Get Updates
Get notified of breaking news, exclusive insights, and must-see stories!

Monsoon: ಭಾರೀ ಮಳೆಗೆ ರಾಜ್ಯದಲ್ಲಿ 11 ಮಂದಿ ಸಾವು: ಚಂಡಮಾರುತ ಪ್ರಭಾವದಿಂದ ಧಾರಾಕಾರ ಮಳೆ ಎಚ್ಚರಿಕೆ

ಬೆಂಗಳೂರು, ಮೇ 25: ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾದಿಂದ ದೇಶದ ದಕ್ಷಿಣ ಭಾಗದ ಒಂದೆರಡು ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದೆ. ಇದರಿಂದಾಗಿ ಕೆಲವೇ ದಿನಗಳ ಅಂತರದಲ್ಲಿ ಭಾರೀ ಮಳೆ ಬರೋಬ್ಬರಿ 11 ಮಂದಿ ಸಾವಿಗೀಡಾದ ಬಗ್ಗೆ ವರದಿ ಆಗಿದೆ. ಇಂದು ಸಹ ಧಾರಾಕಾರ ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನೆರೆಯ ಕೇರಳ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಜೋರು ಮಳೆ ಆಗುತ್ತಿದೆ. ಮುಂಗಾರು ಪ್ರವೇಶಕ್ಕೂ ಮೊದಲೇ ಮಳೆ ಆರ್ಭಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಬಂಗಾಳಕೊಲ್ಲಿಯಲ್ಲಿ ರೇಮಲ್ ಚಂಡಮಾರುತ 'Remal Cyclone' ಸ್ಪಷ್ಟ ಸ್ವರೂಪಕ್ಕೆ ಬಂದಿದೆ. ಇದರ ಪ್ರಭಾವದಿಂದ ಓಡಿಶಾ, ಕೇರಳ, ತಮಿಳುನಾಡಿನಲ್ಲಿ ವ್ಯಾಪಕ ಮಳೆ ಆಗುತ್ತಿದೆ.

Kerala Reported 11 Death by Heavy Rain Due Remal Cyclone Effects on State Precautionary Measure

ಸಾವಿಗೆ ಕಾರಣಗಳೇನು?

ಸದ್ಯ ಕೇರಳದಲ್ಲಿ ಸುರಿಯುತ್ತಿರುವ ನಿರಂತರ ವಿಪರೀತ ಮಳೆಯಿಂದಾಗಿ ಕನಿಷ್ಠ 11 ಮಂದಿ ಸಾವಾಗಿದೆ. ರಾಜ್ಯ ಕಂದಾಯ ಸಚಿವ ಕೆ. ರಾಜನ್ ಅವರು ಹೇಳುವಂತೆ, ಮಳೆ ಸಂಬಂಧಿತ ಸಾವುಗಳು ವರದಿಯಾಗಿದೆ. ಇವುಗಳಲ್ಲಿ 06 ಜನ ನೀರಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ. ಇಬ್ಬರು ಕ್ವಾರಿ ಅಪಘಾತದಲ್ಲಿ ಮರಣ ಹೊಂದಿದರೆ, ಇಬ್ಬರಿಗೆ ಸಿಡಿಲು ಬಡಿದಿದೆ, ಮತ್ತೊಬ್ಬರು ಮನೆ ಕುಸಿತ ಪ್ರಕರಣದಲ್ಲಿ ಜೀವ ಬಿಟ್ಟಿದ್ದಾರೆ.

07 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಶನಿವಾರ ಕೇರಳದ 07 ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಪ್ರಯುಕ್ತ 'ಯೆಲ್ಲೋ ಅಲರ್ಟ್' ಘೋಷಿಸಿದೆ. ರಾಜ್ಯದ 'ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಕಣ್ಣೂರು, ಕಾಸರಗೋಡು ಎರ್ನಾಕುಲಂ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಿಗೆ ಇಂದು (6ರಿಂದ 11 ಸೆಂ.ಮೀ.ವರೆಗೆ) ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ಕೊಡಲಾಗಿದೆ.

ನಾಳೆ ಭಾನುವಾರದಿಂದ ಕೇರಳದಲ್ಲಿ ಮಳೆ ಆರ್ಭಟ ತುಸು ಕಡಿಮೆ ಆಗಲಿದೆ. ಚಂಡಮಾರುತದ ಪ್ರಭಾವ ಕಂಡು ಬಂದರೂ ಸಹಿತ ಇಲ್ಲಿ ಮಳೆ ಇಳಿಕೆಯ ಲಕ್ಷಣಗಳು ಇವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Kerala Reported 11 Death by Heavy Rain Due Remal Cyclone Effects on State Precautionary Measure

ಕೇರಳದಲ್ಲಿ ಸರ್ಕಾರದಿಂದ ಮುನ್ನೆಚ್ಚರಿಕಾ ಕ್ರಮ

ಆದರೂ ಸಹಿತ ಮೀನುಗಾರರು ಮೀನುಗಾರಿಕೆಗೆ ತೆರಳುವುದು, ಜನರು ಸಮುದ್ರದತ್ತ ಹೋಗುವುದ, ಕರಾವಳಿ ತೀರ ಪ್ರದೇಶದಲ್ಲಿ ತಾವು ಇರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ರಜಾದಿನಗಳು ಇರುವ ಕಾರಣ ಮಕ್ಕಳು ಬೀಚ್ ಪ್ರವಾಸ್, ಫಾಲ್ಸ್ ಗಳ ಬಳಿ ತೆರಳವುದನ್ನು ಮುಂದೂಡಬೇಕು ಎಂದು ಸಲಹೆ ನೀಡಲಾಗಿದೆ. ಕೆಲವೆಡೆ ಕರಾವಳಿ, ಹಾಗೂ ಜಲಮೂಲ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ.

ಕೇರಳದಲ್ಲಿ ಸ್ಥಳೀಯ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆ ಒಳಗೊಂಡಂತೆ ಜಿಲ್ಲಾಡಳಿತವು ಎಂತಹ ತುರ್ತು ಪರಿಸ್ಥಿತಿಯನ್ನಾದರೂ ನಿರ್ವಹಿಸಲು ಸಜ್ಜಾಗಿದೆ. ಅಧಿಕಾರಿಗಳಿಗೆ ಸಮನ್ವಯ ಸಾಧಿಸಬೇಕು. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಜನರಿಗೆ ಸ್ಪಂದಿಸುವಂತೆ ಸರ್ಕಾರ ಸೂಚನೆ ನೀಡಿದೆ. ಇನ್ನೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಎರಡು ತಂಡಗಳನ್ನು ರಾಜ್ಯದಲ್ಲಿ ಬೀಡು ಬಿಟ್ಟಿವೆ.

ನೆನ್ನೆ ಶುಕ್ರವಾರ ಮೇ 24 ಹೊತ್ತಿಗೆ ಕೇರಳ ರಾಜ್ಯಾದ್ಯಂತ ಎಂಟು ಪರಿಹಾರ ಶಿಬಿರಗಳಲ್ಲಿ 223 ನಿರಾಶ್ರಿತರಿಗೆ ಮಳೆಯಿಂದ ತೊಂದರೆಗೀಡಾದವರಿಗೆ ಸ್ಥಳವಕಾಶಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೇ 31ರಂದು ಮುಂಗಾರು ಪ್ರವೇಶ?

ಬಂಗಾಳಕೊಲ್ಲಿ ಭಾಗದ ಸಮುದ್ರದಲ್ಲಿರುವ 'ರೆಮಲ್ ಚಂಡಮಾರುತ'ದ ತೀವ್ರತೆ ಹೆಚ್ಚಾದರೆ ಮುಂದಿನ ಒಂದು ವಾರಗಳ ಕಾಲ ಕರಾವಳಿ ರಾಜ್ಯಗಳಿಗೆ ಗುಡುಗು ಮಿಂಚು ಸಹಿತ ಮಳೆ ಅಬ್ಬರಿಸಲಿದೆ. ಮೇ 31ರಂದು ಕೇರಳ ಪ್ರವೇಶಿಸಲಿದೆ. ನಂತರದ ದಿನಗಳಲ್ಲಿ ಮುಂಗಾರು ಮಳೆ ಕರ್ನಾಟಕ ಪ್ರವೇಶಿಸಬಹುದು ಎಂದು ಐಎಂಡಿ ಮುನ್ಸೂಚನಾ ವರದಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+