Get Updates
Get notified of breaking news, exclusive insights, and must-see stories!

ರಾಜಸ್ಥಾನದ ಶಾಲೆ ಕುರಿತು ಕನ್ನಡಿಗನ ಟಿಪ್ಪಣಿ

ರಾಜಸ್ಥಾನದಲ್ಲಿ ಸೋಮವಾರದಿಂದ ಶಾಲೆಗಳು ಪ್ರಾರಂಭವಾಗಿವೆ. ಸುಡುವ ಬಿಸಿಲಿನಲ್ಲಿಯೂ ಕೆಲವು ಮಕ್ಕಳು ಪ್ರಥಮ ದಿನವೇ ಶಾಲೆಗೆ ಬಂದಿದ್ದರು ಅಚ್ಚರಿ ಮತ್ತು ಸಂತೋಷ ತಂದಿತು. ಹೀಗಾಗಿ, ಮಕ್ಕಳನ್ನು ಸ್ವಾಗತ ಮಾಡಿ ಬರಮಾಡಿಕೊಳ್ಳಲಾಗುತ್ತಿದೆ. ಜೈಪುರ ಜಿಲ್ಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಒಂದರಲ್ಲಿ ನಾನು ಸಹಾ ಪಾಲ್ಗೊಂಡಿದ್ದೆ.

ಮಕ್ಕಳ ಹಣೆಗೆ ಕುಂಕುಮ ಇಟ್ಟು ಹೂವಿನ ಮಾಲೆಯನ್ನು ಹಾಕಿ ನೋಟ್ ಬುಕ್ ಮತ್ತು ಪೆನ್ನನ್ನು ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು. ಮಾಲೆ ಧರಿಸಿ ಒಂದನೆ ತರಗತಿಗೆ ಬಂದ ಮಕ್ಕಳು ಮತ್ತು ಹಿರಿಯ ಮಕ್ಕಳೆಲ್ಲರು ಸೇರಿ ಪ್ರಭಾತ ಪೇರಿ ನಡೆಸಿ ಮಕ್ಕಳನ್ನು ದಾಖಲಿಸಲು ಕರೆ ನೀಡಿದರು.

Kannadiga writes about schools in Rajasthan

ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ಸಮಿತಿಯವರು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯಲ್ಲಿ ಸಿಗುವ ಬಟ್ಟೆ, ಪಠ್ಯ ಪುಸ್ತಕ, ಬಿಸಿಯೂಟ, ಇಂದು ಶಿಕ್ಷಕರು ಮಕ್ಕಳಿಗೆ ತೋರಿಸುತ್ತಿದ್ದ ಪ್ರೀತಿ ಮತ್ತು ಕೊಟ್ಟ ಸಿಹಿ ತಿಂಡಿ ಇವನ್ನು ನೋಡುತ್ತಾ ನನಗೂ ಅನಿಸಿತು ನಾನು ಯಾಕೆ ದೊಡ್ಡವನಾದೆ? ಜೊತೆಗೆ ದುಃಖವೂ ಆಯಿತು. ನಾನು ಓದುವಾಗ ಇಂತಹ ಸೌಲಭ್ಯ ಇಲ್ಲದೇ ಇದ್ದರು ಸಕಾ೯ರಿ ಶಾಲೆಯ ಬಗ್ಗೆ ಶಿಕ್ಷಕರ ಎಲ್ಲರ ವಿಶ್ವಾಸ ಇತ್ತು. ಇಂದು ವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು.

Kannadiga writes about schools in Rajasthan

ನಂತರ ನಡೆದ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರು ಜನರಲ್ಲಿ ಸಕಾ೯ರಿ ಶಾಲೆಯ ಬಗ್ಗೆ ವಿಶ್ವಾಸ ತುಂಬುವ ಕಾರ್ಯವನ್ನು ಶಿಕ್ಷಕರೇ ಪ್ರಾರಂಭಿಸಬೇಕಾಗಿದೆ. ಇಲ್ಲವಾದರೇ ಮುಂದಿನ ದಿನಗಳಲ್ಲಿ ಸಕಾ೯ರಿ ಶಾಲೆಗಳಲ್ಲಿ ಮಕ್ಕಳೆ ಇಲ್ಲದೇ ಹೋಗುವ ಸ್ಥಿತಿ ಬರಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಮುಂದಿನ ದಿನದಲ್ಲಿ ಎಲ್ಲರೂ ಸೇರಿ ಸಕಾ೯ರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ತೀಮಾ೯ನ ಮಾಡಿದರು.

ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕಾ(ಬ್ಲಾಕ್) ಪಂಚಾಯಿತಿಯ ಶಿಕ್ಷಣ ಸ್ಥಾಯಿ ಸಮಿತಿಗಳು ಸಕಾ೯ರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಗಾಗಿ ಪ್ರಚಾರ ಸಾಮಗ್ರಿಯನ್ನು ತಯಾರಿಸಿ ಎಲ್ಲಾ ಕಡೆ ಹಂಚುತ್ತಿರುವುದು ಕಂಡು ಬಂದಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+