ಮಾಂಸ ನಿಷೇಧದ ಬಗ್ಗೆ ಹರ್ಯಾಣ ಸರ್ಕಾರದಿಂದ ಸ್ಪಷ್ಟನೆ
ಚಂಡೀಗಢ, ಸೆ. 13: ಜೈನರ ಉಪವಾಸ ಹಬ್ಬ 'ಪರ್ಯೂಷನ್ ಪರ್ವ' ಅಂಗವಾಗಿ ಮಾಂಸ ನಿಷೇಧಿಸಿರುವ ಬಿಜೆಪಿ ಆಡಳಿತದ ರಾಜ್ಯಗಳ ಪಟ್ಟಿಗೆ ಐದನೇ ರಾಜ್ಯವಾಗಿ ಹರ್ಯಾಣ ಸೇರ್ಪಡೆಗೊಂಡಿದೆ. ಅದರೆ, ಈ ಬಗ್ಗೆ ಗೊಂದಲ ಉಂಟಾಗಿದ್ದರಿಂದ ಹರ್ಯಾಣ ಸರ್ಕಾರ ಸ್ಪಷ್ಟನೆ ನೀಡಿದೆ. ಈಗಾಗಲೇ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಛತ್ತೀಸ್ಗಢಗಳಲ್ಲಿ ವಿವಾದಾತ್ಮಕ ಮಾಂಸ ನಿಷೇಧ ಜಾರಿಯಲ್ಲಿದೆ.
ಜೈನರ
ಉಪವಾಸ
ಹಬ್ಬ
'ಪರ್ಯೂಷನ್
ಪರ್ವ'
ಪ್ರಯುಕ್ತ
ಸೆಪ್ಟಂಬರ್
11
ರಿಂದ
19ರವರೆಗೆ
ಎಲ್ಲ
ಪ್ರಾಣಿ
ವಧಾಗೃಹಗಳು
ಮುಚ್ಚಿರಬೇಕು.
ಈ
ಅವಧಿಯಲ್ಲಿ
ಪ್ರಾಣಿಗಳನ್ನು
ಕೊಲ್ಲಬಾರದು
ಎಂದು
ನಗರ
ಸ್ಥಳೀಯ
ಸಂಸ್ಥೆಗಳ
ಇಲಾಖೆ
ಸೆಪ್ಟಂಬರ್
10ರಂದು
ಹೊರಡಿಸಿರುವ
ಆದೇಶದಲ್ಲಿ
ಹೇಳಲಾಗಿದೆ.
ಆದೇಶದ
ಉಲ್ಲಂಘನೆಯಾದರೆ
ಕಾನೂನು
ಕ್ರಮ
ತೆಗೆದುಕೊಳ್ಳಬೇಕಾಗುತ್ತದೆ
ಎಂದು
ಆದೇಶ
ಎಚ್ಚರಿಕೆ
ನೀಡಲಾಗಿದೆ.
ಅದರೆ, ಮಾಂಸ ಮಾರಾಟಕ್ಕೆ ನಿಷೇಧ ಹೇರಿಲ್ಲ. ಈಗ ಹಾಕಿರುವ ನಿರ್ಬಂಧದ ಆದೇಶ ಕೂಡಾ ತಾತ್ಕಾಲಿಕವಾಗಿದ್ದು, ವಧಾಗೃಹಗಳ ಮಾಲೀಕರು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ.
ಹರ್ಯಾಣದಲ್ಲಿ ನಿಷೇಧ ಆದೇಶವನ್ನು ಹೊರಡಿಸಿರುವುದು ಇದೇ ಮೊದಲ ಬಾರಿಯಾಗಿದೆ. ನವರಾತ್ರಿಯ ಅವಧಿಯಲ್ಲಿ ಇಂಥ ಆದೇಶವನ್ನು ಯಾಕೆ ಹೊರಡಿಸುವುದಿಲ್ಲ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ ಎಂದು ಮಾಂಸ ಮಾರುಕಟ್ಟೆ ಸಂಘದ ವಕ್ತಾರ ಸಲೀಂ ಪ್ರತಿಕ್ರಿಯಿಸಿದ್ದಾರೆ.