1987ರ ಮುಸ್ಲೀಮರ ಮಾರಣಹೋಮ: 16 ಮಾಜಿ ಪೊಲೀಸರಿಗೆ ಜೀವಾವಧಿ ಶಿಕ್ಷೆ
ನವದೆಹಲಿ, ಅಕ್ಟೋಬರ್ 31: ಬರೋಬ್ಬರಿ 31 ವರ್ಷಗಳ ಹಿಂದೆ ಕೆಲವು ಪೊಲೀಸರು ನಡೆಸಿದ್ದ ಮಾರಣಹೋಮಕ್ಕೆ ಇದೀಗ ನ್ಯಾಯಾಲಯವು ಶಿಕ್ಷೆ ನೀಡಿದೆ. ಜೀವ ಕಳೆದುಕೊಂಡವರ ಕುಟುಂಬಕ್ಕೆ ಮೂರು ದಶಕಗಳ ನಂತರ ನ್ಯಾಯ ದೊರೆತಿದೆ.
1987 ರ ಮಾರ್ಚ್ 22 ರಂದು ಸಶಸ್ತ್ರ ಕಾನ್ಸ್ಟೇಬಲ್ಗಳು ಉತ್ತರ ಪ್ರದೇಶ ರಾಜ್ಯದ ಮೀರಟ್ ಬಳಿಯ ಹಶಿಮ್ಪುರ ಹಳ್ಳಿಯಿಂದ 50 ಮುಸ್ಲಿಮರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಆ ನಂತರ ಅದರಲ್ಲಿ 42 ಜನರ ಶವ ಸಮೀಪದ ಕಾಲೆವೆಯಲ್ಲಿ ದೊರೆತಿದ್ದವು.
ಈ ಪ್ರಕರಣವನ್ನು ಹಾಶಿಂಪುರ ಹತ್ಯಾಕಾಂಡ ಎಂದೇ ಕರೆಯಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನ ಪೊಲೀಸರಿಗೆ ಈಗ ಜೀವಾವಧಿ ಶಿಕ್ಷೆ ಆಗಿದೆ. ಎಲ್ಲರೂ ಪೊಲೀಸ್ ವೃತ್ತಿಯಿಂದ ನಿವೃತ್ತರಾಗಿದ್ದು, ಒಬ್ಬ ವ್ಯಕ್ತಿ ತೀರ್ಪು ಬಂದ ಈ ದಿನವೇ ಸಾವನ್ನಪ್ಪಿದ್ದಾನೆ.

ಭಾರಿ ಗಲಭೆ ಸೃಷ್ಠಿಸಿದ್ದ ಹತ್ಯಾಕಾಂಡ
ಭಾರಿ ಆಕ್ರೋಶ ಸೃಷ್ಠಿಸಿದ್ದ ಈ ಹತ್ಯಾಕಾಂಡ ದೇಶದಾದ್ಯಂತ ಕೋಮು ಗಲಭೆಗೆ ಮೂಲವಾಗಿತ್ತು. ಈ ಘಟನೆ ನಡೆದ ನಂತರ ಗಲಭೆಗಳಲ್ಲಿ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಪೊಲೀಸರನ್ನು ಕೊಂದಿದ್ದರು.

19 ಜನರ ಮೇಲೆ ಚಾರ್ಜ್ಶೀಟ್
ಪ್ರಕರಣವನ್ನು 1988 ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಸಿಬಿಐಯು ಪೊಲೀಸ್ ಕಾನ್ಸ್ಟೇಬಲ್ಗಳು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 60 ಜನರ ತನಿಖೆ ನಡೆಸಿ ವರದಿ ಸಲ್ಲಿಸಿತು. ಕೊನೆಗೆ 1996 ರಲ್ಲಿ 19 ಜನರ ಮೇಲೆ ಚಾರ್ಜ್ಶೀಟ್ ಸಲ್ಲಿಸಲಾಯಿತು. 161 ಜನರನ್ನು ಸಾಕ್ಷಿಯಾಗಿಸಲಾಗಿತ್ತು.

2015 ರಲ್ಲಿ ಆರೋಪಿಗಳ ವಜಾ ಆಗಿತ್ತು
2015ರಲ್ಲಿ ದೆಹಲಿ ನ್ಯಾಯಾಲಯವು 16 ಜನಆರೋಪಿಗಳನ್ನುಅವರ ಗುರುತು ಪತ್ತೆ ಆಗಲಿಲ್ಲವೆಂಬ ಕಾರಣಕ್ಕೆ ಅನುಮಾನದ ಆಧಾರದಲ್ಲಿ ಪ್ರಕರಣದಿಂದ ವಜಾ ಮಾಡಿ ತೀರ್ಪು ನೀಡಿತು. ಆದರೆ ಆ ತೀರ್ಪು ಪ್ರಶ್ನಿಸಿ ಸಾಕ್ಷಿಗಳು ಹಾಗೂ ಸತ್ತವರ ಕುಟುಂದವರು ಉಚ್ಛ ನ್ಯಾಯಾಲಯದ ಮೊರೆ ಹೋದರು.

16 ಅಪರಾಧಿಗಳಿಗೆ ಜೀವಾವಧಿ
ಮಾನವ ಹಕ್ಕು ಸಮಿತಿ ಸೇರಿ ಇನ್ನೂ ಹಲವು ಸಂಸ್ಥೆಗಳು ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದವು. ಹಾಗೇ ಮರು ತನಿಖೆ ಮಾಡಿದ ನಂತರ 16 ಆರೋಪಿಗಳು ಅಪರಾಧಿಗಳೆಂದು 2018 ರ ತೀರ್ಪಿನಲ್ಲಿ ಹೇಳಲಾಯಿತು. ಇದೀಗ ಇಂದು (ಅಕ್ಟೋಬರ್ 31) ರಂದು 16 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications