ಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆ
ನವದೆಹಲಿ, ಆಗಸ್ಟ್ 28: ಎಲ್ಲ ಕ್ಷಯ (ಟಿಬಿ) ರೋಗಿಗಳೂ ಕೊರೊನಾ ವೈರಸ್ ತಪಾಸಣೆಗೆ ಒಳಪಡಬೇಕು ಮತ್ತು ಎಲ್ಲ ಕೊರೊನಾ ವೈರಸ್ ಪಾಸಿಟಿವ್ ರೋಗಿಗಳನ್ನೂ ಕಡ್ಡಾಯವಾಗಿ ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
Recommended Video
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗದರ್ಶಿಯೊಂದನ್ನು ಗುರುವಾರ ಬಿಡುಗಡೆ ಮಾಡಿದೆ. ಜ್ವರ (ಐಎಲ್ಐ) ಮತ್ತು ತೀವ್ರ ಗಂಭೀರ ಉಸಿರಾಟದ ಸೋಂಕುಗಳ (ಎಸ್ಎಆರ್ಐ) ಪ್ರಕರಣದಂತಹ ಇನ್ಫ್ಲೂಯೆಂಜಾಗಳಲ್ಲಿ ಟಿಬಿ ಹಾಗೂ ಕೋವಿಡ್ ರೋಗಿಗಳಿಗೆ ಎರಡೂ ಬಗೆಯ ಪರೀಕ್ಷೆಗಳನ್ನು ನಡೆಸಬೇಕು ಎಂದು ತಿಳಿಸಿದೆ.
ತೀವ್ರ ಪ್ರಮಾಣದ ಕೋವಿಡ್ 19 ಕಾಯಿಲೆ ಬಂದವರಲ್ಲಿ ಕ್ಷಯ ರೋಗವು ಕಾಣಿಸಿಕೊಳ್ಳುವ ಹೆಚ್ಚಿದೆ. ಜತೆಗೆ ಅಪೌಷ್ಟಿಕತೆ, ಮಧುಮೇಹ, ಧೂಮಪಾನ, ಎಚ್ಐವಿ ಮುಂತಾದ ಸಮಸ್ಯೆಯುಳ್ಳ ಟಿಬಿ ರೋಗಿಗಳು ಕೂಡ ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ. ಮುಂದೆ ಓದಿ.

ಟಿಬಿ-ಕೋವಿಡ್ ಸಾಮೀಪ್ಯತೆ
ಕ್ಷಯ ಮತ್ತು ಕೋವಿಡ್ ಎರಡೂ ಪ್ರಾಥಮಿಕವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುತ್ತವೆ. ಕೋವಿಡ್-19 ರೋಗಿಗಳಲ್ಲಿ ನಡೆಸಿದ ವಿಭಿನ್ನ ಅಧ್ಯಯನಗಳಲ್ಲಿ ಶೇ 0.37-4.47ರಷ್ಟು ಕ್ಷಯ ಇರುವುದು ಪತ್ತೆಯಾಗಿದೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಜೂನ್ ಅವಧಿಯಲ್ಲಿ ಟಿಬಿ ಘೋಷಣೆಗಳಲ್ಲಿ ಶೇ 26ರಷ್ಟು ಒಟ್ಟಾರೆ ಇಳಿಕೆಯಾಗಿದೆ ಎಂದೂ ಅದು ಹೇಳಿದೆ.

ಯಾರೆಲ್ಲ ಪರೀಕ್ಷೆಗೆ ಒಳಪಡಬೇಕು?
ಹೊಸದಾಗಿ ಕ್ಷಯ ರೋಗ ಪತ್ತೆಯಾದ ರೋಗಿಗಳು ಮತ್ತು ಪ್ರಸ್ತುತ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಡಬೇಕು. ಫಲಿತಾಂಶದ ಆಧಾರದಲ್ಲಿ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗೆ ಅನುಗುಣವಾಗಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಬೇಕು. ಆದರೆ ಈ ಸಮಯದಲ್ಲಿ ಟಿಬಿ ಚಿಕಿತ್ಸೆಯನ್ನು ನಿಲ್ಲಿಸಬಾರದು ಎಂದು ಸೂಚನೆ ನೀಡಲಾಗಿದೆ.

ಕ್ಷಯದ ಲಕ್ಷಣವಿದ್ದರೆ...
ಜತೆಗೆ ಎಲ್ಲ ಕೋವಿಡ್-19 ಪ್ರಕರಣಗಳನ್ನೂ ಕ್ಷಯ ಲಕ್ಷಣಗಳಿದ್ದರೆ ತಿಳಿದುಕೊಳ್ಳಲು ಪರೀಕ್ಷೆಗೆ ಒಳಪಡಿಸಬೇಕು. ನಾಲ್ಕು ಪ್ರಮುಖ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಸಮಯದ ಕೆಮ್ಮು, ಎರಡು ವಾರಕ್ಕಿಂತ ಅಧಿಕ ಸಮಯದ ಜ್ವರ, ಗಣನೀಯ ಪ್ರಮಾಣದ ತೂಕ ಇಳಿಕೆ ಮತ್ತು ರಾತ್ರಿ ಬೆವರುವಿಕೆ ಕಂಡುಬಂದರೆ, ಟಿಬಿ ಪ್ರಕರಣದ ಸಂಪರ್ಕದ ಇತಿಹಾಸ, ಟಿಬಿಯ ಇತಿಹಾಸ ಮತ್ತು ಈ ಎಲ್ಲ ಲಕ್ಷಣಗಳಿದ್ದವರನ್ನು ಎದೆ ಭಾಗದ ಎಕ್ಸ್ರೇ ಹಾಗೂ ಟಿಬಿ ಪತ್ತೆ ಹಚ್ಚುವ ನ್ಯೂಕ್ಲಿಯರ್ ಆಸಿಡ್ ಆಂಪ್ಲಿಫಿಕೇಷನ್ ಟೆಸ್ಟ್ (ಎನ್ಎಎಟಿ) ಒಳಪಡಿಸಬೇಕು.

ಕೋವಿಡ್-ಟಿಬಿ ಪ್ರತ್ಯೇಕ ವಿಭಾಗ
ಕೋವಿಡ್ ಐಸೋಲೇಷನ್ ಸೌಲಭ್ಯಗಳೊಂದಿಗೆ ತೀವ್ರ ಅನಾರೋಗ್ಯದ ನಿರ್ವಹಣೆಗೆ ಟಿಬಿ ಸೇವೆಗಳ ಸೌಲಭ್ಯಗಳನ್ನು ಕೂಡ ಜೋಡಿಸಿ ಟಿಬಿ-ಕೋವಿಡ್ ರೋಗಿಗಳೆಂದು ಪ್ರತ್ಯೇಕವಾಗಿ ಗುರುತಿಸಬೇಕಾಗುತ್ತದೆ. ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣಗಳಲ್ಲಿ ಟಿಬಿ ಪರೀಕ್ಷೆ ನಡೆಸಲೇಬೇಕು ಎಂದು ಸಲಹೆ ನೀಡಿದೆ.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications