ಐಸ್ ಬಕೆಟ್ ಹೋಗಿ ರೈಸ್ ಬಕೆಟ್ ಬಂತುǃ
ಬೆಂಗಳೂರು, ಆ. 26 : ಸ್ವಾತಂತ್ರ್ಯ ಬಂದು 67 ವರ್ಷಗಳೇ ಉರುಳಿದ್ದರೂ ಭಾರತೀಯ ಸಮಾಜವನ್ನು ಕಾಡುತ್ತಿರುವ ಹಸಿವಿನ ಭೂತ ಮಾಯವಾಗಿಲ್ಲ. ಸರ್ಕಾರಗಳು, ಸಂಘ ಸಂಸ್ಥೆಗಳು ಜಾರಿ ಮಾಡುವ ಯೋಜನೆಗಳು ದಾರಿ ತಪ್ಪುತ್ತಿರುವುದು ಗೊತ್ತೆ ಇದೆ. ಇದೆಲ್ಲದರ ನಡುವೆ ಬಡವರ ಹಸಿವು ನೀಗಿಸಲು ಹೊಸದೊಂದು ಪ್ರಯತ್ನ ಸದ್ದಿಲ್ಲದೆ ಹೈದರಾಬಾದಿನ ಮಹಿಳೆಯೊಬ್ಬರಿಂದ ಆರಂಭವಾಗಿದೆ.
ಈ ಯೋಜನೆ ಜಾರಿಯಾಗಲು ಯಾರ ಬಳಿ ತೆರಳಿ ಅರ್ಜಿ ನೀಡಬೇಕಾಗಿಲ್ಲ. ಇಲ್ಲವೇ ರಾಜಕಾರಣಿಗಳಿಗೆ ದುಂಬಾಲು ಬೀಳಬೇಕಿಲ್ಲ. ನೀವೇ ಈ ಯೋಜನೆಯ ಸೂತ್ರಧಾರ ಮತ್ತು ಪಾತ್ರಧಾರ. ನೀವು ಮಾಡಬೇಕಾದ್ದು ಇಷ್ಟೇ ಅಡುಗೆ ಮನೆಗೆ ಧಾವಿಸಿ ಒಂದು ಬಕೆಟ್ ಅಕ್ಕಿ ತೆಗದುಕೊಳ್ಳಿ ಸಮೀಪದ ಬಡವರ ಮನೆಗೆ ತೆರಳಿ ದಾನ ಮಾಡಿ, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ, ನಿಮ್ಮ ಸ್ನೇಹಿತರಿಗೂ ಸವಾಲು ಸ್ವೀಕರಿಸಲು ಆಹ್ವಾನ ನೀಡಿ.. (ಮೈಮೇಲೆ ನೀರು ಹೊಯ್ದುಕೊಳ್ಳಿ, ಇಲ್ಲಾ ದೇಣಿಗೆ ನೀಡಿ)

ಪ್ರಪಂಚದೆಲ್ಲೆಡೆ ಸದ್ದು ಮಾಡಿದ್ದ 'ಎಎಲ್ಎಸ್ ಐಸ್ ಬಕೆಟ್ ಚಾಲೆಂಜ್' ಅತ್ತ ಮುಗಿಯುತ್ತಾ ಬಂದಿದ್ದರೇ ಇತ್ತ ಹೈದರಾಬಾದಿನ ಪತ್ರಕರ್ತೆ ಮಂಜು ಲತಾ ಕಲಾ ಕಲಾನಿಧಿ ಹೊಸದೊಂದು 'ರೈಸ್ ಬಕೆಟ್ ಚಾಲೆಂಜ್' ಎಂಬ ವಿನೂತನ ಪ್ರಯತ್ನ ಆರಂಭಿಸಿದ್ದಾರೆ.
ಅಮೆರಿಕದ ಕೋರಿ ಗಿರ್ಫಿನ್ ಅವರ ಐಸ್ ಬಕೆಟ್ ಚಾಲೆಂಜ್ನಿಂದ ಸ್ಫೂರ್ತಿ ಪಡೆದ ಹೈದರಾಬಾದಿನ ಪತ್ರಕರ್ತೆ ಮಂಜು ಲತಾ ಕಲಾನಿಧಿ ಹೊಸದೊಂದು ಪರಂಪರೆ ಆರಂಭಿಸಿದ್ದಾರೆ. ಬಡವರ ಮತ್ತು ದೀನದಲಿತರಿಗೆ ನೆರವಾಗುವ ನಿಟ್ಟಿನಲ್ಲಿ ರೈಸ್ ಬಕೆಟ್ ಚಾಲೆಂಜ್ ಜಾರಿಗೆ ಬಂದಿದೆ.
ಅವರೇ ರೂಪಿಸಿದ ರೈಸ್ ಬಕೆಟ್ ಚಾಲೆಂಜ್ ಅನ್ವಯ ಬಡವರೊಬ್ಬರಿಗೆ ಬಕೆಟ್ ತುಂಬಾ ಅಕ್ಕಿ ದಾನ ನೀಡಿದ ಮಂಜು ಲತಾ ತಮ್ಮ ಫೊಟೊವನ್ನು ಆಗಸ್ಟ್ 22ರಂದು ಫೇಸ್ಬುಕ್ನಲ್ಲಿ ಹಂಚಿದ್ದಾರೆ. ಕೆಲವೇ ತಾಸಿನಲ್ಲಿ ಸಾವಿರಾರು ಪ್ರತಿಕ್ರಿಯೆ ಬಂದಿದ್ದು ಈಗಾಗಲೇ ಅನೇಕರು ಚಾಲೆಂಜ್ ಸ್ವೀಕರಿಸಿದ್ದಾರೆ. ಅನೇಕ ಬಡವರ ಹಸಿವು ಇಂಗಿದೆ.
ಹಾಗಾದರೆ ಇನ್ನೇಕೆ ತಡ ನೀವು ಅಡುಗೆ ಮನೆಗೆ ಧಾವಿಸಿ ಒಂದು ಬಕೆಟ್ ಅಕ್ಕಿ ಕೈಗೆತ್ತಿಕೊಳ್ಳಿ...
ಏನಿದು ರೈಸ್ ಬಕೆಟ್ ಚಾಲೆಂಜ್?
* ನಿಮ್ಮ ಮನೆಯ ಅಡುಗೆ ಕೋಣೆಗೆ ಧಾವಿಸಿ.
* ಅಲ್ಲಿಂದ ಒಂದು ಬಕೆಟ್ ಅಕ್ಕಿ ತೆಗೆದುಕೊಳ್ಳಿ
* ಸಮೀಪದ ಬಡವರ ನಿವಾಸದ ಬಳಿ ತೆರಳಿ ಅವರಿಗೆ ಅಕ್ಕಿ ದಾನ ಮಾಡಿ.
* ಅಕ್ಕಿ ದಾನ ನೀಡುತ್ತಿರುವ ಫೋಟೊ ತೆಗೆದುಕೊಳ್ಳಲು ಮರೆಯಬೇಡಿ
* ನಂತರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ.
* ನಿಮ್ಮ ಸ್ನೇಹಿತರಿಗೆ ಟ್ಯಾಗ್ ಮಾಡುವ ಮೂಲಕ ಅವರಿಗೂ 'ರೈಸ್ ಬಕೆಟ್ ಚಾಲೆಂಜ್' ತೆಗೆದುಕೊಳ್ಳುವಂತೆ ಸವಾಲು ಹಾಕಿ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications