Tirupati: ಬೇಡಿದ ವರ ನೀಡುವ ತಿರುಪತಿ ತಿಮ್ಮಪ್ಪನಿಗೆ ಹಣದ ಸುರಿಮಳೆ: ಒಂದೇ ವರ್ಷದಲ್ಲಿ ಕೋಟಿ ಕೋಟಿ ಹಣ ಕಾಣಿಕೆ!
ಚೆನ್ನೈ ಜನವರಿ 4: ಆಂಧ್ರಪ್ರದೇಶ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಹಣ ಸಂಗ್ರಹವಾಗಿದೆ. ಬೇಡಿದ ವರವನ್ನು ನೀಡುವ ತಿಮ್ಮಪ್ಪನಿಗೆ ಚಿನ್ನ, ಬೆಳ್ಳಿ, ನಗದು ಹಾಗೂ ವಿದೇಶಿ ಕರೆನ್ಸಿ ಸೇರಿದಂತೆ ಒಟ್ಟು 1,365 ಕೋಟಿ ರೂಪಾಯಿ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.
ತಿರುಮಲ ತಿರುಪತಿ ದೇವಸ್ಥಾನ ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಇಲ್ಲಿ ಪೂಜಿಸುವ ವೆಂಕಟೇಶ್ವರನ ಮುಂದೆ ನಿಂತು ಭಕ್ತರು ಭಕ್ತಿಯಿಂದ ಬೇಡಿಕೊಂಡರೆ ಎಲ್ಲಾ ಬೇಡಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಹೀಗೆ ಹರಕೆ ತೀರಿದ ಬಳಿಕ ಭಕ್ತರು ಚಿನ್ನ, ಬೆಳ್ಳಿ, ಹಣ ಸೇರಿದಂತೆ ವಿವಿಧ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಅರ್ಪಿಸುತ್ತಾರೆ. ಇದನ್ನೆಲ್ಲಾ ಕಾಣಿಕೆ ಪೆಟ್ಟಿಗೆಗಳಲ್ಲಿ ಇಡಲಾಗುತ್ತದೆ. ಒಂದು ವರ್ಷ ಪೂರ್ಣಗೊಂಡ ಬಳಿಕ ಅದನ್ನು ಎಣಿಸಲಾಗುತ್ತದೆ. ಹೀಗೆ 2024ರಲ್ಲಿ ತಿರುಪತಿ ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಹಣ 1365 ಕೋಟಿ ರೂಪಾಯಿ ಎಂದು ಟಿಟಿಡಿ ಘೋಷಣೆ ಮಾಡಿದೆ.

2024ರಲ್ಲಿ 2.55 ಕೋಟಿ ಭಕ್ತರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ವರ್ಷ 99 ಲಕ್ಷ ಜನರು ತಿರುಪತಿ ದೇವಸ್ಥಾನಕ್ಕೆ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. 6.30 ಕೋಟಿ ಜನರಿಗೆ ಅನ್ನ ಪ್ರಸಾದ ನೀಡಲಾಗಿದೆ. ಜೊತೆಗೆ ತಿರುಪತಿಯ ಪ್ರಸಿದ್ಧ ಲಡ್ಡುಗಳು 12.14 ಕೋಟಿಗೆ ಮಾರಾಟವಾಗಿವೆ. ಈ ವರ್ಷ ಒಟ್ಟು 1,365 ಕೋಟಿ ರೂಪಾಯಿ ಹಣ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ.
ಈ ಹಿಂದೆ 2023ರಲ್ಲಿ 1391.86 ಕೋಟಿ ಹಣ ಸಂಗ್ರಹವಾಗಿತ್ತು. 2022ರಲ್ಲಿ 1291.69 ಕೋಟಿ ರೂಪಾಯಿ ಹಣ ಸಂಗ್ರಹವಾಗಿತ್ತು. ಪ್ರತಿದಿನ ಭಕ್ತರು ಹುಂಡಿಗಳಿಗೆ ಹಾಕುವ ಹಣವನ್ನು ವರ್ಗಾಯಿಸಲಾಗುತ್ತದೆ. ಚಿನ್ನ, ಬೆಳ್ಳಿ ಮತ್ತು ಅಮೂಲ್ಯವಾದ ವಸ್ತುಗಳನ್ನು ವಿಶೇಷ ಲಾಕರ್ಗಳಲ್ಲಿ ಇರಿಸಲಾಗುತ್ತದೆ. ತಿರುಪತಿ ದೇವಸ್ಥಾನದ ಖಜಾನೆಯಲ್ಲಿ ಹಣ ಜಮೆ ಮಾಡಲಾಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳು ವರ್ಗಾಯಿಸಿ ಮತ್ತೊಂದೆಡೆ ಸಂಗ್ರಹಿಸಲಾಗುತ್ತದೆ. ಹೀಗೆ ತಿಂಗಳಿಗೊಮ್ಮೆ ಸಂಗ್ರಹಿಸಿದ ಹಣವನ್ನು ವರ್ಷಕ್ಕೊಮ್ಮೆ ಎಣಿಕೆ ಮಾಡಲಾಗುತ್ತದೆ.
ಅಂದಹಾಗೆ ತಿರುಪತಿ ಆದಾಯ ಮಾತ್ರವಲ್ಲದೆ ತಿರುಪತಿಯ ದೇವಸ್ಥಾನದ ಖರ್ಚು ಕೂಡ ಹೆಚ್ಚಾಗಿದೆ. 1773 ಕೋಟಿಗಳನ್ನು ಮಾನವ ಸಂಪನ್ಮೂಲಕ್ಕಾಗಿ ಖರ್ಚು ಮಾಡಲಾಗಿದೆ. ಅಂದರೆ ದೇವಾಲಯದ ಅರ್ಚಕರು ಮತ್ತು ಕಾರ್ಮಿಕರ ವೇತನ ಮತ್ತು ಭತ್ಯೆಗಳನ್ನು ಪಾವತಿಸಲಾಗಿದೆ. ಎಂಜಿನಿಯರಿಂಗ್ ಕಾಮಗಾರಿಗೆ 350 ಕೋಟಿ ವೆಚ್ಚ ಮಾಡಲಾಗಿದೆ.
ಅಲ್ಲದೆ ದೇವಸ್ಥಾನ 2024-25ರ ಆರ್ಥಿಕ ವರ್ಷಕ್ಕೆ 5,141.74 ಕೋಟಿ ರೂಪಾಯಿ ಬಜೆಟ್ ಅನ್ನು ನಿಗದಿಪಡಿಸಿದೆ. ಈ ಬಜೆಟ್ ಮಾನವ ಸಂಪನ್ಮೂಲ 1,773 ಕೋಟಿ ವೇತನ ಮತ್ತು ಭತ್ಯೆಗಳನ್ನು ಒಳಗೊಂಡಿದೆ, ಜೊತೆಗೆ 350 ಕೋಟಿ ರೂ. ಎಂಜಿನಿಯರಿಂಗ್ ಕೆಲಸಗಳು, ದೇವಾಲಯದ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸುತ್ತದೆ ಎಂದು ಸೂಚಿಸಲಾಗಿದೆ.
ಹೆಚ್ಚುವರಿಯಾಗಿ ಹಿಂದೂ ಧರ್ಮ ಪ್ರಚಾರ ಪರಿಷತ್ತಿನ ಯೋಜನೆಗಳಿಗೆ 108.50 ಕೋಟಿ ಮೀಸಲಿಡಲಾಗಿದೆ. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುತ್ತದೆ ಮತ್ತು ಟಿಟಿಡಿ ಅಡಿಯಲ್ಲಿ ವಿವಿಧ ಸಂಸ್ಥೆಗಳಿಗೆ 113.50 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೆ ರಾಜ್ಯ ಸರ್ಕಾರದ ಉಪಕ್ರಮಗಳಿಗೆ ಸಂಸ್ಥೆಯ ಬೆಂಬಲವನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರದ ನಿಧಿಗೆ 50 ಕೋಟಿ ಕೊಡುಗೆ ನೀಡಲಾಗಿದೆ. ಇವು ದೇವಾಲಯದ ಅಧಿಕಾರಿಗಳ ಆದ್ಯತೆಗಳು, ನೌಕರರ ಕಲ್ಯಾಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪ್ರಚಾರವನ್ನು ಸಮತೋಲನಗೊಳಿಸುತ್ತವೆ.












Click it and Unblock the Notifications