ಅಂದೇ ಅಟಲ್ ಗೆ ಸಿಗಬೇಕಿತ್ತು ಭಾರತರತ್ನ: ಕೊಕ್ಕೆ ಹಾಕಿದವರಾರು?
ನವದೆಹಲಿ, ಜ 3: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರನ್ನು ಎಲ್ಲಾ ಪಕ್ಷದವರೂ ಗೌರವದಿಂದ ಕಾಣುತ್ತಾರೆ. ಅವರ ಮುತ್ಸದ್ದಿತನಕ್ಕೆ ತಲೆಬಾಗುತ್ತಾರೆ.
ಇತ್ತೀಚೆಗೆ ವಾಜಪೇಯಿಗೆ ಭಾರತರತ್ನ ಪ್ರಶಸ್ತಿ ಘೋಷಣೆಯಾದಾಗ ಹೆಚ್ಚುಕಮ್ಮಿ ಎಲ್ಲರೂ ಪಕ್ಷಭೇದ ಮರೆತು ಸ್ವಾಗತಿಸಿದ್ದು ಅವರನ್ನು ಗೌರವಿಸುತ್ತಿರುವುದಕ್ಕೆ ಕೊಡಬಹುದಾದ ಉದಾಹರಣೆ.
ಅಟಲ್ ಜನ್ಮದಿನದಂದು (ಡಿಸೆಂಬರ್ 25) ತಪ್ಪದೇ ಅವರ ನಿವಾಸಕ್ಕೆ ಹೋಗಿ ಅವರನ್ನು ಅಭಿನಂದಿಸುವುದರಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್. (ಅಟಲ್, ಮಾಳವೀಯರಿಗೆ ಭಾರತರತ್ನ)

ಯುಪಿಎ ಅಧಿಕಾರದ ಅವಧಿಯಲ್ಲೇ ವಾಜಪೇಯಿವರಿಗೆ ಭಾರತರತ್ನ ನೀಡಬೇಕೆಂದು ಮನಮೋಹನ್ ಸಿಂಗ್ ಬಯಸಿದ್ದರು ಎನ್ನುವ ಮಾಹಿತಿಯನ್ನು ತಡವಾಗಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ತಿಳಿಸಿದ್ದಾರೆ.
ಅಟಲ್ ಅಲ್ಲದೇ, ಇನ್ನೊಬ್ಬರು ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರಿಗೂ ಮರಣೋತ್ತರವಾಗಿ ಭಾರತರತ್ನ ನೀಡಬೇಕೆಂದು ಮನಮೋಹನ್ ಸಿಂಗ್ ಬಯಸಿದ್ದರೆಂದು ಬರು ಅಂದಿನ ಘಟನೆಯ ಮೆಲುಕು ಹಾಕಿದ್ದಾರೆ.
ಈ ಇಬ್ಬರೂ ಮಾಜಿ ಪ್ರಧಾನಿಗಳಿಗೆ ಒಟ್ಟಿಗೇ ಭಾರತರತ್ನ ನೀಡಬೇಕೆಂದು ನಾನು ಸಲಹೆ ಮಾಡಿದ್ದೆ. ಅದಕ್ಕೆ ಸಿಂಗ್, ದೂಸ್ರಾ ಮಾತನಾಡದೇ ಒಪ್ಪಿಗೆ ಸೂಚಿಸಿದ್ದರು. ಇದನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಸಿಂಗ್ ಚರ್ಚಿಸಿದ್ದರೂ ಕೂಡಾ.
ಸುಮಾರು ಎಂಟು ವರ್ಷದಿಂದ ಭಾರತರತ್ನ ಪ್ರಶಸ್ತಿಯ ಬಗ್ಗೆ ನಡೆಯುತ್ತಿದ್ದ ಸಭೆ, ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮನಮೋಹನ್ ಸಿಂಗ್, ಅಟಲ್ ಮತ್ತು ಪಿವಿಎನ್ ಹೆಸರನ್ನು ಪ್ರಸ್ತಾವಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.
ಅಟಲ್ ಗೆ ಭಾರತರತ್ನ ನೀಡುವುದಕ್ಕೆ ಕಾಂಗ್ರೆಸ್ ನಿಂದ ವಿರೋಧವಿತ್ತೋ ಅಥವಾ ಯುಪಿಎ ಅಂಗ ಪಕ್ಷಗಳಿಂದ ವಿರೋಧವಿತ್ತೋ ಎನ್ನುವ ಖಚಿತ ಮಾಹಿತಿಯ ಬಗ್ಗೆ ನನಗೆ ತಿಳಿದಿಲ್ಲ.
ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರ ಬಳಿ ಈ ವಿಷಯವನ್ನು ಚರ್ಚಿಸಿದ್ದರೋ ಎನ್ನುವ ಬಗ್ಗೆಯೂ ನನಗೆ ತಿಳಿದಿಲ್ಲ ಎಂದು ಸಿಂಗ್ ಮಾಧ್ಯಮ ಸಲಹೆಗಾರರಲ್ಲಿ ಒಬ್ಬರಾಗಿದ್ದ ಬರು ಹೇಳಿದ್ದಾರೆ.
ಒಟ್ಟಿನಲ್ಲಿ ಅಂದೇ ವಾಜಪೇಯಿಗೆ ಸಿಗಬೇಕಿದ್ದ 'ಭಾರತರತ್ನ' ಪ್ರಶಸ್ತಿಗೆ ಕೊಕ್ಕೆ ಹಾಕಿದವರಾರು ಎನ್ನುವ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. (ಮಾಹಿತಿ: ಟೈಮ್ಸ್ ಆಫ್ ಇಂಡಿಯಾ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications