದವ್ ತಾಯಿ ಮಗನ ಸಾವಿಗೆ ತೀವ್ರ ನೊಂದು ಉಗ್ರರನ್ನು ಸದೆಬಡಿಯಿರಿ, ಒಂದು ವೇಳೆ ನೀವು ಕ್ರಮ ತೆಗೆದುಕೊಳ್ಳದಿದ್ದರೆ ಮಗನನ್ನು ಕೊಂದವರ ವಿರುದ್ದ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಮೋದಿಯನ್ನು ಉದ್ದೇಶಿಸಿ ಆಯುಶ್ ಯಾದವ್ ತಾಯಿ ನೋವಿನ ಮಾತನ್ನಾಡಿದ್ದಾರೆ.
ನಮ್ಮ ಸೈನಿಕರು ಪ್ರತಿರೋಧ ತೋರಿದಾಗ ಮಾತ್ರ ಕಣ್ಣುಬಿಡುವ ಮಾನವಹಕ್ಕುಗಳ ಹೋರಾಟಗಾರರು ಈಗ ಎಲ್ಲಿ ಹೋದರು? ಇವರ ಹೋರಾಟದ ಅರ್ಥವೇನು, ಇವರೆಲ್ಲಾ ನಮ್ಮ ದೇಶದ ನಾಗರೀಕರಾ ಎಂದು ಮೃತ ಆಯುಶ್ ಯಾದವ್ ತಂದೆ ಕೂಡಾ ಬೇಸರದ ಹೇಳಿಕೆಯನ್ನು ನೀಡಿದ್ದಾರೆ.
ದೇಶದ ಇಂದಿನ ಪರಿಸ್ಥಿತಿ ನೋಡಿ, ಉಗ್ರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಮ್ಮ ಸೈನಿಕರು ಹೀಗೆ ಹುತಾತ್ಮರಾಗುತ್ತಲೇ ಇರುತ್ತಾರೆ. ನನ್ನ ಕುಟುಂಬಕ್ಕಾದ ನೋವು, ಬೇರ್ಯಾವ ಕುಟುಂಬಕ್ಕೂ ಬಾರದಿರಲಿ ಎಂದು ಆಯುಶ್ ತಂದೆ ಹೇಳಿದ್ದಾರೆ. (ಚಿತ್ರ: ಟ್ವಿಟ್ಟರ್)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications