Video: ಫೋಟೋ ಕ್ಲಿಕ್ಕಿಸಿಕೊಳ್ಳಲು ನೀರಿಗಿಳಿದು ಕೊಚ್ಚಿ ಹೋದ ಕುಟುಂಬ: ಭಯಾನಕ ವಿಡಿಯೋ ವೈರಲ್!
ಮಹಾರಾಷ್ಟ್ರದ ಲೋನಾವಾಲಾದಲ್ಲಿರುವ ಭೂಶಿ ಅಣೆಕಟ್ಟು ನೋಡಲು ತೆರಳಿದ ಐವರು ಪ್ರವಾಸಿಗರು ಭಾನುವಾರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಟುಂಬವೊಂದು ಫೋಟೋ ಕ್ಲಿಕ್ಕಿಸಲು ನೀರಿಗಿಳಿದ ವೇಳೆ ಡ್ಯಾಂನಿಂದ ನೀರನ್ನು ಬಿಡಲಾಗಿದೆ. ಈ ವೇಳೆ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಅಣೆಕಟ್ಟೆ ಪ್ರದೇಶದ ಜಲಪಾತದಲ್ಲಿ ಈ ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ.

ಮಾಹಿತಿ ಪ್ರಕಾರ, ಭೂಶಿ ಅಣೆಕಟ್ಟಿನ ಬಳಿಯ ಜಲಪಾತದಲ್ಲಿ ಮುಳುಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿ ಸುಮಾರು 24 ಗಂಟೆ ಕಳೆದರೂ ಇಬ್ಬರ ಮೃತದೇಹ ಪತ್ತೆಯಾಗಿಲ್ಲ, ಶೋಧ ಕಾರ್ಯ ಈಗಲೂ ನಡೆಯುತ್ತಿದೆ.
ಜೂನ್ 25 ರಂದು ಮದುವೆ ನಿಮಿತ್ತ ಕುಟುಂಬವೊಂದು ಹಾಗೂ ಅವರ ಸಂಬಂಧಿಕರು ಜಮಾಯಿಸಿ ಭೂಶಿ ಅಣೆಕಟ್ಟು ನೋಡಲು ತೆರಳಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ.
महाराष्ट्र के लोनावाला में बड़ा हादसा..
— Vivek Gupta (@imvivekgupta) June 30, 2024
पिकनिक मानना गया पूरा परिवार बुशी डेम में डूबा..
परिवार में महिला समेत छोटे बच्चे भी पानी के तेज बहाव में बहे..
सर्च ऑपरेशन जारी है.#Maharashtra pic.twitter.com/a0cAskXmwS
ಪುಣೆ ಜಿಲ್ಲೆಯ ಹಡಪ್ಸರ್ನ ಸೈಯದ್ ನಗರದ ಅನ್ಸಾರಿ ಕುಟುಂಬದ 15-16 ಜನರು ಭಾನುವಾರ ಮಧ್ಯಾಹ್ನ ಭೂಶಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಏಳು ಜನ ಸದಸ್ಯರು ಜಲಪಾತದಲ್ಲಿ ಫೋಟೋ ಕ್ಲಿಕ್ಕಿಸಲು ಇಳಿದಿದ್ದಾರೆ. ಈ ಸಮಯದಲ್ಲಿ ಆಣೆಕಟ್ಟಿನಿಂದ ನೀರನ್ನು ಬಿಡಲಾಗಿದೆ.

ಕಣ್ಣೆದುರು ಹಲವಾರು ಪ್ರವಾಸಿಗರಿದ್ದರೂ ಏನೂ ಮಾಡಲು ಆಗಿಲ್ಲ. ಕುಟುಂಬಸ್ಥರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಇಬ್ಬರು ನೀರಿನ ಪ್ರವಾಹದಿಂದ ಹೊರಬಂದು ಬದುಕುಳಿದಿದ್ದಾರೆ. ಆದರೆ, ನಾಲ್ವರು ಪುಟ್ಟ ಮಕ್ಕಳು ಹಾಗೂ ಓರ್ವ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಮೂವರ ಮೃತದೇಹಗಳು ರಕ್ಷಣಾ ತಂಡಕ್ಕೆ ಪತ್ತೆಯಾಗಿದ್ದು, ಇಬ್ಬರು ನಾಪತ್ತೆಯಾಗಿಲ್ಲ.
ನೂರ್ ಶಾಹಿಸ್ತಾ ಅನ್ಸಾರಿ (ವಯಸ್ಸು 35), ಅಮಿನಾ ಆದಿಲ್ ಅನ್ಸಾರಿ (ವಯಸ್ಸು 13), ಮರಿಯಾ ಅನ್ಸಾರಿ (ವಯಸ್ಸು 7), ಹುಮಿದಾ ಅನ್ಸಾರಿ (ವಯಸ್ಸು 6) ಮತ್ತು ಅದ್ನಾನ್ ಅನ್ಸಾರಿ (ವಯಸ್ಸು 4) ಮೃತರು. ಇವರಲ್ಲಿ ಮಾರಿಯಾ ಮತ್ತು ಅದ್ನಾನ್ ಇನ್ನೂ ನಾಪತ್ತೆಯಾಗಿಲ್ಲ, ಉಳಿದ ಮೂವರ ಮೃತದೇಹಗಳು ಪತ್ತೆಯಾಗಿವೆ.
ಜಲಪಾತದಲ್ಲಿ ಇಳಿದಾಗ ಅನ್ಸಾರಿ ಕುಟುಂಬದ ಸದಸ್ಯರಿಗೆ ಡ್ಯಾಂನಿಂದ ನೀರು ಬಿಡುವುದು ತಿಳಿದಿರಲಿಲ್ಲ. ಪುಟ್ಟ ಮಕ್ಕಳೊಂದಿಗೆ ಜಲಪಾತದ ನೀರಿನಲ್ಲಿ ಆನಂದಿಸುತ್ತಾ ನಿಂತಿದ್ದಾರೆ. ಆ ಸಮಯದಲ್ಲಿ ಭೂಶಿ ಅಣೆಕಟ್ಟಿನಿಂದ ನೀರು ರಬಸದಿಂದ ಹರಿದು ಬಂದಿದೆ. ಇದರಿಂದಾಗಿ ಜಲಪಾತದ ನೀರಿನ ಮಟ್ಟ ಹೆಚ್ಚಿದೆ. ಹೊರಬರುವ ಮೊದಲೇ ನೀರಿನ ಹರಿವು ಹೆಚ್ಚಾಗಿದೆ. ಕೆಲವೇ ನಿಮಿಷಗಳಲ್ಲಿ ನೀರಿನ ಬಲವಾದ ಪ್ರವಾಹಕ್ಕೆ ಎಲ್ಲರೂ ಕೊಚ್ಚಿಹೋಗಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications