ಲಾಲೂ ಮತ್ತು ಪುತ್ರರಿಗೆ ಅಕ್ರಮ ಭೂ ಖರೀದಿಯ ಸಂಕಷ್ಟ
ಪಾಟ್ನಾ, ಆಗಸ್ಟ್ 1: ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ರತ್ನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ನಡೆದಿರುವ ಭೂ ಖರೀದಿ ಹಗರಣದ ತನಿಖೆಗೆ ಬಿಹಾರ ಸರಕಾರ ನಿರ್ಧರಿಸಿದ್ದು ಇದರಲ್ಲಿ ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಹೆಸರು ಕೇಳಿ ಬಂದಿದೆ.
ಭೂಮಿ ಖರೀದಿಗೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯಗಳನ್ನು ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು ಇದಾದ ಬೆನ್ನಿಗೆ ತನಿಖೆಗೆ ಆದೇಶ ನೀಡಲಾಗಿದೆ. ಸಗುಣ ಮೋರ್ ಎಂಬ ಮಾಲ್ ನಿರ್ಮಾಣಕ್ಕೆ ಪಾಟ್ನಾ ಪ್ರಾಣಿ ಸಂಗ್ರಹಾಲಯದಿಂದ ಟೆಂಡರ್ ಕರೆಯದೇ ಅಕ್ರಮವಾಗಿ ತೇಜ್ ಪ್ರತಾಪ್ ಯಾದವ್ ಭೂಮಿ ಖರೀದಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ಮಾಲ್ ಲಾಲೂ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ನಿರ್ದೇಶಕರಾಗಿರುವ ಡಿಲೈಟ್ ಮಾರ್ಕೆಟಿಂಗ್ ಪ್ರೈ. ಲಿ. ಕಂಪನಿಗೆ ಸೇರಿದೆ.












Click it and Unblock the Notifications