'ಮಹಾಭಾರತದಲ್ಲೂ ಲವ್ ಜಿಹಾದ್ ಇತ್ತು' ಹೇಳಿಕೆಗೆ ಹಿಮಂತ ಬಿಸ್ವಾ ವಾಗ್ದಾಳಿ!
ಕಾಂಗ್ರೆಸ್ನ ರಾಜ್ಯ ಘಟಕದ ಮುಖ್ಯಸ್ಥ ಭೂಪೇನ್ ಬೋರಾ ಅವರ "ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ" ಎಂಬ ಹೇಳಿಕೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಭೂಪೇನ್ ಬೋರಾ, 'ಶ್ರೀಕೃಷ್ಣನು ರುಕ್ಮಿಣಿಯನ್ನು ಮದುವೆಯಾಗಲು ಬಯಸಿದಾಗ, ಅರ್ಜುನನು ಮಹಿಳೆಯ ವೇಷದಲ್ಲಿ ಬಂದನು. ಮಹಾಭಾರತದಲ್ಲೂ ಲವ್ ಜಿಹಾದ್ ಇತ್ತು' ಎಂದಿದ್ದರು. ಬೋರಾ ಅವರ ಹೇಳಿಕೆಯನ್ನು ಖಂಡಿಸಿದ ಹಿಮಂತ, ಬೋರಾ ಅವರ ಹೇಳಿಕೆ ಸನಾತನ ಮತ್ತು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

"ಶ್ರೀಕೃಷ್ಣ ಮತ್ತು ರುಕ್ಮಿಣಿ ವಿಷಯವನ್ನು ಎಳೆದು ತರುವುದು ಖಂಡನೀಯ. ಇದು ಸನಾತನ ಧರ್ಮಕ್ಕೆ ವಿರುದ್ಧವಾಗಿದೆ. ಹಜರತ್ ಮುಹಮ್ಮದ್ ಅಥವಾ ಜೀಸಸ್ ಕ್ರೈಸ್ಟ್ ಅನ್ನು ಯಾವುದೇ ವಿವಾದಕ್ಕೆ ಹೇಗೆ ಎಳೆಯಬಾರದೋ, ಅದೇ ರೀತಿ ಶ್ರೀಕೃಷ್ಣನನ್ನು ಯಾವುದೇ ವಿವಾದಕ್ಕೆ ಎಳೆಯುವುದನ್ನು ತಪ್ಪಿಸಬೇಕು ಎಂದು ನಾನು ಕಾಂಗ್ರೆಸ್ಗೆ ವಿನಂತಿಸುತ್ತೇನೆ. ದೇವರನ್ನು ಕ್ರಿಮಿನಲ್ ಚಟುವಟಿಕೆಗೆ ಹೋಲಿಸುವುದು ಸ್ವೀಕಾರಾರ್ಹವಲ್ಲ'' ಎಂದು ಹಿಮಂತ ಹೇಳಿದ್ದಾರೆ.
ಯಾರಾದರೂ ಕೇಸು ದಾಖಲಿಸಿದರೆ ಈ ಮಾತು ಹೇಳಿದವರನ್ನು ಬಂಧಿಸಬೇಕಾಗುತ್ತದೆ. ಸನಾತನ ಧರ್ಮದ ಸಾವಿರಾರು ಮಂದಿ ದೂರು ನೀಡಿದರೆ ಆತನನ್ನು ಉಳಿಸಲು ಸಾಧ್ಯವಿಲ್ಲ ಎಂದು ಹಿಮಾಂತ ಆಕ್ರೋಶಗೊಂಡರು. ಬೋರಾನ ಮಹಾಭಾರತದ ಉಲ್ಲೇಖಕ್ಕೆ ಮರುಪ್ರಶ್ನೆ ಮಾಡಿದ ಹಿಮಂತ, 'ಭಗವಾನ್ ಕೃಷ್ಣನು ರುಕ್ಮಿಣಿಯನ್ನು ತನ್ನ ಧರ್ಮವನ್ನು ಬದಲಾಯಿಸಲು ಎಂದಿಗೂ ಒತ್ತಾಯಿಸಲಿಲ್ಲ' ಎಂದು ಹೇಳಿದರು. ಹುಡುಗಿಯನ್ನು ಸುಳ್ಳು ಗುರುತಿನ ನೆಪದಲ್ಲಿ ಮದುವೆಯಾಗಿ ನಂತರ ಬಲವಂತವಾಗಿ ಧರ್ಮ ಬದಲಾಯಿಸಿದರೆ ಅದು ಲವ್ ಜಿಹಾದ್ ಎಂದು ಹಿಮಂತ ಹೇಳಿದ್ದಾರೆ.
"ಒಬ್ಬ ಹಿಂದೂ ಮುಸ್ಲಿಮನನ್ನು ಮದುವೆಯಾದರೆ ಸಮಾಜ ಕ್ರಮಬದ್ಧವಾಗಿರುತ್ತದೆ. ನಾನು ಯಾವಾಗಲೂ ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುತ್ತೇನೆ. ಆದರೆ ನಾಳೆ ನಮಾಜ್ ಓದಲು ಕೇಳಿದರೆ, ನನಗೆ ಹೇಗೆ ಅನಿಸುತ್ತದೆ? ಎಂದು ಹಿಮಂತ ಕೇಳಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಂತರ್-ಧರ್ಮೀಯ ವಿವಾಹವಾಗಿದ್ದರೂ, ಧರ್ಮವನ್ನು ಬದಲಾಯಿಸಲು ಬಲವಂತಪಡಿಸಬಾರದು ಮತ್ತು ಅದು ವಿಶೇಷ ವಿವಾಹ ಕಾಯ್ದೆಯ ಪ್ರಕಾರವಾಗಿರಬೇಕು ಎಂದು ಹೇಳಿದರು.
"ನಾವು ಈ ಕಾನೂನುಗಳನ್ನು ಅನುಸರಿಸದಿದ್ದರೆ ಅದು ಲವ್ ಜಿಹಾದ್ಗೆ ತಿರುಗುತ್ತದೆ" ಎಂದು ಹಿಮಂತ ಹೇಳಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications