Gyanvapi Masjid Survey: ಜುಲೈ 26ರವರೆಗೆ ಎಎಸ್ಐ ಜ್ಞಾನವಾಪಿ ಸಮೀಕ್ಷೆಗೆ ಸುಪ್ರೀಂ ತಡೆ!
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಎಎಸ್ಐ ಸಮೀಕ್ಷೆಗೆ ವಾರಣಾಸಿ ನ್ಯಾಯಾಲಯ ಅನುಮತಿ ನೀಡಿತ್ತು. ಇದರ ಪ್ರಕ್ರಿಯೆಯು ಇಂದಿನಿಂದ (ಜುಲೈ 24) ಪ್ರಾರಂಭವಾಯಿತು. ಆದರೆ ಇದನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಮತ್ತು ಅಂಜುಮನ್ ಇಂತೇಜಾಮಿಯಾ ಮಸೀದಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. ಹೀಗಾಗಿ ಜುಲೈ 26ರವರೆಗೆ ಎಎಸ್ಐ ಸಮೀಕ್ಷೆಗೆ ಸುಪ್ರೀಂ ತಡೆ ನೀಡಿದೆ.
ಎಲ್ಲಾ ಪಕ್ಷಗಳ ವಾದವನ್ನು ಆಲಿಸಿದ ನಂತರ, ಸುಪ್ರೀಂ ಕೋರ್ಟ್ ಜುಲೈ 26 ರಂದು ಸಂಜೆ 5 ಗಂಟೆಯವರೆಗೆ ಎಎಸ್ಐ ಸಮೀಕ್ಷೆಗೆ ತಡೆ ನೀಡಿದೆ.
ಸರ್ವೆ ಹೆಸರಿನಲ್ಲಿ ಮಸೀದಿಯೊಳಗೆ ಅಗೆಯಲಾಗುತ್ತಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾದರೆ ಅದನ್ನು ನಿಷೇಧಿಸಬೇಕು. ಇದರ ಹೊರತಾಗಿ, ಮುಸ್ಲಿಂ ಕಡೆಯವರು ಅವಹೇಳನಕ್ಕಾಗಿ ವಾದಿಸಿದರು. ಈ ಕುರಿತು ಹಿಂದೂ ಪರ ವಕೀಲರು, ಕೆಳ ನ್ಯಾಯಾಲಯವು ನಿವೇಶನದ ಸರ್ವೇಗೆ ಅನುಮತಿ ನೀಡಿದೆ, ಆದರೆ ವಿವಾದಿತ ಭಾಗವನ್ನು (ವಜುಖಾನ) ಪ್ರತ್ಯೇಕವಾಗಿ ಇರಿಸಿದೆ ಎಂದು ಹೇಳಿದರು. ಈ ಬಗ್ಗೆ ನ್ಯಾಯಾಲಯ ಸ್ಥಿತಿ ವರದಿ ಕೇಳಿತ್ತು ಎಂದಿದ್ದಾರೆ

ಎಎಸ್ಐ ಭರವಸೆ
ಜ್ಞಾನವಾಪಿ ಸಂಕೀರ್ಣವನ್ನು ಹಾಳು ಮಾಡುವುದಿಲ್ಲ ಅಥವಾ ಒಳಗೆ ಅಗೆಯುವುದಿಲ್ಲ ಎಂದು ಎಎಸ್ಐ ತಂಡವು ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಅವರು ವೈಜ್ಞಾನಿಕ ಆಧಾರದ ಮೇಲೆ ಮಾತ್ರ ಸಮೀಕ್ಷೆ ನಡೆಸುತ್ತಾರೆ. ಈ ವಾದಗಳನ್ನು ಆಲಿಸಿದ ನ್ಯಾಯಾಲಯವು ಎರಡು ದಿನಗಳ ಕಾಲ ಸಮೀಕ್ಷೆಯನ್ನು ನೀಡಲು ತಿಳಿಸಿತು.
ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, ಮಸೀದಿ ಆವರಣದ ಸರ್ವೆ ಕುರಿತ ವಾರಣಾಸಿ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಮುಸ್ಲಿಂ ಕಡೆಯವರು ಹೈಕೋರ್ಟ್ಗೆ ಮೊರೆ ಹೋಗಬಹುದು. ನಮ್ಮ ವಕೀಲರ ತಂಡವೂ ಹೈಕೋರ್ಟ್ ಮೆಟ್ಟಿಲೇರುತ್ತಿದ್ದು, ಅದನ್ನು ವಿರೋಧಿಸುತ್ತೇವೆ. ಎಎಸ್ ಐ ಸಮೀಕ್ಷೆ ಬಳಿಕವಷ್ಟೇ ಜ್ಞಾನವಾಪಿ ಸತ್ಯ ಹೊರಬರಲಿದೆ ಎಂದರು. ಸುಪ್ರೀಂ ಕೋರ್ಟ್ನ ಯಾವುದೇ ಕಾಮೆಂಟ್ಗಳಿಂದ ಪ್ರಭಾವಿತವಾಗದೆ ಹೈಕೋರ್ಟ್ ಈ ವಿಷಯವನ್ನು ನಿರ್ಧರಿಸುತ್ತದೆ.
ಕೆಳ ನ್ಯಾಯಾಲಯದ ಆದೇಶವೇನು?
ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಕ್ಯಾಂಪಸ್ನ ಎಎಸ್ಐ ಸಮೀಕ್ಷೆಯನ್ನು ನಡೆಸಬೇಕು ಎಂದು ಶುಕ್ರವಾರ ಆದೇಶಿಸಿದ್ದು, ಅದರ ವರದಿಯನ್ನು ಆಗಸ್ಟ್ 4 ರೊಳಗೆ ಸಲ್ಲಿಸಲು ತಿಳಿಸಿತ್ತು.
ವಾರಣಾಸಿ ನ್ಯಾಯಾಲಯ ಶುಕ್ರವಾರ ಸಮೀಕ್ಷೆಗೆ ಆದೇಶ
ವಾರಣಾಸಿಯ ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ನ್ಯಾಯಾಲಯವು ಜ್ಞಾನವಾಪಿ ಕ್ಯಾಂಪಸ್ನಲ್ಲಿರುವ ಸೀಲ್ ಮಾಡಿದ ಗೋದಾಮನ್ನು ಹೊರತುಪಡಿಸಿ ಉಳಿದ ಭಾಗಗಳ ವೈಜ್ಞಾನಿಕ ತನಿಖೆಯನ್ನು ಎಎಸ್ಐ ನಡೆಸಬೇಕು ಎಂದು ಶುಕ್ರವಾರ ಆದೇಶಿಸಿತ್ತು. ಅಲ್ಲದೇ ವಾರಣಾಸಿ ನ್ಯಾಯಾಲಯವು ಆಗಸ್ಟ್ 4ರೊಳಗೆ ವರದಿ ಮಾಡಿ ಕೊಡಿ, ದೇವಸ್ಥಾನ ಒಡೆದು ಅದರ ಮೇಲೆ ಮಸೀದಿ ಕಟ್ಟಲಾಗಿದೆಯೇ ಎಂದು ತಿಳಿಸಿ ಎಂದು ಕೇಳಿದೆ.
"ನನ್ನ ಅರ್ಜಿಯನ್ನು ಅನುಮೋದಿಸಲಾಗಿದೆ ಮತ್ತು ಸೀಲ್ ಮಾಡಿರುವ ವಜು ಕೊಳವನ್ನು ಹೊರತುಪಡಿಸಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಎಎಸ್ಐ ಸರ್ವೆ ನಡೆಸಲು ಕೋರ್ಟ್ ಸೂಚಿಸಿದೆ ಎಂಬ ಮಾಹಿತಿ ನನಗೆ ಬಂದಿದೆ" ಎಂದು ಪ್ರಕರಣದಲ್ಲಿ ಹಿಂದೂ ಭಕ್ತರನ್ನು ಪ್ರತಿನಿಧಿಸಿರುವ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.
ಈ ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಸ್ಥಾನವನ್ನು ಉರುಳಿಸಿ ಅದರ ಮೇಲೆಯೇ ಮಸೀದಿ ನಿರ್ಮಿಸಲಾಗಿತ್ತು ಎನ್ನುವುದು ಹಿಂದೂ ಅರ್ಜಿದಾರರ ವಾದವಾಗಿದೆ. ಅದನ್ನು ಖಚಿತಪಡಿಸಿಕೊಳ್ಳಲು ಸರ್ವೆ ನಡೆಸಲು ಸೂಚಿಸಲಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಇರುವ ಜ್ಞಾನವಾಪಿ ಮಸೀದಿಯು ಪುರಾತನ ಹಿಂದೂ ದೇವಸ್ಥಾನದ ಲಕ್ಷಣಗಳನ್ನು ಹೊಂದಿದೆ ಎಂದು ನಾಲ್ವರು ಮಹಿಳಾ ಭಕ್ತರು ಈ ವರ್ಷದ ಮೇ ತಿಂಗಳಲ್ಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಲಕ್ಷಾಂತರ ವರ್ಷಗಳಿಂದಲೂ ಈ ಜಾಗದಲ್ಲಿ 'ಸ್ವಯಂಭೂ ಜ್ಯೋತಿರ್ಲಿಂಗ' ಅಸ್ತಿತ್ವದಲ್ಲಿದೆ. ಆದರೆ ಮಹಮ್ಮದ್ ಘಜ್ನಿಯ ದಾಳಿಯೊಂದಿಗೆ ಆರಂಭವಾಗಿ ನಾಸ್ತಿಕರು ಮತ್ತು ವಿಗ್ರಹ ಆರಾಧಕರ ಕಡೆಗೆ ದ್ವೇಷ ಹೊಂದಿದ್ದ ಮುಸ್ಲಿಂ ದಾಳಿಕೋರರು ಈ ಲಿಂಗವನ್ನು ಅನೇಕ ಬಾರಿ ಹಾನಿ ಮಾಡಿ ನಾಶಗೊಳಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications