ಮಹಿಳೆ ಬಗ್ಗೆ ಡಿಎಂಕೆ ನಾಯಕ ಸಾದಿಕ್ ಹೇಳಿಕೆ ವಿವಾದ; ಪಕ್ಷದ ಪರವಾಗಿ ಕನಿಮೋಳಿ ಕ್ಷಮೆಯಾಚನೆ
ಚೆನ್ನೈ, ಅಕ್ಟೋಬರ್ 28: ತಮಿಳುನಾಡು ಬಿಜೆಪಿಯ ಮಹಿಳಾ ಕಾರ್ಯಕರ್ತರ ಬಗ್ಗೆ ಡಿಎಂಕೆ ನಾಯಕ ಸೈದಾಯಿ ಸಾದಿಕ್ ಅವಹೇಳನಕಾರಿ ಹೇಳಿಕೆ ನೀಡಿದ ನಂತರ, ಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿ ಅಂತಹ ಹೇಳಿಕೆಗಳಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
I apologise as a woman and human being for what was said.This can never be tolerated irrespective of whoever did it,of the space it was said or party they adhere to.And I’m able to openly apologise for this because my leader @mkstalin and my party @arivalayam don’t condone this. https://t.co/FyVo4KvU9A
— Kanimozhi (கனிமொழி) (@KanimozhiDMK) October 27, 2022
ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಕ್ಲಿಪ್ನಲ್ಲಿ ಸ್ಪೀಕರ್ ಸದಾಯಿ ಸಾದಿಕ್ ಅವರು, ನಟಿ, ಬಿಜೆಪಿ ನಾಯಕಿ ಖುಷ್ಬು ಮತ್ತು ಇತರ ಮೂವರು ಬಿಜೆಪಿ ನಾಯಕರಾದ ನಟಿ ನಮಿತಾ, ಗಾಯತ್ರಿ ರಘುರಾಮ್ ಮತ್ತು ಗೌತಮಿ ಅವರನ್ನು ಅಪಹಾಸ್ಯ ಮಾಡಿದ್ದರು. ಕೇಸರಿ ಪಕ್ಷವು ತಮಿಳುನಾಡಿಗೆ ಕಾಲಿಡಲು ಈ ನಟಿಯರ ಮೇಲೆ ಮಾತ್ರ ಅವಲಂಬಿತವಾಗಿದೆ ಎಂದು ಅವರು ಹೇಳುವುದನ್ನು ವಿಡಿಯೋ ತೋರಿಸಿದೆ.
ಎಸ್ಎಸ್ಸಿ ಪರೀಕ್ಷೆಗಳಲ್ಲಿ ಇಂಗ್ಲಿಷ್-ಹಿಂದಿ ಹೇರಿಕೆಗೆ ಕನಿಮೋಳಿ ಟೀಕೆ
ಎರಡನೇ ಬಾರಿಗೆ ಡಿಎಂಕೆ ನಾಯಕರಾಗಿ ಮರು ಆಯ್ಕೆಯಾದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಧನ್ಯವಾದ ಅರ್ಪಿಸಲು ಡಿಎಂಕೆ ಸಾರ್ವಜನಿಕ ಸಭೆ ನಡೆಸಿತು. ಸಭೆಯಲ್ಲಿ ತಮಿಳುನಾಡು ಕ್ರೀಡಾ ಸಚಿವ ಮೇಯನಾಥನ್ ಶಿವ ವಿ ಕೂಡ ಭಾಗವಹಿಸಿದ್ದರು. ಅಲ್ಲಿ ಸೈದಾಯಿ ಸಾದಿಕ್ ಮಾತನಾಡಿದ್ದಾರೆ ಎನ್ನಲಾಗಿದೆ.
ಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿ ಅವರು ಡಿಎಂಕೆ ನಾಯಕ ಸಾದಿಕ್ ಅವರ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಕನಿಮೋಳಿ "ನಾನು ಮಹಿಳೆಯಾಗಿ ಮತ್ತು ಮನುಷ್ಯಳಾಗಿ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಮಾಡಿದರೂ ಹೇಳಿದ ಜಾಗ ಅಥವಾ ಅವರು ಬದ್ಧವಾಗಿರುವ ಪಕ್ಷವನ್ನು ಲೆಕ್ಕಿಸದೆ ಇದನ್ನು ಎಂದಿಗೂ ಸಹಿಸಲಾಗುವುದಿಲ್ಲ'' ಎಂದು ಹೇಳಿದ್ದಾರೆ.
ನಾನು ಇದಕ್ಕೆ ಬಹಿರಂಗವಾಗಿ ಕ್ಷಮೆಯಾಸುತ್ತೇನೆ. ಏಕೆಂದರೆ ನನ್ನ ನಾಯಕ ಎಂಕೆ ಸ್ಟಾಲಿನ್ ಮತ್ತು ನನ್ನ ಪಕ್ಷದ ಅರಿವಲಯಂ ಇದನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು. ಬಿಜೆಪಿ ನಾಯಕಿ ಖುಷ್ಬು ಅವರು ಟ್ವಿಟ್ಟರ್ನಲ್ಲಿ ಗಂಡಸರು ಮಹಿಳೆಯರನ್ನು ನಿಂದಿಸಿದಾಗ, ಅವರು ಯಾವ ರೀತಿಯ ಪಾಲನೆ ಮತ್ತು ವಿಷಕಾರಿ ವಾತಾವರಣದಲ್ಲಿ ಬೆಳೆದಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಪುರುಷರು ಮಹಿಳೆಯ ಗರ್ಭವನ್ನು ಅವಮಾನಿಸುತ್ತಾರೆ. ಅಂತಹ ಪುರುಷರು ತಮ್ಮನ್ನು ತಾವು ಕಲೈಂಗರ್ ಅನುಯಾಯಿಗಳು ಎಂದು ಕರೆದುಕೊಳ್ಳುತ್ತಾರೆ. ಗೌರವಾನ್ವಿತ ಮುಖ್ಯಮಂತ್ರಿಯವರ ಅಡಿಯಲ್ಲಿ ಇದು ಹೊಸ ದ್ರಾವಿಡ ಮಾದರಿಯೇ" ಎಂದು ಅವರು ಪ್ರಶ್ನಿಸಿದ್ದರು.