ಕಾಶ್ಮೀರ ಕಣಿವೆಗುರುಳಿದ ಮಿನಿ ಬಸ್: 6 ಜನ ದುರ್ಮರಣ
ಉಧಾಂಪುರ, ಜನವರಿ 06: ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆಯ ಕಾವ್ ಗ್ರಾಮದ ಉಧಾಂಪುರ-ರಾಂನಗರ ರಸ್ತೆಯಲ್ಲಿ ಮಿನಿ ಬಸ್ ವೊಂದು ಕಣಿವೆಗೆ ಉರುಳಿದ ಪರಿಣಾಮ 6 ಜನ ದುರ್ಮರಣಕ್ಕೀಡಾಗಿದ್ದಾರೆ.
ಘಟನೆಯಲ್ಲಿ 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಧಾಂಪುರ-ರಾಂನಗರ ರಸ್ತೆಯಲ್ಲಿ ಚಲಿಸುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ.

ಕಣಿವೆಗೆ ಬಿದ್ದಿರುವ ಹಲವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಮೃತರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications