ಜೂ.1 ರಿಂದ ರೈಲ್ವೆ ಪ್ರಯಾಣ ದರ ತುಸು ದುಬಾರಿ
ನವದೆಹಲಿ, ಮೇ.31: ರಾಜಧಾನಿ ಹಾಗೂ ಶತಾಬ್ದಿ ರೈಲುಗಳ ಟಿಕೆಟ್ ಗಳು ಪೇಪರ್ ಲೆಸ್ ಆಗುವ ಶುಭ ಸುದ್ದಿ ಬಂದ ಬೆನ್ನಲ್ಲೆ ರೈಲ್ವೆ ಪ್ರಯಾಣ ದರ ಏರಿಕೆಯಾಗುವ ಕಹಿ ಸುದ್ದಿ ಬಂದಿದೆ.
ರಾಜಧಾನಿ ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ ಪ್ರಯಾಣಿಕರು ಟಿಕೆಟ್ ಪ್ರಿಂಟ್ ಕಾಪಿ ಹಿಡಿದು ಓಡಾಡುವ ಸಮಸ್ಯೆಗೆ ಮುಕ್ತಿ ಹಾಡಲಾಗಿದ್ದು, ಈ ಎರಡು ಜನಪ್ರಿಯ ರೈಲುಗಳ ಪ್ರಯಾಣಿಕರು ಮೊಬೈಲ್ ಟಿಕೆಟಿಂಘ್ ವ್ಯವಸ್ಥೆ ಬಳಸಬಹುದು.
ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಚೆನ್ನೈನ ಎಗ್ಮೋರ್ ಹಾಗೂ ತಾಂಬರಂ ಸ್ಟೇಷನ್ ಗಳಲ್ಲಿ ಜಾರಿಗೊಳಿಸಲಾಗಿದೆ. ಭಾರತೀಯ ರೈಲ್ವೆ ವಾರ್ಷಿಕವಾಗಿ 600 ಟನ್ ಗಳಷ್ಟು ಕಾಗದವನ್ನು ಟಿಕೆಟ್ ಹಾಗೂ ರಿಸರ್ವೇಷನ್ ಚಾರ್ಟ್ ಗಾಗಿ ಬಳಸುತ್ತಿದೆ.[ಜೂ.1ರಿಂದ ಹೋಟೆಲ್, ಮೊಬೈಲ್, ಟ್ರಾವೆಲ್ ದುಬಾರಿ]

ಪ್ರಯಾಣ ದರ ಏರಿಕೆ: ಜೂ.1ರಿಂದ ದೇಶದೆಲ್ಲೆಡೆ ಸೇವಾ ತೆರಿಗೆ ಹೆಚ್ಚಳವಾಗುತ್ತಿರುವ ವಿಷಯ ಈಗಾಗಲೇ ಗ್ರಾಹಕರಿಗೆ ಹೊರೆಯಾಗುತ್ತಿದೆ. ರೈಲ್ವೆ ಇಲಾಖೆ ಕೂಡಾ ಮೊದಲ ದರ್ಜೆ ಮತ್ತು ಎಸಿ ಪ್ರಯಾಣ ದರದಲ್ಲಿ ಜೂನ್ 1ರಿಂದ ಜಾರಿಗೆ ಬರುವಂತೆ ಶೇ0.5 ರಷ್ಟು ಏರಿಕೆ ಮಾಡಲು ಮುಂದಾಗಿದೆ.
ಸದ್ಯಕ್ಕೆ ಎಸಿ ಕ್ಲಾಸ್, ಫಸ್ಟ್ ಕ್ಲಾಸ್ ಗಳಲ್ಲಿ ಶೇ 3.7ರಷ್ಟು ಸೇವಾ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಜೂನ್ 1ರಿಂದ ಶೇ 4.2ರಷ್ಟು ಏರಿಕೆಯಾಗಲಿದೆ. ಹೊಸ ಪ್ರಯಾಣ ದರವು ಜೂನ್ 1 ಮತ್ತು ಮುಂದಿನ ದಿನಗಳಲ್ಲಿ ಕಾಯ್ದಿರಿಸಿದ ಟಿಕೆಟ್ಗಳಿಗೆ ಅನ್ವಯವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈಗ ಎಸಿ ಪ್ರಯಾಣ ದರ 1,000 ರು ಇದ್ದರೆ, 10 ರು ಸೇವಾ ತೆರಿಗೆ ರೂಪದಲ್ಲಿ ಹೆಚ್ಚಿಗೆ ನೀಡಬೇಕಾಗುತ್ತದೆ. 2014ರ ಜೂನ್ನಲ್ಲಿ ರೈಲ್ವೆ ಇಲಾಖೆಯು ಸರಕು ಸಾಗಾಟ ದರದಲ್ಲಿ 14.2% ಮತ್ತು ಪ್ರಯಾಣಿಕ ರೈಲು ದರದಲ್ಲಿ 6.5% ಏರಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಯಾಣ ದರಗಳ ಏರಿಕೆ ಎಸಿ ಹಾಗೂ ಮೊದಲ ದರ್ಜೆಗಳಿಗಷ್ಟೇ ಅನ್ವಯಿಸಲಿದ್ದು, ರೈಲಿನ ಮೂಲಕ ಸಾಗಿಸಲಾಗುವ ಎಲ್ಲ ವಸ್ತುಗಳಿಗೆ ಸೇವಾ ತೆರಿಗೆ ವಿಧಿಸಲಾಗುವುದು. ಈ ಏರಿಕೆ ಅಲ್ಪವಾಗಿದ್ದು, ಕೇಂದ್ರದ ಸಾಮಾನ್ಯ ಬಜೆಟ್ ನಲ್ಲಿ ನೀಡಿದ ಆದೇಶದಂತೆ ಬೆಲೆ ಏರಿಕೆ ಅನ್ವಯವಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications