Get Updates
Get notified of breaking news, exclusive insights, and must-see stories!

ಮಹಾತ್ಮ ಗಾಂಧಿಯಿಂದಾಗಿ ಜಮ್ಮು ಕಾಶ್ಮೀರ ಭಾರತದೊಂದಿಗೆ ಉಳಿದಿದೆ: ಫಾರೂಕ್ ಅಬ್ದುಲ್ಲಾ

ಶ್ರೀನಗರ, ಆಗಸ್ಟ್‌ 3: ಮಹಾತ್ಮ ಗಾಂಧಿ ಇದು ಎಲ್ಲರಿಗೂ ಒಂದು ದೇಶ ಎಂದು ಹೇಳಿದ್ದರು. ಆದ್ದರಿಂದಲೇ ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ಉಳಿದುಕೊಂಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಗುರುವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಕುರಿತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ತಾತ್ಕಾಲಿಕ ಆರ್ಟಿಕಲ್‌ ಆಗಇದೆ. ಏಕೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯಬೇಕಾಗಿತ್ತು, ಅದು ಎಂದಿಗೂ ನಡೆಯಲಿಲ್ಲ ಎಂದರು.

Jammu Kashmir remains with India because of Mahatma Gandhi: Farooq Abdullah

ಕಾರ್ಯಕ್ರಮದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಶಾಸಕ ಯೂಸುಫ್ ತರಿಗಾಮಿ, ಕಾರ್ಗಿಲ್ ರಾಜಕಾರಣಿ ಸಜ್ಜದ್ ಹುಸೇನ್ ಕಾರ್ಗಿಲಿ, ಡಿಎಂಕೆ ಸಂಸದೆ ಕನಿಮೋಳಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಆರ್‌ಜೆಡಿ ಸಂಸದ ಮನೋಜ್ ಝಾ ಭಾಗವಹಿಸಿದ್ದರು. ಆದಷ್ಟು ಬೇಗ ಚುನಾವಣೆ ನಡೆಸಬೇಕೆಂಬ ಬೇಡಿಕೆಯನ್ನು ಅನುಮೋದಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 2014 ರ ನವೆಂಬರ್-ಡಿಸೆಂಬರ್ ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಒಟ್ಟಾಗಿ ಸರ್ಕಾರ ರಚಿಸಿದಾಗ ಕೊನೆಯ ವಿಧಾನಸಭಾ ಚುನಾವಣೆಗಳು ನಡೆದವು. 2018ರ ಜೂನ್‌ನಲ್ಲಿ ಮೈತ್ರಿ ಮುರಿದುಬಿದ್ದು ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.

ತರುವಾಯ ಆಗಸ್ಟ್ 2019 ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸಿತು, ಇದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತು. ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ (ಶಾಸಕಾಂಗದೊಂದಿಗೆ) ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಜಮ್ಮು ಮತ್ತು ಕಾಶ್ಮೀರದ ದುರಂತವೆಂದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಮತ್ತು ಎರಡು ಅಧಿಪತ್ಯಗಳು ಸೃಷ್ಟಿಯಾದಾಗಿನಿಂದ ಜಿನ್ನಾ ಕಾಶ್ಮೀರವನ್ನು ತನ್ನ ಜೇಬಿನಲ್ಲಿದೆ ಎಂದು ಭಾವಿಸಿದ್ದರು. ಆದರೆ ಅದು ಆಗಲ್ಲ ಎಂದು ಅವರಿಗೆ ತಿಳಿದಿರಲಿಲ್ಲ. ಅನೇಕರು ಆರ್ಟಿಕಲ್ 370 ತಾತ್ಕಾಲಿಕ ವಿಷಯ ಎಂದು ಹೇಳುತ್ತಾರೆ. ನೀವು ಅದನ್ನು ಅರಿತುಕೊಳ್ಳಬೇಕು. ಏಕೆಂದರೆ ನಾವು ಯಾವ ಪ್ರಭುತ್ವಕ್ಕೆ ಹೋಗಬೇಕೆಂದು ಜನಾಭಿಪ್ರಾಯ ಸಂಗ್ರಹಣೆಯು ನಿರ್ಧರಿಸಬೇಕಾಗಿತ್ತು ಎಂದು ಅವರು ಹೇಳಿದರು.

ಮುಸ್ಲಿಂ ಬಹುಸಂಖ್ಯಾತ ರಾಜ್ಯವು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಉಳಿಯಲು ನಿರ್ಧರಿಸಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾವು ಪಾಕಿಸ್ತಾನಕ್ಕೆ ಹೋಗಬಹುದಿತ್ತು, ನಮ್ಮನ್ನು ಇಲ್ಲಿಗೆ ಕರೆತಂದದ್ದು ಗಾಂಧಿ ಅವರ ಈ ರಾಷ್ಟ್ರವು ಎಲ್ಲರಿಗೂ ಎಂಬ ಅವರ ಮಾತು ಎಂದು ಅವರು ಹೇಳಿದರು.

ಕಾಶ್ಮೀರ ಯಾವತ್ತೂ ಸ್ವಾತಂತ್ರ್ಯ ಕೇಳಲಿಲ್ಲ, ನಾವು ಈ ರಾಷ್ಟ್ರದ ಭಾಗವಾಗಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಅಲ್ಲೋಲಕಲ್ಲೋಲವಾಗಿದೆ. ದೆಹಲಿ ತನ್ನ ಆಟವನ್ನು ಆಡಿದೆ. ಅದು ತನ್ನ ಆಟವನ್ನು ಆಡುತ್ತಲೇ ಇದೆ. ಮೊದಲ ಪ್ರಧಾನಿ ಜವಾಹರಲಾಲ್‌ ಅವರ ಕಾಲದಲ್ಲೂ ಅದೇ ಆಗಿದೆ. ಸರ್ಕಾರದೊಂದಿಗೆ ನಂಬಿಕೆಯ ಕೊರತೆಯಿದೆ ಎಂದು ಅವರು ಹೇಳಿದರು.

ಅವರು ಪಾಕಿಸ್ತಾನದೊಂದಿಗೆ ಮಾತುಕತೆಯ ಅಗತ್ಯವಿದೆ. ಅವರು ಒಪ್ಪಲಿ ಅಥವಾ ಇಲ್ಲದಿರಲಿ, ಎಲ್ಲಿಯವರೆಗೆ ಪಾಕಿಸ್ತಾನದ ಒಳನುಸುಳುವಿಕೆಗಳು ಮುಂದುವರಿಯುತ್ತದೆಯೊ ಅಲ್ಲಿವರೆಗೂ ಅನೇಕರು ಸಾಯುತ್ತಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ದುರಂತವು ಮುಸ್ಲಿಮರ ಮೇಲೆ ಪರಿಣಾಮ ಬೀರುತ್ತದೆ. ನಾನು ಪಾಕಿಸ್ತಾನಿಯೋ ಅಥವಾ ಭಾರತೀಯನೋ ಎಂದು ನಿರ್ಧರಿಸಲು ನೀವು ಯಾರು ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+