ಡೇರಾ ಸಚ್ಚಾ ಸೌಧದ ಹಣಕಾಸು ನೀತಿ ಬಗ್ಗೆ ಗೊತ್ತೆ?
ಚಂಡೀಗಢ, ಆಗಸ್ಟ್. 28 : ಬಾಬಾ ರಾಮ್ ರಹೀಮ್ ಸಿಂಗ್ ಕುರಿತ ಒಂದೊಂದೇ ವಿಚಾರಗಳು ಈಗ ಬೆಳಕಿಗೆ ಬರುತ್ತಿವೆ. ಬಾಬಾ ತನ್ನ ಮುಖ್ಯ ಆಶ್ರಮವಿರುವ ಡೇರಾ ಸಚ್ಚಾ ಸೌಧದಲ್ಲಿ ಪತ್ಯೇಕ ಹಣಕಾಸು ನೀತಿಯನ್ನು ಜಾರಿಗೆ ತಂದಿರುವುದು ಬಯಲಾಗಿದೆ.
Recommended Video
ಬಯಲಿಗೆ ಬಂತು ರಾಮ್ ರಹೀಂ ಬಾಬಾನ ಮತ್ತೊಂದು ರಾಸಲೀಲೆ?
ಸುಮಾರು ಒಂದು ಸಾವಿರ ಎಕರೆ ಜಾಗದಲ್ಲಿ ರಾಮ್ ರಹೀಮ್ ಸಿಂಗ್ ಡೇರಾ ಸಚ್ಚಾ ಸೌಧ ಹರಡಿಕೊಂಡಿದೆ. ಇದರೊಳಗೆ ಶಾಲೆ, ಆಸ್ಪತ್ರೆ, ಕ್ರೀಡಾಂಗಣ, ಸಿನಿಮಾ ಹಾಲ್ ಮುಂತಾದ ಸೌಲಭ್ಯಗಳಿವೆ.
ಡೇರಾ ಸಚ್ಚಾ ಸೌಧ ಮತ್ತು ಸುತ್ತಮುತ್ತಲಿನ ಅಂಗಡಿಗಳಲ್ಲಿ ಪ್ರತ್ಯೇಕ ಹಣಕಾಸು ನೀತಿ ಇದೆ. ಭಾರತೀಯ ರೂಪಾಯಿಯಲ್ಲಿ ಇಲ್ಲಿ ಚಿಲ್ಲರೆ ಪಡೆಯಲು ಸಾಧ್ಯವಿಲ್ಲ. ಇಲ್ಲಿರುವ ಅಂಗಡಿಗಳಿಗೆ ಸಚ್ (ಸತ್ಯ) ಎಂಬ ಹೆಸರನ್ನು ಇಡಲಾಗಿದೆ.
ಹೈದರಾಬಾದ್ನಲ್ಲಿ 55 ಎಕರೆ ಭೂಮಿ ಹೊಂದಿದ್ದಾರೆ ರಾಮ್ ರಹೀಮ್
ಇಲ್ಲಿ ವಸ್ತುಗಳನ್ನು ಕೊಂಡರೆ ಚಿಲ್ಲರೆ ನೀಡುವುದಿಲ್ಲ ಬದಲಾಗಿ 10ಮತ್ತು 5 ರೂ.ಗಳ ಪ್ಲಾಸ್ಟಿಕ್ ಟೋಕನ್ ನೀಡಲಾಗುತ್ತದೆ. ಭಾರತೀಯ ರೂಪಾಯಿಗಳಲ್ಲಿ ಚಿಲ್ಲರೆ ನೀಡುವುದಿಲ್ಲ.
ಈ ಟೋಕನ್ಗಳು 'ಧನ್ ಧನ್ ಸದ್ಗುರು', 'ಡೇರಾ ಸಚ್ಚಾ ಸೌಧ ಸಿರ್ಸಾ' ಎಂಬ ಘೋಷಣೆಯನ್ನು ಒಳಗೊಂಡಿರುತ್ತದೆ. ಈ ಟೋಕನ್ಗಳನ್ನು ಮುಂದಿನ ಬಾರಿ ಸಚ್ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬಳಕೆ ಮಾಡಬಹುದಾಗಿದೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್ ಈಗ ಖೈದಿ ನಂಬರ್ 1997
ಉದಾಹರಣೆಗೆ ವ್ಯಕ್ತಿಯೊಬ್ಬ ಸಚ್ ಅಂಗಡಿಯಲ್ಲಿ 70 ರೂ. ವ್ಯಾಪಾರ ಮಾಡಿ 100 ರೂ. ಕೊಟ್ಟರೆ ಮೂವತ್ತು ರೂ.ಗಳಿಗೆ ಚಿಲ್ಲರೆ ಕೊಡುವುದಿಲ್ಲ. ಅವರಿಗೆ ಐದು ಮತ್ತು ಹತ್ತು ರೂ.ಗಳ ಟೋಕನ್ ನೀಡಲಾಗುತ್ತದೆ.