ಅಂತಾರಾಷ್ಟ್ರೀಯ ಕಾಫಿ ದಿನ... ಕಾಫಿ ಎಂಬ ಅಮೃತ ನಿಮಗೆಷ್ಟು ಇಷ್ಟ?!
'ಯಾಕೋ ವಿಪರೀತ ತಲೆ ನೋವಮ್ಮಾ... ಸ್ವಲ್ಪ ಕಾಫಿ ಮಾಡ್ಕೊಡ್ತೀಯಾ...' ಅಂತ ಸುಳ್ಳು ಸುಳ್ಳೇ ತಲೆ ನೋವು ಭರಿಸಿಕೊಂಡು ಕಾಫಿ ಕುಡಿಯುತ್ತಿದ್ದ ಕಾಲವೊಂದಿತ್ತು. ಕಾಫಿ ಕುಡಿದರೆ ದೇಹದ ಉಷ್ಣತೆ ಹೆಚ್ಚುತ್ತೆ ಎಂಬ ಅಮ್ಮನ ವರಾತದಿಂದಾಗಿ ಕಾಫಿಯಿಂದ ವಂಚಿತರಾಗಿದ್ದ ನಮಗೆ, ಅದು ಸಿಗುತ್ತಿದ್ದುದೇ ಈ ತಲೆನೋವು ಬಂದ ದಿನಗಳಲ್ಲಿ!
ಕೊನೆ ಕೊನೆಗೆ 'ಕಾಫಿ ಕುಡಿಯುವ ಸಲುವಾಗಿ ಬಂದ ಸುಳ್ಳು ತಲೆ ನೋವೇ ಇದು' ಎಂಬುದನ್ನು ಅದ್ಹೇಗೋ ತನಿಖೆ ಮಾಡಿದ್ದ ಅಮ್ಮ, ತಲೆನೋವು ಬಂದರೆ ಅದ್ಯಾವುದೋ ಮನೆಮದ್ದಿನ ಹೊಸ ಕಷಾಯ ಹುಡುಕಿಕೊಂಡುಬಿಟ್ಟಳು! ಅಲ್ಲಿಗೆ ಕಾಫಿ ಕತೆ ಗೋವಿಂದ!
ಅಷ್ಟಕ್ಕೂ ಈ ಕಾಫಿ ಕತೆ ಈಗ ನೆನಪಾಗಿದ್ದೇಕೆ ಅಂದ್ರೆ, ಇಂದು ಅಂತಾರಾಷ್ಟ್ರೀಯ ಕಾಫಿ ದಿನವಂತೆ!
ಕಾಫಿಯ ಕುರಿತು ಪ್ರಚಾರ ಮಾಡುವ ಸಲುವಾಗಿ ಮತ್ತು ಕಾಫಿ ಎಂಬ ಪಾನಿಯದ ಮಹತ್ವವನ್ನು ಸಾರಿ ಹೇಳುವ ಸಲುವಾಗಿ ಅಕ್ಟೋಬರ್ 1 ಅನ್ನು ಪ್ರತಿವರ್ಷ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಅಮೋಘ ರುಚಿಯ ಕಾಫಿಯ ಉಪಯೋಗವೇನು?
ಟ್ವಿಟ್ಟರ್ ನಲ್ಲೂ #internationalcoffeeday ಟಾಪ್ ಟ್ರೆಂಡಿಂಗ್ ಆಗಿದ್ದು, ಲಕ್ಷಾಂತರ ಜನ ಈ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಕಾಫಿ ಕುರಿತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
|
ಪ್ರತಿದಿನವೂ ಕಾಫಿ ದಿನ!
"ಓಹ್, ಇಂದು ಅಂತಾರಾಷ್ಟ್ರೀಯ ಕಾಫಿ ದಿನವೇ? ನಾನು ನಿನ್ನೆ ಅಂತರಾಷ್ಟ್ರೀಯ ಕಾಫಿ ದಿನ ಎಂದುಕೊಂಡೆ, ಅಲ್ಲ, ಮೊನ್ನೆ ಎಂದುಕೊಂಡೆ, ಆಚೆಮೊನ್ನೆ ಎಂದುಕೊಂಡೆ... ನಾಳೆ ಎಂದುಕೊಂಡೆ, ನಾಡಿದ್ದು ಎಂದುಕೊಂಡೆ...' ಎಂದು ಪ್ರತಿದಿನವೂ ಕಾಫಿದಿನವೇ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ ಜೆ ಹೋಲ್ಡರ್.
| Array |
ರಿಲ್ಯಾಕ್ಸ್ ಮತ್ತು ಎಂಜಾಯ್!
'ಅಂತಾರಾಷ್ಟ್ರೀಯ ಕಾಫಿ ದಿನದ ಶುಭಾಶಯಗಳು. ಕಾಫಿ ನಮ್ಮ ಆರೋಗ್ಯವನ್ನು ಕಾಪಾಡುತ್ತಿದೆ. ಆರಾಮವಾಗಿ ಕುಳಿತುಕೊಂಡು ದಿನ ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿಯಿರಿ' ಎಂದಿದ್ದಾರೆ ಜೆನ್ನಿ ಬ್ರಾಕಿಸ್.
|
ಕಾಫಿಯ ಮಹತ್ವ
ಕಾಫಿಯನ್ನು ಕುಡಿಯುವ ಹವ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕಾಫಿಯ ಕುರಿತು ಕೆಲವು ಮಹತ್ವದ ಸಂಗತಿಗಳು ಇಲ್ಲಿವೆ ಎಂದು ಕಾಫಿಯ ಕುರಿತ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ಅನ್ಮೋಲ್.
| Array |
ಕಾಫಿ ಅಂದ್ರೆ ಅಮೃತ
ನನಗಂತೂ ಕಾಫಿ ಅಂದ್ರೆ ಅಮೃತವಿದ್ದಂತೆ. ನಾನು ದುಃಖದಲ್ಲಿದ್ದಾಗ ಅದು ನನಗೆ ಖುಷಿ ಕೊಡುತ್ತದೆ, ನಾನು ಸೋಮಾರಿತನದಿಂದ ಮಲಗಿದ್ದಾಗ, ಅದು ಉಲ್ಲಾಸ ತುಂಬಿ ಎಬ್ಬಿಸುತ್ತದೆ, ನಾನು ಬೇಸರದಲ್ಲಿದ್ದಾಗ ನಿದ್ರಿಸುವಂತೆ ಮಾಡುತ್ತದೆ. ಕಾಫಿಗೆ ಮಾಂತ್ರಿಕ ಶಕ್ತಿಯಿದೆ. ಐ ಲವ್ ಕಾಫಿ ಎಂದಿದ್ದಾರೆ ಮೀನಾಕ್ಷಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications