ಭಾರತದಲ್ಲಿ H3N2 ವೈರಸ್ ಭೀತಿ, IMA ತುರ್ತು ಸಭೆ, ಪ್ರತಿರೋಧಕ ಔಷಧ ಬಳಕೆ ಬಿಟ್ಟುಬಿಡಿ: ತಜ್ಞರು
ಭಾರತದ ಹಲವು ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಎಚ್3ಎನ್2 ವೈರಸ್ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘವು ಆದಷ್ಟು ಆ್ಯಂಟಿಬಯೋಟಿಕ್ಸ್ ಔಷಧ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಹಲವು ಸಲಹೆ ನೀಡಿದೆ.
ಬೆಂಗಳೂರು, ಮಾರ್ಚ್ 06: ಭಾರತದ ಹಲವು ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಎಚ್3ಎನ್2 ವೈರಸ್ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘವು ಆದಷ್ಟು ಆ್ಯಂಟಿಬಯೋಟಿಕ್ಸ್ ಔಷಧ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಹಲವು ಸಲಹೆ ನೀಡಿದೆ.
ವೈರಸ್ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ವೈದ್ಯರು, ತಜ್ಞರ ಜೊತೆ ತುರ್ತು ಸಭೆ ನಡೆಸಿದರು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ಎರಡು ಮೂರು ತಿಂಗಳಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾಗುವುದು ಹೆಚ್ಚಾಗಿದೆ. ಇದರಲ್ಲಿ ಬಹುತೇಕ ಮಂದಿಗೆ ಎಚ್3ಎನ್2 ವೈರಸ್ ತಗುಲಿರುವುದು ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಸಂಘ ಸಭೆಯಲ್ಲಿ ಚರ್ಚಿಸಿ ಹಲವು ಸಲಹೆ ನೀಡಿದೆ.

ಅಕ್ಟೋಬರ್ನಿಂದ ಫೆಬ್ರವರಿವರೆಗೆ ಚಳಿಗಾಲ ಹಿನ್ನೆಲೆ ಈ ರೀತಿ ಅನಾರೋಗ್ಯ ಸಮಾನ್ಯ ಎನ್ನಬಹುದು. ಆದರೆ ಜನವರಿ ಬಳಿಕವು ನಿರಂತರವಾಗಿ ಜನರು ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಜ್ವರ ಕೇವಲ ಮೂರು ದಿನ ಕಂಡು ಬಂದರೆ, ಕೆಮ್ಮು ಮಾತ್ರ ಮುಂದುವರಿದೆ. ಏಳು ದಿನದ ಬಳಿಕವು ಕೆಮ್ಮು ಮುಂದುವರಿದೆ. ಇದು ವೈರಸ್ ಲಕ್ಷಣ ಅಂತಲೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಸಮಸ್ಯೆ ಹೆಚ್ಚಾಗಿ 60 ವರ್ಷ ಮೇಲ್ಪಟ್ಟವರು ಹಾಗೂ 15 ವರ್ಷಕ್ಕಿಂತ ಕೆಳಗಿನವರಲ್ಲಿ ಕಂಡು ಬರುತ್ತಿದೆ. ಆದ್ದರಿಂದ ವೈಯಕ್ತಿಕವಾಗಿ ಚಿಕಿತ್ಸೆ ಪಡೆಯುವುದು, ಹೆಚ್ಚು ಆ್ಯಂಟಿಬಯೋಟಿಕ್ಸ್ (ಅಜಿಥ್ರೋಮೈಸಿನ್, ಅಮೋಕ್ಸಿಕ್ಲೇವ್) ಸೇರಿದಂತೆ ಇನ್ನಿತರ ಪ್ರತಿರೋಧಕ ಶಕ್ತಿ ಹೊಂದಿರುವ ಔಷಧಿ ಬಳಕೆ ಬಗ್ಗೆ ಕಡಿಮೆ ಮಾಡುವಂತೆ ಹಾಗೂ ಚಿಕಿತ್ಸೆಗೆ, ವೈದ್ಯರ ಭೇಟಿಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ.

ಆಗಿನಮಟ್ಟಿಗೆ ಆ್ಯಂಟಿಬಯೋಟಿಕ್ಸ್ ಔಷಧಿ ಕೆಲಸ ಮಾಡಿದರೂ ಸಹ ಅವುಗಳ ಅತೀಯಾದ ಬಳಕೆಯಿಂದ ಅತಿಸಾರ, ಇನ್ನಿತರ ಆನಾರೋಗ್ಯ ಸಮಸ್ಯೆ ಉಂಟಾಗಬಹುದು ಎನ್ನಲಾಗಿದೆ. ಇನ್ನು ಅತಿಸಾರ ಸಮಸ್ಯೆ ನಿವಾರಣಗೆ ಅಮೊಕ್ಸಿಸಿಲಿನ್, ಒಫ್ಲೊಕ್ಸಾಸಿನ್ ಸೇರಿದಂತೆ ಇನ್ನಿತರ ಔಷಧಿ ಬಳಕೆ ಆಗುತ್ತದೆ. ಕೋವಿಡ್ ವೇಳೆ ಮಾತ್ರ ಅಜಿಥ್ರೋಮೈಸಿನ್, ಐವರ್ಮೆಕ್ಟಿನ್ ಅನ್ನು ಪ್ರತಿರೋಧಕ್ಕಾಗಿ ಬಳಸಲಾಗಿತ್ತು.
ಸದ್ಯ ಶೀತ, ಕೆಮ್ಮಿಗೆ ಪ್ರತಿರೋಧ ಔಷಧಿ ಬಳಸದೇ ವೈದ್ಯರನ್ನು ಸಂಪರ್ಕಿಸಿ,ಚಿಕಿತ್ಸೆ ಪಡೆಯಿರಿ. ಬಿಸಿಲಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಗುಂಪು ಸೇರುವುದು ಬಿಟ್ಟು ಬಿಡಿ. ಆದಷ್ಟು ಶುಚಿಯಾಗಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರ ಬಗ್ಗೆ ಎಚ್ಚರ ವಹಿಸುವಂತೆ ತಜ್ಞರು ತಿಳಿಸಿದ್ದಾರೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications