ಜೂ.1 ರಿಂದ ರೈಲ್ವೆ ಪ್ರಯಾಣ ದರ ತುಸು ದುಬಾರಿ
ನವದೆಹಲಿ, ಮೇ.31: ರಾಜಧಾನಿ ಹಾಗೂ ಶತಾಬ್ದಿ ರೈಲುಗಳ ಟಿಕೆಟ್ ಗಳು ಪೇಪರ್ ಲೆಸ್ ಆಗುವ ಶುಭ ಸುದ್ದಿ ಬಂದ ಬೆನ್ನಲ್ಲೆ ರೈಲ್ವೆ ಪ್ರಯಾಣ ದರ ಏರಿಕೆಯಾಗುವ ಕಹಿ ಸುದ್ದಿ ಬಂದಿದೆ.
ರಾಜಧಾನಿ ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ ಪ್ರಯಾಣಿಕರು ಟಿಕೆಟ್ ಪ್ರಿಂಟ್ ಕಾಪಿ ಹಿಡಿದು ಓಡಾಡುವ ಸಮಸ್ಯೆಗೆ ಮುಕ್ತಿ ಹಾಡಲಾಗಿದ್ದು, ಈ ಎರಡು ಜನಪ್ರಿಯ ರೈಲುಗಳ ಪ್ರಯಾಣಿಕರು ಮೊಬೈಲ್ ಟಿಕೆಟಿಂಘ್ ವ್ಯವಸ್ಥೆ ಬಳಸಬಹುದು.
ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಚೆನ್ನೈನ ಎಗ್ಮೋರ್ ಹಾಗೂ ತಾಂಬರಂ ಸ್ಟೇಷನ್ ಗಳಲ್ಲಿ ಜಾರಿಗೊಳಿಸಲಾಗಿದೆ. ಭಾರತೀಯ ರೈಲ್ವೆ ವಾರ್ಷಿಕವಾಗಿ 600 ಟನ್ ಗಳಷ್ಟು ಕಾಗದವನ್ನು ಟಿಕೆಟ್ ಹಾಗೂ ರಿಸರ್ವೇಷನ್ ಚಾರ್ಟ್ ಗಾಗಿ ಬಳಸುತ್ತಿದೆ.[ಜೂ.1ರಿಂದ ಹೋಟೆಲ್, ಮೊಬೈಲ್, ಟ್ರಾವೆಲ್ ದುಬಾರಿ]

ಪ್ರಯಾಣ ದರ ಏರಿಕೆ: ಜೂ.1ರಿಂದ ದೇಶದೆಲ್ಲೆಡೆ ಸೇವಾ ತೆರಿಗೆ ಹೆಚ್ಚಳವಾಗುತ್ತಿರುವ ವಿಷಯ ಈಗಾಗಲೇ ಗ್ರಾಹಕರಿಗೆ ಹೊರೆಯಾಗುತ್ತಿದೆ. ರೈಲ್ವೆ ಇಲಾಖೆ ಕೂಡಾ ಮೊದಲ ದರ್ಜೆ ಮತ್ತು ಎಸಿ ಪ್ರಯಾಣ ದರದಲ್ಲಿ ಜೂನ್ 1ರಿಂದ ಜಾರಿಗೆ ಬರುವಂತೆ ಶೇ0.5 ರಷ್ಟು ಏರಿಕೆ ಮಾಡಲು ಮುಂದಾಗಿದೆ.
ಸದ್ಯಕ್ಕೆ ಎಸಿ ಕ್ಲಾಸ್, ಫಸ್ಟ್ ಕ್ಲಾಸ್ ಗಳಲ್ಲಿ ಶೇ 3.7ರಷ್ಟು ಸೇವಾ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಜೂನ್ 1ರಿಂದ ಶೇ 4.2ರಷ್ಟು ಏರಿಕೆಯಾಗಲಿದೆ. ಹೊಸ ಪ್ರಯಾಣ ದರವು ಜೂನ್ 1 ಮತ್ತು ಮುಂದಿನ ದಿನಗಳಲ್ಲಿ ಕಾಯ್ದಿರಿಸಿದ ಟಿಕೆಟ್ಗಳಿಗೆ ಅನ್ವಯವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈಗ ಎಸಿ ಪ್ರಯಾಣ ದರ 1,000 ರು ಇದ್ದರೆ, 10 ರು ಸೇವಾ ತೆರಿಗೆ ರೂಪದಲ್ಲಿ ಹೆಚ್ಚಿಗೆ ನೀಡಬೇಕಾಗುತ್ತದೆ. 2014ರ ಜೂನ್ನಲ್ಲಿ ರೈಲ್ವೆ ಇಲಾಖೆಯು ಸರಕು ಸಾಗಾಟ ದರದಲ್ಲಿ 14.2% ಮತ್ತು ಪ್ರಯಾಣಿಕ ರೈಲು ದರದಲ್ಲಿ 6.5% ಏರಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಯಾಣ ದರಗಳ ಏರಿಕೆ ಎಸಿ ಹಾಗೂ ಮೊದಲ ದರ್ಜೆಗಳಿಗಷ್ಟೇ ಅನ್ವಯಿಸಲಿದ್ದು, ರೈಲಿನ ಮೂಲಕ ಸಾಗಿಸಲಾಗುವ ಎಲ್ಲ ವಸ್ತುಗಳಿಗೆ ಸೇವಾ ತೆರಿಗೆ ವಿಧಿಸಲಾಗುವುದು. ಈ ಏರಿಕೆ ಅಲ್ಪವಾಗಿದ್ದು, ಕೇಂದ್ರದ ಸಾಮಾನ್ಯ ಬಜೆಟ್ ನಲ್ಲಿ ನೀಡಿದ ಆದೇಶದಂತೆ ಬೆಲೆ ಏರಿಕೆ ಅನ್ವಯವಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.
-
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications