ಗೂಳಿ ಜಾಗದಲ್ಲಿ ನರಿ; ಸೇಲಂನಲ್ಲಿ ಹೀಗೊಂದು ವಿಚಿತ್ರ ಜಲ್ಲಿಕಟ್ಟು!
ಸೇಲಂ, ಜನವರಿ 20: ಜಲ್ಲಿಕಟ್ಟಿನ ಮೇಲೆ ನಿಷೇಧ ಹೇರಿ ಇಡೀ ತಮಿಳುನಾಡು ಚಿಂತೆಯಲ್ಲಿದ್ದರೆ ಇಲ್ಲಿನ ಜನ ಮಾತ್ರ ಆರಾಮವಾಗಿ ಜಲ್ಲಿಕಟ್ಟು ಆಚರಿಸಿದ್ದಾರೆ. ಹಾಗಂಥ ಸುಪ್ರಿಂ ಕೋರ್ಟಿನ ಆದೇಶವನ್ನೇನೂ ಉಲ್ಲಂಘಿಸಿಲ್ಲ. ನ್ಯಾಯಾಲಯದ ಆದೇಶವನ್ನೂ ಪಾಲಿಸಿ, ಗೂಳಿಯನ್ನೂ ಬಳಸದೆ ತಮಿಳುನಾಡಿನ ಸೇಲಂ ಜಿಲ್ಲೆಯ ಜನ 'ನರಿ ಜಲ್ಲಿಕಟ್ಟು' ಆಚರಿಸಿದ್ದಾರೆ.
ಹಾಗೆ ನೋಡಿದರೆ ನರಿ ಕಾಡು ಪ್ರಾಣಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಖಾಯಿದೆಯನ್ವಯ ಈ ರೀತಿಯ ಆಚರಣೆಗಳಿಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಆದರೆ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಜನರಿಗೆ ಔಪಚಾರಿಕೆ ಆಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ನರಿಗಳ ಮೂತಿಯನ್ನು ಹಗ್ಗದಿಂದ ಬಿಗಿದು, ಜನರಿಗೆ ಕಚ್ಚದಂತೆ ಮಾಡಿ ಆಚರಣೆ ನಡೆಸಲು ಬಿಟ್ಟಿದ್ದಾರೆ.[ಜಲ್ಲಿಕಟ್ಟು: ಸುಪ್ರಿಂ ಆದೇಶ ಇನ್ನೂ ಒಂದು ವಾರ ಲೇಟ್]

ನರಿ ಜಲ್ಲಿಕಟ್ಟು ಸೇಲಂ ಜಿಲ್ಲೆಯ ಪಾಲಿಗೆ ಹೊಸದೇನೂ ಅಲ್ಲ. ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರತಿವರ್ಷ ನರಿ ಜಲ್ಲಿಕಟ್ಟನ್ನು 'ಕಾನುಂ ಪೊಂಗಾಲ್' ದಿನ ಆಚರಿಸಲಾಗುತ್ತದೆ.[1-2 ದಿನದಲ್ಲಿ ನಡೆಯಲಿದೆ ಜಲ್ಲಿಕಟ್ಟು -ಪನ್ನೀರ್ ಸೆಲ್ವಂ]
ಆಚರಣೆಯ ದಿನ ನರಿಗಳಿಗೆ ಅಲಂಕಾರ ಮಾಡಲಾಗುತ್ತದೆ. ಹೂ ಹಾಕಿ ಅಲಂಕಾರ ಮಾಡಿದ ನರಿಗಳನ್ನು ದೇವಸ್ಥಾನದ ಮುಂಭಾಗ ತಂದು ಪ್ರಾರ್ಥನೆ ಮಾಡುತ್ತಾರೆ. ನಂತರ ನರಿಗಳ ಹಿಂಭಾಗದ ಕಾಲುಗಳನ್ನು ಸಪುರವಾದ ದಾರದಿಂದ ಕಟ್ಟುತ್ತಾರೆ. ನಂತರ ಜಲ್ಲಿಕಟ್ಟಿನಲ್ಲಿ ಪಾಲ್ಗೊಳ್ಲುವ ಜನರು ನರಿಗಳನ್ನು ಹಿಡಿಯಲು ಅಣಕು ಪ್ರಯತ್ನ ನಡೆಸುತ್ತಾರೆ. ಇದೇ ಸೇಲಂನ 'ನರಿ ಜಲ್ಲಿಕಟ್ಟು'.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications