Get Updates
Get notified of breaking news, exclusive insights, and must-see stories!

Gautam Adani: ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದ ಗೌತಮ್ ಅದಾನಿ

ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು ಅವರ ಕುಟುಂಬದವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದು, ಪವಿತ್ರ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅದಾನಿ ಕುಟುಂಬವು ಸನಾತನ ಮೌಲ್ಯಗಳಲ್ಲಿ ನಂಬಿಕೆ ಇರಿಸಿದ್ದು. ಮಹಾ ಕುಂಭಮೇಳದ ಸೇವೆಯಲ್ಲೂ ತೊಡಗಿದೆ. ಅದಾನಿ ಕುಟುಂಬವು ಪವಿತ್ರ ಗಂಗಾನದಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದೆ. ಇಲ್ಲಿನ ಪವಿತ್ರ ನದಿಗಳಾದ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಆರತಿ ಬೆಳಗುವ ಮೂಲಕ ವಿಶೇಷ ಪೂಜೆ ಸಲ್ಲಿಸಿದೆ. ಅದಾನಿ ಅವರು ಮಹಾ ಕುಂಭಮೇಳ ಪ್ರಾರಂಭವಾದಾಗಿನಿಂದಲೂ ವಿಶೇಷ ಸೇವೆ ಹಾಗೂ ಪೂಜೆಗಳಲ್ಲಿ ಭಾಗವಹಿಸುತ್ತಿದ್ದಾರೆ. 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳವು ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಈ ಮಹಾ ಕುಂಭಮೇಳದಲ್ಲಿ ಕೋಟ್ಯಾಂತರ ಜನ ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ.

ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡಿರುವ ಅದಾನಿ ಅವರು, ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಅನುಭವ ಅದ್ಭುತವಾಗಿದೆ. ಇಲ್ಲಿ ಕೋಟ್ಯಾಂತರ ಜನ ಭಾಗವಹಿಸಿದರೂ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ನಾನು ಭಾರತದ ಎಲ್ಲಾರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಿರುವ ಈ ಕುಂಭಮೇಳದ ನಿರ್ವಹಣೆ ವಿಷಯವು ಮ್ಯಾನೇಜ್ಮೆಂಟ್ ಸಂಸ್ಥೆಗಳಿಗೆ ಸಂಶೋಧನೆಗೆ ಯೋಗ್ಯವಾದ ವಿಷಯವಾಗಿದೆ. ನನಗೆ ಹಾಗೂ ನನ್ನ ಕುಟುಂಬದವರಿಗೆ ಗಂಗಾ ಮಾತೆಯ ಆಶೀರ್ವಾದಕ್ಕಿಂತ ದೊಡ್ಡದು ಯಾವುದು ಸಹ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Gautam Adani Strengthens Ties to Sanatan Roots in Prayagraj

ಸನಾತನ ಮೌಲ್ಯಗಳ ಬಗ್ಗೆ ಅದಾನಿ ಕುಟುಂಬಕ್ಕೆ ಅಪಾರ ಗೌರವ

ಸನಾತನ ಮೌಲ್ಯಗಳ ಬಗ್ಗೆ ಅದಾನಿ ಕುಟುಂಬವು ವಿಶೇಷ ಗೌರವವನ್ನು ಹೊಂದಿದೆ. ಅದಾನಿ ಅವರು ಹಾಗೂ ಅವರ ಕುಟುಂಬದವರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿರುವುದು ಹಾಗೂ ಮಹಾ ಕುಂಭಮೇಳಕ್ಕೆ ಅವರು ಕೊಡುಗೆ ನೀಡಿರುವುದೇ ಸನಾತನ ಸಂಪ್ರದಾಯಗಳ ಬಗ್ಗೆ ಅವರು ಹೊಂದಿರುವ ವಿಶೇಷ ಗೌರವವನ್ನು ಸೂಚಿಸುತ್ತದೆ. ಮಹಾಕುಂಭ ಮೇಳವು ಆಧ್ಯಾತ್ಮಿಕತೆ ಹಾಗೂ ಸಂಸ್ಕೃತಿಯ ಮಹಾ ಸಂಗಮವಾಗಿದೆ. ಅದಾನಿ ಅವರು ಭಕ್ತಿಯ ರೂಪದಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ.

ಆಧ್ಯಾತ್ಮಿಕ ನಾಯಕರಾದ ಶ್ರೀ ಗುರುಪ್ರಸಾದ್ ಸ್ವಾಮೀಜಿ ಅವರು ಮಾತನಾಡಿ, ಗೌತಮ್‌ ಅದಾನಿ ಅವರ ವಿನಯ ಹಾಗೂ ನಿಸ್ವಾರ್ಥ ಕೊಡುಗೆಗಳನ್ನು ಶ್ಲಾಘಿಸಿದರು. ಅದಾನಿ ಗ್ರೂಪ್ ಕಂಪನಿಯ ಜವಾಬ್ದಾರಿ ಹಾಗೂ ಸಾಮಾಜಿಕ ಸೇವೆ ವಿಶೇಷವಾಗಿದೆ. ಇದಕ್ಕೆ ಮಹಾಕುಂಭ ಮೇಳಕ್ಕೆ ಅವರು ನೀಡಿರುವ ಕೊಡುಗೆಯೇ ಸಾಕ್ಷಿ. ಗೌತಮ್ ಅದಾನಿ ಅವರ ನಮ್ರತೆ ಇದರಲ್ಲಿ ಎದ್ದು ಕಾಣಿಸುತ್ತದೆ. ಹಿಂದೂ ಸಮಾರಂಭಗಳಿಗೆ ಅವರನ್ನು ಕರೆಯಲಿ ಎಂದು ಅವರು ಎಂದೂ ಕಾಯುವುದಿಲ್ಲ. ಅವರೇ ಸೇವೆ ಮಾಡುವುದಕ್ಕೆ ಮುಂದೆ ಬರುತ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಗೌತಮ್ ಅದಾನಿ ಹಾಗೂ ಅವರ ಕುಟುಂಬದ ಸದಸ್ಯರು ಪ್ರಯಾಗರಾಜ್‌ಗೆ ಭೇಟಿ ನೀಡಿರುವುದು ವಿಶೇಷವಾಗಿದೆ. ಭಕ್ತರಿಗೆ ಸೇವೆ ಸಲ್ಲಿಸುವಲ್ಲಿ ಅವರ ಕುಟುಂಬದವರು ಭಾಗವಹಿಸುತ್ತಿರುವುದು ಸನಾತನ ಮೌಲ್ಯಗಳಿಗೆ ಅವರು ಕೊಡುತ್ತಿರುವ ಗೌರವ ಹಾಗೂ ಭಕ್ತಿಯನ್ನು ತೋರಿಸುತ್ತದೆ. ಅದಾನಿ ಗ್ರೂಪ್‌ಗೆ ಸೇವೆ ಎನ್ನುವುದು ಕೇವಲ ಒಂದು ಅಭ್ಯಾಸವಲ್ಲ. ಅದೊಂದು ನಮ್ರತೆ, ನಂಬಿಕೆ ಹಾಗೂ ನಿಸ್ವಾರ್ಥ ಸೇವೆ ಆಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+