ದೇಶದ ಹಲವು ರಾಜ್ಯಗಳಲ್ಲಿ ಅಧಿಕ ಮಳೆ ಎಚ್ಚರಿಕೆ: ದೆಹಲಿಯ ಸ್ಥಿತಿ ಏನು?
ನವದೆಹಲಿ ಆಗಸ್ಟ್ 31: ದೇಶದ ಹಲವು ರಾಜ್ಯಗಳಲ್ಲಿ ತೀವ್ರ ಮಳೆ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಅಪ್ಡೇಟ್ನಲ್ಲಿ ಇಂದು ಕೂಡ ಕೇರಳ, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ, ಯುಪಿ, ಗುಜರಾತ್ ನಲ್ಲಿ ಮಳೆಯಾಗುವ ಸೂಚನೆ ನಿಡಿದೆ. ಜೊತೆಗೆ ನಾಗಾಲ್ಯಾಂಡ್, ಮಣಿಪುರ, ತ್ರಿಪುರಾ ಮತ್ತು ಮಿಜೋರಾಂ, ಛತ್ತೀಸ್ಗಢ, ವಿದರ್ಭ, ಲಕ್ಷದ್ವೀಪ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲದಲ್ಲಿ ಅಧಿಕ ಮಳೆ ಆರಂಭವಾಗಬಹುದು ಎಂದಿದೆ.
ಕರ್ನಾಟಕದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಕಳೆದ ಹಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಐದು ದಿನಗಳಲ್ಲಿ ತಮಿಳುನಾಡು, ದಕ್ಷಿಣ ಒಳ ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾಮಳೆಯಿಂದ ತತ್ತರಿಸಿ ಹೋಗಿದೆ. ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಜನಜೀವನಕ್ಕೆ ತೊಂದರೆಯನ್ನುಂಟು ಮಾಡಿದೆ. ಒಡಿಶಾ, ಮಧ್ಯಪ್ರದೇಶ, ಗುಜರಾತ್ನಲ್ಲಿಯೂ ಲಘು ಮಳೆಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ ದೆಹಲಿಯ ಬಗ್ಗೆ ಮಾತನಾಡಿದರೆ, ಇಂದು ಇಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ ಸುಮಾರು 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ಆದರೆ ಹವಾಮಾನ ಹರಿಯಾಣ ಮತ್ತು ಪಂಜಾಬ್ ಒಣ ಹವೆ ಇರಲಿದೆ. ಹವಾಮಾನ ಇಲಾಖೆಯ ಪ್ರಕಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ನೈರುತ್ಯ ಮುಂಗಾರು ಹೊರಡುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮೊದಲು ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ
24
ಗಂಟೆಗಳಲ್ಲಿ
ಅಧಿಕ
ಮಳೆ
ಖಾಸಗಿ
ಹವಾಮಾನ
ಮಾಹಿತಿ
ಸಂಸ್ಥೆ
ಸ್ಕೈಮೆಟ್
ಪ್ರಕಾರ
ಮುಂದಿನ
24
ಗಂಟೆಗಳಲ್ಲಿ
ಕರ್ನಾಟಕ,
ಉತ್ತರ
ಪ್ರದೇಶ,
ಮಧ್ಯಪ್ರದೇಶ,
ಛತ್ತೀಸ್ಗಢ,
ಕೇರಳ,
ತಮಿಳುನಾಡು,
ರಾಯಲಸೀಮಾ,
ತೆಲಂಗಾಣ,
ಛತ್ತೀಸ್ಗಢ,
ಜಮ್ಮು
ಮತ್ತು
ಕಾಶ್ಮೀರ,
ಹಿಮಾಚಲ
ಪ್ರದೇಶ,
ಉತ್ತರಾಖಂಡ,
ಅಸ್ಸಾಂ,
ಸಿಕ್ಕಿಂ,
ಅರುಣಾಚಲ
ಪ್ರದೇಶದಲ್ಲಿ
ಅಧಿಕ
ಮಳೆಯಾಗಲಿದೆ.
ನಾಗಾಲ್ಯಾಂಡ್ನಲ್ಲಿ
ಹಗುರದಿಂದ
ಸಾಧಾರಣ
ಮಳೆಯಾಗಬಹುದು
ಮತ್ತು
ದೆಹಲಿಯಲ್ಲಿ
ಮೋಡ
ಕವಿತ
ವಾತಾವರಣ
ಇರಲಿದೆ.