ಕಾಮುಕರಿಗೆ ರಕ್ತ ಬರುವಂತೆ ಬಡಿದ ಹದಿನಾರರ ಹುಡುಗಿ
ಬರಸತ್ (ಕೊಲ್ಕತಾ), ಸೆ, 08 : ಹೆಣ್ಣು ಮಕ್ಕಳ ಕುರಿತಾಗಿ ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಗಾದೆ ಮಾತನ್ನು ನೀವು ಕೇಳಿರ್ತಿರಿ. ಈ ಮಾತು ಕೊಲ್ಕತಾದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ.
ಚೇಡಿಸುತ್ತಾ, ಅತ್ಯಾಚಾರ ಎಸಗಲು ಮುಂದಾದ ಬೀದಿ ಕಾಮಣ್ಣರ ವಿರುದ್ಧ 16 ವರ್ಷದ ಬಾಲಕಿ ತಿರುಗಿ ಬಿದ್ದಿದ್ದು, ಕಾಮುಕರಿಗೆ ರಕ್ತ ಸುರಿಯುವಂತೆ ಗೂಸಾ ನೀಡಿ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಂಡಿದ್ದಾಳೆ.[ಬಯಲಾಯ್ತು ಹುಬ್ಬಳ್ಳಿ ಪ್ರಿನ್ಸಿಪಾಲರ ವಿಕೃತ ಕಾಮುಕತನ]

ದಿನಂಪ್ರತಿ ಈಕೆ ಓಡಾಡುವ ದಾರಿಯಲ್ಲಿ ರೋಡ್ ರೋಮಿಯೋಗಳ ಕಾಟ ಇದ್ದೇ ಇತ್ತು. ಕೆಲವು ದಿನಗಳ ಹಿಂದೆ ಅವಳನ್ನು ಆಕೆಯನ್ನು ರೇಗಿಸಲು ಮುಂದಾಗಿದ್ದರು. ಇವೆಲ್ಲಾವನ್ನು ಶಾಂತ ರೀತಿಯಲ್ಲೇ ಗಮನಿಸಿ ಸಮಾಧಾನದಿಂದ ಇದ್ದ ಈಕೆ ತನ್ನ ಆಕ್ರೋಶವನ್ನು ಸೋಮವಾರ ಸಂಜೆ ಹೊರಹಾಕಿದ್ದಾಳೆ.
ಈ ಬಾಲಕಿ ಸೋಮವಾರ ಸಂಜೆ ಒಬ್ಬಂಟಿಯಾಗಿ ಬರುವುದನ್ನು ಗಮನಿಸಿದ ಕಾಮುಕರು ಕುಡಿದ ಮತ್ತಿನಲ್ಲಿ, ಬೈಕಿನಲ್ಲಿ ಬಂದು ಆಕೆಗೆ ಹಿಂದಿನಿಂದ ತಳ್ಳಿ ಬೀಳಿಸಿದ್ದಾರೆ. ಇವರ ಪುಂಡಾಟಗಳಿಗೆ ಕುಪಿತಳಾದ ಬಾಲಕಿ ಆ ನಾಲ್ಕು ಜನರ ಮುಖ, ತಲೆ, ಕೈ, ಕಾಲು ರಕ್ತಸಿಕ್ತವಾಗುವಂತೆ ಥಳಿಸಿದ್ದಾಳೆ. ಅತ್ಯಾಚಾರ ಮಾಡಲು ಮುಂದಾದ ಕಾಮುಕರು ಬೆಚ್ಚಿ ಬೀಳುವಂತೆ ಮಾಡಿದ್ದಾಳೆ.
ಈ ಪೋಕರಿಗಳ ಅಸಭ್ಯ ವರ್ತನೆಯನ್ನು ಪ್ರತಿಭಟಿಸಿದ ಬಾಲಕಿ ಕರಾಟೆ ವಿದ್ಯಾರ್ಥಿಯಾಗಿದ್ದು, ಈಕೆಯ ಹೊಡೆತದಿಂದ ಇವರ ದೇಹದ ಅಂಗಾಂಗಳು ನುಜ್ಜುಗುಜ್ಜಾಗಿದೆ. ಇವೆಲ್ಲಾವನ್ನು ಮೂಖ ಪ್ರೇಕ್ಷಕರಾಗಿ ನೋಡುತ್ತಿದ್ದ ಸಾರ್ವಜನಿಕರು ಆಕೆಯ ಸಹಾಯಕ್ಕೆ ಧಾವಿಸಲಿಲ್ಲ.
ಬರಸತ್ ನಗರದ ನಿವಾಸಿಯಾದ ಶಂಕರಿ ಹಾಲ್ದಾರ್ ಈ ಘಟನೆಗೆ ಮುಖ್ಯ ಸಾಕ್ಷಿಯಾಗಿದ್ದು, ಈಕೆಯ ಧೈರ್ಯವನ್ನು ಮೆಚ್ಚಿ, ಈಕೆ ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾಳೆ ಎಂದು ಪ್ರಶಂಸೆ ಮಾತನಾಡಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications