ಅದಾನಿ ಗ್ರೂಪ್ ಮಾನನಷ್ಟ ಮೊಕದ್ದಮೆ: ರಾಜು ಪರುಲೇಕರ್, ಅಭಿಸಾರ್ ಶರ್ಮಾಗೆ ಗುಜರಾತ್ ಕೋರ್ಟ್ ನೋಟಿಸ್
ಅದಾನಿ ಗ್ರೂಪ್ನಿಂದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 20 ರಂದು ಗಾಂಧಿನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪತ್ರಕರ್ತರಾದ ಅಭಿಸರ್ ಶರ್ಮಾ ಮತ್ತು ರಾಜು ಪರುಲೇಕರ್ ಅವರಿಗೆ ವೈಯಕ್ತಿಕವಾಗಿ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಅದಾನಿ ಗ್ರೂಪ್ನ ವಕೀಲ ಸಂಜಯ್ ಠಕ್ಕರ್ ಅವರ ಪ್ರಕಾರ, ಯೂಟ್ಯೂಬರ್ ಆಗಿರುವ ಶರ್ಮಾ ಮತ್ತು ಬ್ಲಾಗರ್ ಆಗಿರುವ ಪರುಲೇಕರ್ ಅವರು ಸುಳ್ಳು ಮತ್ತು ಮಾನನಷ್ಟಕರ ವಿಷಯವನ್ನು ಹರಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಂಧಿನಗರದ (ಅದಾಲಜ್ ಪೊಲೀಸ್ ಠಾಣೆ) ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯವು ಇಬ್ಬರೂ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ ಸೆಪ್ಟೆಂಬರ್ 20 ರಂದು ಹಾಜರಾಗುವಂತೆ ನಿರ್ದೇಶಿಸಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ನ ಸೆಕ್ಷನ್ 223 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಈ ನೋಟಿಸ್ಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಆರೋಪಿ ಪಕ್ಷಕ್ಕೆ ತಮ್ಮ ವಾದ ಮಂಡಿಸಲು ಅವಕಾಶ ನೀಡಿಲ್ಲದೆ ಮ್ಯಾಜಿಸ್ಟ್ರೇಟ್ ಯಾವುದೇ ಅಪರಾಧದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಇಬ್ಬರು ಪತ್ರಕರ್ತರು ಸ್ವತಃ ಅಥವಾ ತಮ್ಮ ವಕೀಲರ ಮೂಲಕ ಸೆಪ್ಟೆಂಬರ್ 20ರಂದು ಹಾಜರಾಗಬೇಕೆಂದು ಸೂಚಿಸಲಾಗಿದೆ.
ನೋಟಿಸ್ ಸ್ವೀಕರಿಸಿದ ನಂತರ, ಇಬ್ಬರೂ ಸೆಪ್ಟೆಂಬರ್ 20 ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗಿ ತಮ್ಮ ಪರ ವಾದ ಮಂಡಿಸಬೇಕು. ಶರ್ಮಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾನಹಾನಿಕರ ವಿಷಯವನ್ನು ಅಪ್ಲೋಡ್ ಮಾಡಿದ್ದರೆ, ಪರುಲೇಕರ್ ಟ್ವೀಟ್ ಮೂಲಕ ಮಾನಹಾನಿಕರ ಕಾಮೆಂಟ್ಗಳನ್ನು ಮಾಡಿದ್ದಾರೆ" ಎಂದು ಅದಾನಿ ಗ್ರೂಪ್ನ ವಕೀಲ ಸಂಜಯ್ ಠಕ್ಕರ್ ಹೇಳಿದರು.
ಠಕ್ಕರ್ ಅವರ ಪ್ರಕಾರ, ಶರ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾನಹಾನಿಕರ ವಿಡಿಯೋ ಅಪ್ಲೋಡ್ ಮಾಡಿದ್ದರು. ಪರುಲೇಕರ್ ಟ್ವಿಟರ್ ವೇದಿಕೆಯಲ್ಲಿ ಕಾಮೆಂಟ್ಗಳು ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 356 (1, 2, 3) ಅಡಿ ಪ್ರಕರಣ ದಾಖಲಿಸಲಾಗಿದೆ. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499, 500 ಮತ್ತು 501 ಕ್ಕೆ ಸಮಾನವಾಗಿದೆ ಎಂದು ಅವರು ಹೇಳಿದರು.
ದೂರುಗಳಲ್ಲಿಆಗಸ್ಟ್ 18, 2025ರಂದು ಶರ್ಮ ಅಪ್ಲೋಡ್ ಮಾಡಿದ ಯೂಟ್ಯೂಬ್ ವಿಡಿಯೋವನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಅಸ್ಸಾಂನಲ್ಲಿ ಸಾವಿರಾರು ಬೀಗಾ ಭೂಮಿಯನ್ನು ಅದಾನಿಗೆ ನೀಡಲಾಗಿದೆ ಹಾಗೂ ರಾಜಕೀಯ ಪ್ರೋತ್ಸಾಹದ ಮಾದರಿಯಂತೆ ಅವಳಿ ಅನುಕೂಲಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಅದೇ ಸಮಯದಿಂದ ಪರುಲೇಕರ್ ಕೂಡಾ ಜನವರಿ 2025ರಿಂದ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಭೂಕಬಳಿಕೆ, ಹಗರಣಗಳು ಮತ್ತು ಅನುಚಿತ ಪ್ರಯೋಜನಗಳ ಬಗ್ಗೆ ಆರೋಪಗಳ ಟ್ವೀಟ್ ಮತ್ತು ರಿಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆದಾನಿ ಗ್ರೂಪ್ ಆಧಾರರಹಿತ ಮತ್ತು ದಾರಿತಪ್ಪಿಸುವ ಆರೋಪಗಳನ್ನು ತಳ್ಳಿಹಾಕಿದೆ, ಆಗಸ್ಟ್ 12, 2025 ರಂದು ಅದಾನಿ ಕುರಿತಾಗಿ ಯಾವುದೇ ಉಲ್ಲೇಖ ಮಾಡಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಹೈಕೋರ್ಟ್ ಪ್ರಕರಣದ ಕೇಂದ್ರಬಿಂದುವಾಗಿರುವ ಮಹಾಬಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್, ಅದಾನಿಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ ಎಂದು ಠಕ್ಕರ್ ಹೇಳಿದರು.












Click it and Unblock the Notifications