ಜಯಾ ಕೇಸ್ : ಕರ್ನಾಟಕದ ವಕೀಲರಿಗೆ ಸಂದಾಯವಾದ ಮೊತ್ತ ಬಹಿರಂಗ
ತಮಿಳುನಾಡಿನ 'ಅಮ್ಮ' ದಿವಂಗತ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಕೋರ್ಟಿನಲ್ಲಿ ವಾದ ಮಂಡಿಸಿದ ವಕೀಲರಿಗೆ ರಾಜ್ಯ ಸರಕಾರದಿಂದ ಪಾವತಿಯಾಗಿರುವ ಒಟ್ಟಾರೆ ಶುಲ್ಕದ ಮೊತ್ತ ಈಗ ಬಹಿರಂಗವಾಗಿದೆ.
ಬೆಂಗಳೂರು, ಮೇ 23: ತಮಿಳುನಾಡಿನ 'ಅಮ್ಮ' ದಿವಂಗತ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಕೋರ್ಟಿನಲ್ಲಿ ವಾದ ಮಂಡಿಸಿದ ವಕೀಲರಿಗೆ ರಾಜ್ಯ ಸರಕಾರದಿಂದ ಪಾವತಿಯಾಗಿರುವ ಒಟ್ಟಾರೆ ಶುಲ್ಕದ ಮೊತ್ತ ಈಗ ಬಹಿರಂಗವಾಗಿದೆ.
ಹಿರಿಯ ಬಿ.ವಿ.ಆಚಾರ್ಯ ಹಾಗೂ ಅವರ ತಂಡಕ್ಕೆ ಸರಿ ಸುಮಾರು 1,85,12,500 ರುಪಾಯಿ (ಒಂದು ಕೋಟಿಯ ಎಂಬತ್ತೈದು ಲಕ್ಷದ ಹನ್ನೆರಡು ಸಾವಿರದ ಐನೂರು ರುಪಾಯಿ) ಸಂದಾಯವಾಗಿದೆ. ಬಿ.ವಿ ಆಚಾರ್ಯ ಅವರ ಫೀಜು 40,75,000 ರು ಎಂದು ಆರ್ ಟಿಐ ಅರ್ಜಿ ಮೂಲಕ ತಿಳಿದು ಬಂದಿದೆ.

ಬರಂದ್ ಬೆಂಚ್(BarandBench) ವರದಿಯಂತೆ ಆರ್ ಟಿಐ ಅರ್ಜಿದಾರರಿಗೆ ಲಭ್ಯ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಭವಾನಿ ಸಿಂಗ್ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ 96,80,00 ರು, ಸಹಾಯಕ ವಕೀಲರಾದ ಸಂದೇಶ್ ಚೌಟಾಗೆ 24,00,00ರು, ಸಿಂಗ್ ಅವರ ಸಹಾಯಕ ಮುರ್ಗೇಶ್ ಮರಡಿಗೆ 23,47,500 ರು ನೀಡಲಾಗಿದೆ.












Click it and Unblock the Notifications