Indian Post: ರಿಜಿಸ್ಟರ್ ಪೋಸ್ಟ್ ಸೇವೆಗೆ ಗುಡ್ಬೈ...ಅಂಚೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ:
Indian Post Service: ಭಾರತೀಯ ಅಂಚೆ ಇಲಾಖೆಯಲ್ಲಿ ಅನೇಕ ಸೇವೆಗಳು ಲಭ್ಯವಾಗುತ್ತಿವೆ. ಇಲ್ಲಿನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಂಚೆ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಕಾರ್ಯಾಚರಣೆ ಸುಗಮಗೊಳಿಸಿ, ವಿತರಣಾ ಸಮಯವನ್ನು ವೇಗಗೊಳಿಸುವ ಗುರಿಯೊಂದಿಗೆ ನೋಂದಾಯಿತ ಅಂಚೆ (Registered Post) ಮತ್ತು ಸ್ಪೀಡ್ ಪೋಸ್ಟ್ (Speed Post) ಸೇವೆಗಳ ಸಂಸ್ಕರಣಾ ವ್ಯವಸ್ಥೆಯನ್ನು ಏಕೀಕರಿಸಿದೆ. ಅಂದರೆ ಮರ್ಜ್ ಮಾಡಿದ್ದು, ಮುಂದಿನ ತಿಂಗಳಿನಿಂದ ರಿಜಿಸ್ಟರ್ ಪೋಸ್ಟ್ ಸೇವೆ ಕೊನೆಯಾಗಲಿದೆ.
ಈ ಹೊಸ ವ್ಯವಸ್ಥೆಯು ಸೇವೆಯಲ್ಲಿನ ದಕ್ಷತೆಯನ್ನು ಹೆಚ್ಚಿಸಿ, ಸಾರಿಗೆ ವಿಳಂಬವನ್ನು ಕಡಿಮೆ ಮಾಡುತ್ತದೆ. ನೋಂದಾಯಿತ ಅಂಚೆಯು ನಿರ್ದಿಷ್ಟ ವಿಳಾಸದಾರರಿಗೆ ಮಾತ್ರ ತಲುಪಿಸುವ ಸುರಕ್ಷತೆ, ಭರವಸೆ ನೀಡುತ್ತದೆ. ಇನ್ನೂ ಸ್ಪೀಡ್ ಪೋಸ್ಟ್ ಮೂಲಕ ನಿಗದಿತ ವಿಳಾಸದಲ್ಲಿ ತ್ವರಿತವಾಗಿ ತಲುಪುವಂತಹ ಸೌಲಭ್ಯವನ್ನು ಬಲಪಡಿಸಲಾಗಿದೆ.

ನೋಂದಾಯಿತ ಅಂಚೆಯ ಬೆಲೆ ಪ್ರತಿ ಹೆಚ್ಚುವರಿ 20 ಗ್ರಾಂಗೆ 25.96 ರೂ. ಜೊತೆಗೆ 5 ರೂ.ಗಳಾಗಿತ್ತು. ಆದರೆ ಸ್ಪೀಡ್ ಪೋಸ್ಟ್ 50 ಗ್ರಾಂ ವರೆಗಿನ ಪಾರ್ಸೆಲ್ಗಳಿಗೆ 41 ರೂ.ಗಳಿಂದ ಆರಂಭವಾಗುತ್ತದೆ. ಇದು 20-25 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಹೆಚ್ಚಿನ ವೆಚ್ಚವು ಸಣ್ಣ ವ್ಯಾಪಾರಿಗಳು, ರೈತರು ಮತ್ತು ಕೈಗೆಟುಕುವ ಅಂಚೆ ಸೇವೆಗಳನ್ನು ಅವಲಂಬಿಸಿದೆ. ಹೀಗಾಗಿ ರಿಜಿಸ್ಟರ್ ಪೋಸ್ಟ್ ಸೇವೆನಯನ್ನು ಏಕೀಕೃತಗೊಳಿಸಲಾಗುತ್ತಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.
ಸ್ಪೀಡ್ ಪೋಸ್ಟ್ ಸೇವೆನಯನ್ನು ನೀವು ಪ್ರತಿಯೊಂದು ಹಂತದಲ್ಲಿ ಟ್ರ್ಯಾಕಿಂಗ್ ಮಾಡಲು ಅವಕಾವಿದೆ. ನೋಂದಾಯಿತ ಪೋಸ್ಟ್ ವಿಳಾಸದಾರ-ನಿರ್ದಿಷ್ಟವಾಗಿರುತ್ತದೆ. ಆದರೆ ಈ ಸ್ಪೀಡ್ ಪೋಸ್ಟ್ ಸೇವೆಯಲ್ಲಿ ವಿಳಾಸದಲ್ಲಿ ನಿರ್ಧಿಷ್ಟ ವ್ಯಕ್ತಿಗೆ ಸೇವೆ/ವಸ್ತು ತಲುಪಿಸಲಾಗುತ್ತದೆ. OTP ಆಧಾರಿತ ಸುರಕ್ಷಿತ ಸೇವೆಯನ್ನು ಸಹ ನೀಡಲಾಗುತ್ತಿದೆ.
ಏನೆಲ್ಲ ಅಪ್ಡೇಟ್ಸ್ ಆಗಿದೆ? ಗ್ರಾಹಕರಿಗೆ ಸಿಗುವ ಪ್ರಯೋಜನಗಳು
ಈ ಮಹತ್ವದ ಬದಲಾವಣೆಯಿಂದ ಗ್ರಾಹಕರು ಇನ್ನೊಂದು ತಿಂಗಳಲ್ಲಿ ಏಕೀಕೃತ ಸೇವೆಯ ಪ್ರಯೋಜನಗಳನ್ನು ಪಡೆಯಬಹುದು. 'ನೋಂದಣಿಯೊಂದಿಗೆ ಸ್ಪೀಡ್ ಪೋಸ್ಟ್' ಎಂದು ಬುಕ್ ಮಾಡಿದಾಗ, ಪತ್ರ ಅಥವಾ ಪಾರ್ಸೆಲ್ ನಿರ್ದಿಷ್ಟ ವ್ಯಕ್ತಿಗೆ ಮಾತ್ರ ತಲುಪುತ್ತದೆ. ಇದರೊಂದಿಗೆ, ಎಂಡ್-ಟು-ಎಂಡ್ ಆನ್ಲೈನ್ ಟ್ರ್ಯಾಕಿಂಗ್, OTP ಆಧಾರಿತ ಸುರಕ್ಷಿತ ವಿತರಣೆ, ಕ್ಯಾಶ್ ಆನ್ ಡೆಲಿವರಿ (COD) ಮತ್ತು ಕಾರ್ಪೋರೇಟ್ ಗ್ರಾಹಕರು ವಿಶೇಷ ರಿಯಾಯಿತಿಗಳಂತಹ ಸ್ಪೀಡ್ ಪೋಸ್ಟ್ನ ಎಲ್ಲಾ ಪ್ರೀಮಿಯಂ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಬುಧವಾರ ಭಾರತೀಯ ಅಂಚೆ ಇಲಾಖೆ ಮಾಹಿತಿ ನೀಡಿದೆ.
ಅಂಚೆ ಇಲಾಖೆ ವ್ಯಾಪ್ತಿಯಲ್ಲಿ ಅಕೌಂಟ್ ತೆರೆಯುವವರು, ಇಲ್ಲಿನ ಎಲ್ಲ ತರಹದ ಸೇವೆ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳೆಯರು, ನೌಕರರು, ಯುವಕರು, ಹಿರಿಯ ನಾಗರಿಕರು ಹೀಗೆ ಎಲ್ಲ ವಯೋಮಾನದ ಗ್ರಾಹಕರು ಅಂಚೆ ಇಲಾಖೆ ಸೇವೆ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಸಹ ಹಲವು ಯೋಜನೆಗಳನ್ನು ಅಂಚೆ ಇಲಾಖೆಯಡಿ ಜಾರಿಗೆ ತಂದಿದೆ. ಸದ್ಯ ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ಅಂಚೆ ಸೇವೆಗಳನ್ನು ಆಧುನೀಕರಿಸುವ ಉದ್ದೇಶದ ಭಾಗವಾಗಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡು ಸುಧಾರಣೆ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications