Indian Railways: ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ: ಈ ಪ್ರಯಾಣಿಕರ ಗಮನಕ್ಕೆ
ನವದೆಹಲಿ, ನವೆಂಬರ್ 02: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಸಾಕಷ್ಟು ಹೊಸ ಸೌಲಭ್ಯ, ಉಪಕ್ರಮ ಜಾರಿ ಆಗುತ್ತಲೇ ಇರುತ್ತವೆ. ಇದೀಗ ಪ್ರಯಾಣಿಕರು ತಮ್ಮ ರೈಲು ಪ್ರಯಾಣಕ್ಕಾಗಿ ಕೆಳಗಿನ ಬರ್ತ್ ಸೀಟುಗಳನ್ನು ಬುಕ್ ಮಾಡುವಾಗ ಎದುರಿಸುತ್ತಿರುವ ತೊಂದರೆಗಳ ಪರಿಹಾರ ಭಾಗವಾಗಿ ಹೊಸ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.
ಪ್ರಸಕ್ತ ವರ್ಷದ ಆರಂಭದಲ್ಲಿ ರೈಲು ಸೇವೆ ಬಗ್ಗೆ ತಿಳಿಯಲು ಆಸನ ಕಾಯ್ದಿರಿಸಲು, ಪ್ರಯಾಣ ಬಗ್ಗೆ ಟ್ರ್ಯಾಕ್ ಮಾಡಲು ಬಹುಸೇವೆ ಒಂದೇ ವೇದಿಕೆಯಲ್ಲಿ ಸಿಗುವ ರೈಲ್ಒನ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಇದೀಗ ಕೆಳಗಿನ ಬರ್ತ್ ಸೀಟ್ಗಳನ್ನು ಕಾಯ್ದಿರಿಸಲು ಸುಗಮ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಅವರು ಸೀಟ್ ಲಭ್ಯತೆಗೆ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ನಿಯಮಗಳ ಪರಿಷ್ಕರಿಸಿ ಪರಿಚಯಿಸಲಾಗಿದೆ.

ಪ್ರಯಾಣಿಕರ ಸಮಯ ಬದಲಾವಣೆ, ಕೆಳಗಿನ ಸೀಟ್ ಬರ್ತ್ ಸೀಟು ಕಾಯ್ದರಿಸುವ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ನಿಯಮ ಮಾಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಕೆಳಗಿನ ಬರ್ತ್ ಸ್ವಯಂಚಾಲಿತವಾಗಿ ಹಂಚಿಕೆ ಮಾಡಲು ಮೀಸಲಾತಿ ಕ್ರಮ ತರಲಾಗಿದೆ. ಇದನ್ನು ಹಂಚಿಕೆ ಮಾಡಲು ಟಿಕೆಟ್ ಪರಿಶೀಲಿಸುವ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ. ಅದದರೆ ಮಧ್ಯಮ ಅಥವಾ ಮೇಲಿನ ಬರ್ತ್ ಹಂಚಿಕೆಯಾದ ಸೀಟು ಅನ್ನು ಹಿರಿಯ ನಾಗರಿಕರು ಅರ್ಹ ವ್ಯಕ್ತಿಗಳನ್ನು ನೋಡಿಕೊಂಡು ಅವರಿಗೆ ಕೆಳಗಿನ ಸೀಟ್ ನೀಡಬಹುದಾಗಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.
ರಿಸರ್ವೇಷನ್ ಕೋಚ್ನಲ್ಲಿ ಮಲಗುವ ಸೌಕರ್ಯವನ್ನು ಬದಲಾಯಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಈ ಸೇವೆ ಲಭ್ಯವಿದೆ. ಉಳಿದ ದಿನಗಳಲ್ಲಿ ಕೂತು ಪ್ರಯಾಣಿಸುವ ಆಸನ ವ್ಯವಸ್ಥೆ ನೀಡಲಾಗಿದೆ. ಇನ್ನೂ ಬುಕ್ ಮಾಡಿ ಟಿಕೆಟ್ ರದ್ದತಿ ಮೀಸಲಾತಿ ಅಡಿಯಲ್ಲಿ, ಸೈಡ್ ಲೋವರ್ ಬರ್ತ್ಗಳನ್ನು ನಿಗದಿಪಡಿಸಿದ ಪ್ರಯಾಣಿಕರಿಗೆ, ಸೈಡ್-ಅಪ್ಪರ್ ಬರ್ತ್ನಲ್ಲಿ ಬುಕ್ ಮಾಡಿದವರು ಮತ್ತು RAC ಪ್ರಯಾಣಿಕರು ಹಗಲಿನ ವೇಳೆಯಲ್ಲಿ ಕುಳಿತುಕೊಳ್ಳಲು ಸೀಟನ್ನು ಹಂಚಿಕೊಳ್ಳುತ್ತಾರೆ.
ರಾತ್ರಿ 10:00 ರಿಂದ ಬೆಳಗ್ಗೆ 6:00 ರವರೆಗೆ ಸೈಡ್-ಅಪ್ಪರ್ ಬರ್ತ್ ಸೀಟು ಬುಕ್ ಆಗಿರುವ ಪ್ರಯಾಣಿಕರಿಗೆ ಕೆಳಗಿನ ಬರ್ತ್ ಸೀಟಿನ ಮೇಲೆ ಯಾವ ಹಕ್ಕು ಇರಲ್ಲ. ಏಕೆಂದರೆ ಕೆಳಗಿನ ಸೀಟು ಮಲಗಲು, ಕೂರಲು ಅವಕಾಶ ಇರುತ್ತದೆ. ಇನ್ನೂ ಕೆಳಗಿನ ಬರ್ತ್ ಸೀಟಗಳನ್ನು ಅರ್ಹ ಪ್ರಯಾಣಿಕರಿಗೆ ಲಭ್ಯವಿದ್ದರೆ ಮಾತ್ರವೇ ಬುಕಿಂಗ್ ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ. ನಿಯಮಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಪ್ರಯಾಣಿಕರಿಗೆ ಅದರ ಲಭ್ಯತೆಯ ಆಧಾರದ ಮೇಲೆ ಕೆಳಗಿನ ಸೀಟು ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ಶೀಘ್ರವೇ ಟಿಕೆಟ್ ಬುಕ್ ಮಾಡಿದ ಬಳಿಕ ರದ್ದು ಮಾಡುವ ಅವಕಾಶದಲ್ಲೂ ಬದಲಾವಣೆ ಆಗಲಿದೆ. ಅಂದರೆ ನೀವು ಬುಕ್ ಮಾಡಿದ ದಿನ ಪ್ರಯಾಣ ರದ್ದಾದರೆ ನೀವು ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಈಗ ಇದೆ. ಮುಂದಿನ ದಿನಗಳಲ್ಲಿ ಹೊಸ ನಿಯಮ ಬಂದಲ್ಲಿ, ಟಿಕೆಟ್ ರದ್ದು ಮಾಡಿ ಹೊಸ ದಿನಾಂಕ ಕ್ಕೆ ಬುಕ್ ಮಾಡುವ ಬದಲು, ಹಾಲಿ ಟಿಕೆಟ್ ನಲ್ಲಿ ದಿನಾಂಕ ಬದಲಾಯಿಸುವ ನಿಯಮ ಜಾರಿಗೆ ತರುವ ಚಿಂತನೆಯಲ್ಲಿ ರೈಲ್ವೆ ಇಲಾಖೆ ಇದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಸಿಗಲಿದೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications