ಟ್ವಿಟ್ಟರ್ ನಲ್ಲಿ ಮೂರ್ಖರ ದಿನದ್ದೇ ಗೌಜು!
ಪ್ರತಿವರ್ಷವೂ ಬರುವ ಮುರ್ಖರ ದಿನ ಅಪಹಾಸ್ಯದಿಂದ ನೋವುಂಟು ಮಾಡದೆ, ತಿಳಿ ಹಾಸ್ಯದಿಂದ ಮುಖದಲ್ಲಿ ನಗು ಮೂಡಿಸಲಿ ಎಂಬುದು ಎಲ್ಲರ ಹಾರೈಕೆ.
ಏಪ್ರಿಲ್ 1: ಹೊಸ ಆರ್ಥಿಕ ವರ್ಷದ ಮೊದಲ ದಿನವೆಂಬುದು ಒಂದೆಡೆಯಾದರೆ, ಮೂರ್ಖರ ದಿನ ಎಂಬುದು ಇನ್ನೊಂದೆಡೆ. ಒಟ್ಟಿನಲ್ಲಿ ಏಪ್ರಿಲ್ 1 ನಿರುಪದ್ರವಿ ಹಾಸ್ಯಕ್ಕೆ, ಜಂಜಾಟಗಳನ್ನೆಲ್ಲ ಮರೆತು ಒಂದು ದಿನವಾದರೂ ಖುಷಿಯಾಗಿರುವುದಕ್ಕೆ ಹೇಳಿಮಾಡಿಸಿದ ದಿನ.
ಆತ್ಮೀಯರೆದುರು ಮೂರ್ಖರಾಗುವುದರಲ್ಲಿಯೂ ಒಂದು ರೀತಿಯ ಮೋಜಿದೆ. ಮೂರ್ಖತನ ಒಂದರ್ಥದಲ್ಲಿ ಮುಗ್ಧತೆಯ ಮತ್ತೊಂದು ರೂಪವೇ. ಒಟ್ಟಿನಲ್ಲಿ ಪ್ರತಿವರ್ಷವೂ ಬರುವ ಮುರ್ಖರ ದಿನ ಅಪಹಾಸ್ಯದಿಂದ ನೋವುಂಟು ಮಾಡದೆ, ತಿಳಿ ಹಾಸ್ಯದಿಂದ ಮುಖದಲ್ಲಿ ನಗು ಮೂಡಿಸಲಿ ಎಂಬುದು ಎಲ್ಲರ ಹಾರೈಕೆ.[ನಿಜವಾದ ಮೂರ್ಖರು ಯಾರು? ಉತ್ತರ ಇಲ್ಲಿದೆ]
ಏಪ್ರಿಲ್ ಒಂದರ ಮೂರ್ಖರ ದಿನಕ್ಕೆ ಸಂಬಂಧಿಸಿದ ತರಹೇವಾರಿ ಜೋಕುಗಳು ಈಗಾಗಲೇ ಟ್ವಿಟ್ಟರ್ ನಲ್ಲಿ ಓಡಾಡುತ್ತಿವೆ. ಅವುಗಳಲ್ಲಿ ಕೆಲವು ನಿಮ್ಮ ಓದಿಗಾಗಿ ಇಲ್ಲಿವೆ...[ಯಾರು ಮೂರ್ಖ? ಒಂದು ಕಿರು ಸಂಶೋಧನೆ!]
|
ಮೂರ್ಖರದಿನ ಅವಿವಾಹಿತರಿಗೆ ಮಾತ್ರ!
ಮೂರ್ಖರ ದಿನ ಅವಿವಾಹಿತರಿಗೆ ಮಾತ್ರ. ಏಕೆಂದರೆ ವಿವಾಹಿತರಿಗೆ ಅವರ ವಿವಾಹ ವಾರ್ಷಿಕೋತ್ಸವವಿದೆ! ಎಂದು ಸತ್ಯೇಂದರ್ ಶುಕ್ಲಾ ಅವರು ಟ್ವೀಟ್ ಮಾಡಿ, ವಿವಾಹಿತರ ಪಡಿಪಾಟಲನ್ನು ಹೊರಹಾಕಿದ್ದಾರೆ![ಜೋಕು ಜೋಕಾಲಿ, ನಗು ಸದಾ ಜೀಕಲಿ !]
|
ಸಂಸದೀಯ ಚುನಾವಣೆಯೇ ಸುಳ್ಳಾಗಿದ್ದರೆ..!
ದೊನಾಲ್ಡ್ ಟ್ರಂಪ್ ಇಂದು, ಎಲ್ಲರೆದುರಲ್ಲಿ ನಿಂತು 'ಸಂಸದೀಯ ಚುನಾವಣೆ ಒಂದು ತಮಾಷೆಯಾಗಿತ್ತಷ್ಟೆ, ನಿಮ್ಮನ್ನೆಲ್ಲ ಏಪ್ರಿಲ್ ಫೋಲ್ ಮಾಡಿದ್ದೇನೆ' ಎನ್ನಲಿ ಎಂದು ನಾನು ಹಾರೈಸುತ್ತೇನೆ ಎಂದು ಪಿಯುಶ್ ಸೋಮಯ್ಯ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಪಪ್ಪುಗೆ ಹಾರೈಕೆಯ ಸುರಿಮಳೆ!
ಮೂರ್ಖರ ದಿನದಂದು ಹಲವರು ರಾಹುಲ್ ಗಾಂಧಿಯವರಿಗೆ ಹ್ಯಾಪಿ ಬರ್ತ್ ಡೇ ಪಪ್ಪು ಎಂದು ಟ್ವೀಟ್ ಮಾಡಿ, ಮೂರ್ಖರ ದಿನಕ್ಕೆ ವಿಭಿನ್ನವಾಗಿ ಹಾರೈಸಿದ್ದಾರೆ!
|
ಜಿಯೋ ಆಫರ್ ನಂಬಿಬಿಟ್ಟೀರಾ ಜೋಕೆ!
ಜಿಯೋ ಆಫರ್ ಮತ್ತೆ ಮುಂದುವರಿಯುತ್ತೆ ಎಂಬ ಮೆಸೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದು ಏಪ್ರಿಲ್ ಫೂಲ್ ಮಾಡುವುದಕ್ಕಾಗಿ ಹರಡಿರುವ ಜೋಕು, ಇದನ್ನು ನಂಬಿ ಮೂರ್ಖರಾಗಬೇಡಿ ಎಂದು ಆಕಾಶ್ ಶ್ರೀರಾಮ್ ಎಂಬುವವರು ಮನವಿ ಮಾಡಿದ್ದಾರೆ.
|
ಅಭ್ಯರ್ಥಿಯ ಹೆಸರು ಇಂದೇ ಘೋಷಣೆ!
ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಗೆ ಅಭ್ಯರ್ಥಿಯ ಹೆಸರನ್ನು ಇಂದೇ ಘೋಷಿಸಲು ಕೆಲ ರಾಜಕೀಯ ಪಕ್ಷಗಳು ನಿರ್ಧರಿಸಿವೆಯಂತೆ ಎಂದು ಕಪಿಲ್ ಮಿಶ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್












Click it and Unblock the Notifications