ಈ ಪ್ರದೇಶದಲ್ಲಿ ಮದುವೆಯಾಗಬೇಕು ಎಂದರೆ ವರ 6 ಕಿ.ಮೀ ನಡೆಯಲೇ ಬೇಕಂತೆ
ಡೆಹ್ರಾಡೂನ್, ಜನವರಿ 28: ಹಿಮಾಲಯದ ತಪ್ಪಲು, ವಿಪರೀತ ಚಳಿ, ಹಿಮಪಾತ ಮನೆಯಿಂದ ಹೊರಬರಲಾರದ ಪರಿಸ್ಥಿತಿ ಅಂದೇ ಮದುವೆ ವರನಾದ್ರೂ ಏನು ಮಾಡ್ತಾನೆ, 6 ಕಿ.ಮೀ ನಡೆದುಕೊಂಡೇ ಬಂದು ಮದುವೆಯಾದ ಘಟನೆ ರುದ್ರಪ್ರಯಾಗ್ನಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ಜನರು ವಾರಗಟ್ಟಲೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ, ಮತ್ತೊಂದೆಡೆ ಮದುವೆಗೆ ಕೇವಲ 25 ಕ್ಕಿಂತ ಕಡಿಮೆ ಜನರು ಬರುತ್ತಾರೆ, ಜತೆಗೆ, ವರ ಮತ್ತಾತನ ಕಡೆಯವರು ಮದುವೆ ನಡೆಯುತ್ತಿರುವ ಸ್ಥಳ ತಲುಪಲು ಹರಸಾಹಸ ಮಾಡಬೇಕಾಗುತ್ತದೆ. ಈ ಪ್ರಕರಣ ನಡೆದಿದೆ.
2002ರಲ್ಲಿ ಒಮ್ಮೆ ಹೀಗೆಯೇ ಭಾರಿ ಹಿಮಪಾತವಾದಾಗ ಮದುವೆಯಾಗಲಿದ್ದ ಯೋಧ ಮತ್ತಾತನ ಮನೆಯವರು ನಡೆದುಕೊಂಡೇ ಮದುವೆ ಛತ್ರ ತಲುಪಿದ್ದರು. ಅದಾದ ಬಳಿಕ ಇಂತಹ ಘಟನೆ ಮರುಕಳಿಸಿದ್ದು ಈಗಲೇ ಎಂದು ರಜನೀಶ್ ಅವರ ಸಹೋದರ ಸಂಬಂಧಿ ಆಶೀಶ್ ಹೇಳಿದ್ದಾರೆ.

ರುದ್ರಪ್ರಯಾಗ್ನ ಮಕ್ಕು ಮಠ್ ಎಂಬಲ್ಲಿ ತ್ರಿಯುಗಿನಾರಾಯಣ್ ಗ್ರಾಮದ ರಜನೀಶ್ ಕುರ್ಮಾಚಲಿ ಮತ್ತು ಮಕ್ಕು ಮಠ್ ನಿವಾಸಿ ಯುವತಿ ಜತೆ ಭಾನುವಾರ ಮದುವೆ ನಿಗದಿಯಾಗಿತ್ತು. ಹೆಚ್ಚಿನ ಹಿಮಪಾತ ಕಡಿಮೆ ಇದ್ದ ಕಾರಣ ರಜನೀಶ್ ಮತ್ತಾತನ ಮನೆಯವರು ಮದುವೆ ಛತ್ರದೆಡೆಗೆ ವಾಹನದಲ್ಲಿ ಪ್ರಯಾಣ ಆರಂಭಿಸಿದ್ದರು.
ತ್ರಿಯುಗಿನಾರಾಯಣ್ ಗ್ರಾಮದಿಂದ ಹೊರಟ ವರ ಮತ್ತಾತನ ಕಡೆಯವರು ಮಕ್ಕು ಮಠ್ನಿಂದ 6 ಕಿ.ಮೀ. ದೂರ ಇರುವಾಗ ಭಾರಿ ಹಿಮಪಾತ ಆರಂಭವಾಯಿತು. ವಾಹನ ಮುಂದೆ ಸಾಗುವುದು ಕಷ್ಟವಾಯಿತು.
ಇದಕ್ಕೆ ಜಗ್ಗದ ವರ ಮತ್ತಾತನ ಕಡೆಯವರು ವಾಹನದಿಂದ ಇಳಿದು 6 ಕಿ.ಮೀ. ನಡೆದುಕೊಂಡು ಮದುವೆ ಛತ್ರವನ್ನು ತಲುಪಿದರು. ವಿವಾಹ ವಿಜೃಂಭಣೆಯಿಂದ ನಡೆಯಿತು.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications