ವಿದೇಶಾಂಗ ಇಲಾಖೆ ಕಾರ್ಯದರ್ಶಿ ಸಭೆಯಲ್ಲಿ ಚರ್ಚೆಯಾಗದ ಮಲ್ಯ ವಿಚಾರ
ಫೆಬ್ರವರಿಯಲ್ಲಿ, ಭಾರತ ಸರ್ಕಾರ, ವಿಜಯ್ ಮಲ್ಯ ಅವರ ಶೀಘ್ರ ಹಸ್ತಾಂತರಕ್ಕೆ ಕೋರಿ ಬ್ರಿಟನ್ ಸರ್ಕಾರಕ್ಕೆ ಮೊದಲ ಬಾರಿಗೆ ಅಧಿಕೃತ ಮನವಿ ಸಲ್ಲಿಸಿತ್ತು.
ನವದೆಹಲಿ, ಮೇ 4: ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರುಪಾಯಿ ಸಾಲವನ್ನು ಹಿಂದಿರುಗಿಸದೇ ಲಂಡನ್ ನಲ್ಲಿ ನಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರ ಶೀಘ್ರ ಹಸ್ತಾಂತರಕ್ಕೆ ಭಾರತ ಪುನಃ ಮನವಿ ಮಾಡುತ್ತದೆಂಬ ನಿರೀಕ್ಷೆ ಹುಸಿಯಾಗಿದೆ.
ರಾಜಧಾನಿಯಲ್ಲಿ ಶುಕ್ರವಾರ ನಡೆದ ಉಭಯ ದೇಶಗಳ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯಲ್ಲಿ ಭಾರತ ತನ್ನ ಆಗ್ರಹವನ್ನು ಬ್ರಿಟನ್ ಅಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆದರೆ, ಆ ವಿಚಾರವು ಸಭೆಯಲ್ಲಿ ಪ್ರಸ್ತಾಪವಾಗಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.[ಮಲ್ಯ ಕೇಸ್: ಲಂಡನ್ ಗೆ ಕಾಲಿಟ್ಟ ಭಾರತೀಯ ತನಿಖಾಧಿಕಾರಿಗಳು]

ಸಭೆಯಲ್ಲಿ, ಭಾರತದ ವಿದೇಶಾಂಗ ಕಾರ್ಯದರ್ಶಿ ರಾಜೀವ್ ಮಹರಿಷಿ ಹಾಗೂ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಪಾಟ್ಸಿ ವಿಲ್ಕಿನ್ಸ ನ್ ಸೇರಿದಂತೆ ಎರಡೂ ದೇಶಗಳ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.[ಜಾಮೀನು ಸಿಕ್ಕಿರಬಹುದು, ಆದ್ರೆ ಮಲ್ಯ ಪರಿಸ್ಥಿತಿ ದೇವ್ರಿಗೇ ಪ್ರೀತಿ!]












Click it and Unblock the Notifications